ಹಿಂದೂಗಳ ಆರಾಧ್ಯ ದೈವ ಶ್ರೀರಾಮ ನೇಪಾಳಿ – ವಿವಾದಾತ್ಮಕ ಹೇಳಿಕೆ ನೀಡಿದ ನೇಪಾಳದ ಪ್ರಧಾನಿ
ಕಠ್ಮಂಡ್, ಜುಲೈ 14: ನೇಪಾಳದ ಪ್ರಧಾನಿ ಕೆ.ಪಿ. ಒಲಿ ಶರ್ಮಾ ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸಾಂಸ್ಕ್ರೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಓಲಿ, ಭಾರತವು ‘ನಕಲಿ ಅಯೋಧ್ಯೆಯನ್ನು’ ಸೃಷ್ಟಿಸುವ ಮೂಲಕ ನೇಪಾಳದ ಸಾಂಸ್ಕೃತಿಕ ಸಂಗತಿಗಳನ್ನು ಅತಿಕ್ರಮಿಸಿದೆ ಎಂಬ ಹೇಳಿಕೆ ನೀಡಿದ್ದಾರೆ.
ವಾಲ್ಮೀಕಿ ರಾಮಾಯಣದ ನೇಪಾಳಿ ಅನುವಾದವನ್ನು ರಚಿಸಿರುವ ನೇಪಾಳದ ಆದಿಕವಿ ಭಾನುಭಕ್ತ ಅವರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಓಲಿ
ನಾವು ಸೀತೆಯನ್ನು ರಾಜಕುಮಾರ ಶ್ರೀ ರಾಮ ಕೊಟ್ಟಿದ್ದೇವೆ ಎಂದು ನಾವು ಈಗಲೂ ನಂಬುತ್ತೇವೆ ಮತ್ತು ಸೀತಾ ಮಾತೆಯನ್ನು ವರಿಸಿದ ಶ್ರೀರಾಮಚಂದ್ರ ಭಾರತೀಯ ಎಂಬ ಭ್ರಮೆಯಲ್ಲಿದ್ದಾರೆ ಆದರೆ ಶ್ರೀ ರಾಮ ಕೂಡ ನೇಪಾಳಿ, ಶ್ರೀರಾಮಚಂದ್ರನ ಅಯೋಧ್ಯಾ ನೇಪಾಳದ ವಾಲ್ಮೀಕಿ ಆಶ್ರಮದ ಬಳಿ ಇದೆ ಎಂದಿದ್ದಾರೆ.
ಜನಕಪುರ್ ನಿಂದ ಪಶ್ಚಿಮಕ್ಕೆ ಇರುವ ಬೀರಗಂಜ್ (ನೇಪಾಳದ ಜಿಲ್ಲೆ ರಾಜಧಾನಿ ಕಠ್ಮಂಡುವಿನಿಂದ 135 ಕಿ.ಮೀ ದೂರದಲ್ಲಿದೆ) ಬಳಿ ಠೋರಿ ಬಳಿ ವಾಲ್ಮೀಕಿ ಆಶ್ರಮವಿದ್ದು, ಅದರ ಬಳಿಯೇ ಅಯೋಧ್ಯಾ ನಗರಿ ಇದೆ ಮತ್ತು ರಾಮ ಅಲ್ಲಿಯ ರಾಜಕುಮಾರನಾಗಿದ್ದ. ವಾಲ್ಮೀಕಿ ನಗರ ಹೆಸರಿನ ಸ್ಥಳ, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿದ್ದರೂ, ಅದರ ಸ್ವಲ್ಪ ಪ್ರದೇಶ ನೇಪಾಳದಲ್ಲಿಯೂ ಇದೆ ಎಂದು ಓಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಭಾರತ ಹೇಳಿಕೊಳ್ಳುವ ಪ್ರದೇಶದಿಂದ ಸೀತೆಯನ್ನು ಮದುವೆಯಾಗಲು ಅಯೋಧ್ಯೆಯ ಜನರು ಜನಕ್ಪುರಕ್ಕೆ ಹೇಗೆ ಬರಲು ಸಾಧ್ಯ? ಎಂದು ಓಲಿ ಪ್ರಶ್ನಿಸಿದ್ದು, ಆ ಸಮಯದಲ್ಲಿ ಯಾವುದೇ ದೂರವಾಣಿ ಅಥವಾ ಫೋನ್ ಗಳು ಇರಲಿಲ್ಲ. ಹಾಗಿದ್ದ ಮೇಲೆ ಅಂದಿನ ಕಾಲದಲ್ಲಿ ಇದು ತಿಳಿಯುವುದು ಅಸಾಧ್ಯವಾಗಿತ್ತು? ಪ್ರಾಚೀನ ಕಾಲದಲ್ಲಿ ಹತ್ತಿರದಲ್ಲಿಯೇ ಮದುವೆಯಾಗುತ್ತಿದ್ದರು ಎಂದು ಓಲಿ ತಮ್ಮ ವಾದ ಮಂಡಿಸಿದ್ದಾರೆ.
ಅಯೋಧ್ಯೆ ರಾಜ್ಯ ರಾಜಧಾನಿ ಲಕ್ನೋದಿಂದ 135 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಒಂದು ಪಟ್ಟಣ.
ಈ ಹಿಂದೆಯೂ ಕೂಡ ಗಡಿ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿ ಶರ್ಮಾ ಒಲಿ, ಭಾರತೀಯ ಭೂಪ್ರದೇಶ ಉತ್ತರಾಖಂಡದ ಲಿಪುಲೆಖ್ ಪಾಸ್ ಮತ್ತು ಲಿಂಪಿಯಾಧುರಾ ಮತ್ತು ಕಲಾಪಣಿ ಪ್ರದೇಶಗಳನ್ನು ತಮ್ಮದೆಂದು ಪ್ರತಿಪಾದಿಸಿದ್ದರು ಮತ್ತು ಭಾರತ ಭೂಪ್ರದೇಶವನ್ನು ನೇಪಾಳದ್ದು ಎಂದು ಹೇಳುವ ಪರಿಷ್ಕೃತ ರಾಜಕೀಯ ಭೂಪಟವನ್ನು ಕೂಡ ನೇಪಾಳದ ಸಂಸತ್ ನಲ್ಲಿ ಮಂಡಿಸಿ ಅನುಮೋದನೆ ಕೂಡ ಪಡೆದಿದ್ದರು.