Helicopter crash in Kedarnath-ಡೆಹ್ರಾಡೂನ್: ಉತ್ತರಾಖಂಡನ ಕೇದಾರನಾಥ ಸಮೀಪ ಭೀಕರ ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು,
ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ಗಳು ,4 ಯಾತ್ರಿಗಳು ಸೇರಿದಂತೆ 6 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೇದಾರನಾಥದಿಂದ ಸುಮಾರು 2 ಕಿ.ಮೀ ದೂರದ ಗರುಡ ಚಟ್ಟಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು. ಈ ಹೆಲಿಕಾಪ್ಟರ್ ಮುಖಾಂತರ ಯಾತ್ರಿಕರನ್ನು ಕೇದಾರನಾಥ ದಿಂದ ಫಟಾಕ್ಕೆ ಗೆ ಕರೆದೊಯ್ಯುಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಹವಾಮಾನ ವೈಫಲ್ಯತೆಯಿಂದಾಗಿ ಈ ಅಪಘಾತ ಉಂಟಾಗಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ.
ರಕ್ಷಣಾ ಕಾರ್ಯಕ್ಕೆ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿವೆ . ಇಲ್ಲಿಯವರೆಗೆ ಆರು ಮೃತದೇಹಗಳನ್ನು ಶೋಧಿಸಿ ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದರೆ.
Helicopter crash in Kedarnath-Helicopter disaster in Kedarnath