ಹೊನ್ನಳ್ಳಿ ಶಾಸಕನಿಗೆ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ.
ಕಳೆದ ವಿಧಾನಸಭಾ ಎಲೆಕ್ಷನ್ ನಲ್ಲಿ ನಡೆದ ಅಫಘಾತದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಎಡಗಾಲಿನ ಮಂಡಿ ನೋವಿಗೆ ಒಳಗಾಗಿದ್ದ ಎಂ ಪಿ ರೇಣುಕಾಚಾರ್ಯ ಮುಂಬೈನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಿಂದ ಪುತ್ರ ಚಂದನ್ ಜೊತೆಗೆ ಮುಂಬೈನ ರಾಮಾಬಾಯಿ ಅಂಬೇಡ್ಕರ್ ನಗರದ ಡಾ.ಎಲ್.ಎಚ್.ಹೀರಾನಂದಾನಿ ಆಸ್ಪತ್ರೆಗೆ ತೆರಳಿ, ದಾಖಲಾಗಿದ್ದರು. ಆಸ್ಪತ್ರೆಯ ತಜ್ಞ ವೈದ್ಯರಿಂದ ಶಾಸಕ ರೇಣುಕಾಚಾರ್ಯ ತಮ್ಮ ಎಡಗಾಲಿನ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಿರಾಳರಾಗಿದ್ದಾರೆ.
ಸಿ ಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ರೇಣುಕಾಚಾರ್ಯ ಅವರು ಬಹು ದಿನಗಳ ಮಂಡಿ ನೋವು ಅನುಭವಿಸುತ್ತಿದ್ದರೂ ಕ್ಷೇತ್ರಾದ್ಯಂತ ಸುತ್ತಾಟ, ಬೆಂಗಳೂರು-ಹೊನ್ನಾಳಿ ಹೀಗೆ ಸುತ್ತಾಟದ ಮಧ್ಯೆ ಅವಿಶ್ರಾಂತವಾಗಿ ಸದಾ ಚಟುವಟಿಕೆಯಲ್ಲಿ ತೊಡಗಿದ್ದರು. ತಮ್ಮ ಆತ್ಮೀಯ ಸ್ನೇಹಿತ, ಶಾಸಕ ಡಾ.ಶಿವರಾಜ ಪಾಟೀಲ್ ಸಲಹೆಯಂತೆ ಮುಂಬೈನ ಡಾ.ಹೀರಾನಂದಾನಿ ಆಸ್ಪತ್ರೆಗೆ ರೇಣುಕಾಚಾರ್ಯ ದಾಖಲಾಗಿದ್ದರು. ಡಾ.ವಿಜಯ ಶೆಟ್ಟಿ ನೇತೃತ್ವದ ತಜ್ಞ ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ. ಶಸ್ತ್ರ ಚಿಕಿತ್ಸೆಯಿಂದಾಗಿ ಶಾಸಕ ರೇಣುಕಾಚಾರ್ಯ ನಿರಾಳರಾಗಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಯಿಂದ ಆದಷ್ಟು ಬೇಗ ಗುಣಮುಖನಾಗಿ ಜನಸೇವೆಗೆ ಮರುಳಲಿದ್ದೇನೆ. ಎಂದು ರೇಣುಕಾಚಾರ್ಯ ಸ್ವತಃ ಟ್ವೀಟ್ ಮಾಡಿದ್ದಾರೆ.