ಹಿಜಾಬ್-ಕೇಸರಿ ಶಾಲು ವಿವಾದ | ಕಾಲೇಜಿಗೆ ರಜೆ ಘೋಷಿಸಿದ ಪ್ರಾಂಶುಪಾಲರು Saaksha Tv
ಉಡುಪಿ: ಹಿಜಾಬ್ ಧರಿಸುವ ವಿರೋಧವಾಗಿ ಇಂದು ನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿದ್ದಾರೆ.
ಬುರ್ಖಾ, ಹಿಜಬ್ ಧರಿಸಿ ವಿದ್ಯಾರ್ಥಿನಿಯರು ಬಂದರೆ, ಕೇಸರಿ ಪೇಟ, ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ. ಆದರೆ ಎಂಜಿಎಂ ಕಾಲೇಜಿನ ಆಡಳಿತ ಮಂಡಳಿ ಹಿಜಾಬ್ ಹಾಗೂ ಕೇಸರಿ ಶಾಲ್ ಧರಿಸಿದ ಎರಡು ಕಡೆಯವರನ್ನು ಗೇಟ್ ನಲ್ಲೇ ತಡೆದು, ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.
ಆದರೆ ವಿದ್ಯಾರ್ಥಿಗಳು ಯಾರು ಕೂಡ ಮನವೊಲಿಕೆ ಒಪ್ಪದೆ, ಬದಲಾಗಿ ಕೇಸರಿ ಶಾಲ್ ಹಾಗೂ ಹಿಜಾಬ್ ಧರಿಸಿಯೇ ಕಾಲೇಜಿನೊಳಗೆ ಬರುವುದಾಗಿ ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ ಆಡಳಿತ ಮಂಡಳಿ, ಕಾಲೇಜಿಗೆ ರಜೆ ಘೋಷಿಸಿದೆ.
ಹಿಂದೂ, ಮುಸ್ಲಿಂ ಧರ್ಮದ ಎರಡು ಕಡೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಲೇಜು ಪ್ರಾಂಶುಪಾಲ ದೇವಿದಾಸ್ ಮಾತನಾಡಿ, ಹಿಜಾಬ್ ಸಂಬಂಧಿಸಿ ಕೋರ್ಟ್ ಆದೇಶ ಬಂದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಕಾಲೇಜೆ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.