ನಾನೊಬ್ಬ ಹಿಂದುಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ : ಗುಲಾಂ ನಬಿ ಆಜಾದ್
ನವದೆಹಲಿ : ನಾನೊಬ್ಬ ಹಿಂದುಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಲೀಡರ್ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಗೆ ಪ್ರಧಾನಿ ಮೋದಿ ಕಣ್ಣೀರ ವಿದಾಯ ಕೊಟ್ಟ ಬಳಿಕ ವಿದಾಯದ ಭಾಷಣ ಮಾಡಿದ ಅವರು, ಪಾಕಿಸ್ತಾನ ಮತ್ತು ಕಾಶ್ಮೀರ ವಿಚಾರಗಳನ್ನು ಪ್ರಸ್ತಾಪಿಸಿದರು. ಭಾರತಕ್ಕೆ ನಾನು ಸ್ವಾತಂತ್ರ್ಯ ಸಿಕ್ಕ ಬಳಿಕ ಹುಟ್ಟಿದ್ದೇನೆ.
ಅಂದ್ರೆ ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಅಲ್ಲಿ ಅಂದ್ರೆ ಪಾಕಿಸ್ತಾನದಲ್ಲಿ ಯಾವ ರೀತಿ ಪರಿಸ್ಥಿತಿ ಅನ್ನೋ ಬಗ್ಗೆ ಓದಿದಾಗ ನಾನೊಬ್ಬ ಹಿಂದೂಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.
ಜೊತೆಗೆ ಬೇರೆ ದೇಶದ ಮುಸಲ್ಮಾನನಿಗೆ ಹಿಂದೂಸ್ತಾನಿ ಮುಸಲ್ಮಾನನ ರೀತಿ ಗೌರವ ಸಿಗಬೇಕು ಎಂದು ಅಭಿಪ್ರಾಯಪಟ್ಟ ಆಜಾದ್, ಅಫ್ಘನಿಸ್ತಾನ, ಇರಾಕ್ ಮುಂತಾದ ಕೆಲ ಮುಸ್ಲಿಂ ದೇಶಗಳಲ್ಲಿ ಬೇರೆ ಧರ್ಮದವರಿಲ್ಲ.
ಆದರೂ ಅವರೆಲ್ಲರೂ ಅವರಿಗವರೇ ಹೊಡೆದಾಡಿಕೊಂಡು ದೇಶವೇ ನಾಶವಾಗುತ್ತಿರೋದನ್ನ ನೋಡಿದ್ದೀವಿ. ಕೆಲ ದೇಶಗಳಲ್ಲಿ ಇಂತಹ ಕೆಟ್ಟ ಸಂಸ್ಕøತಿ ಇದೆ. ಅ ಸಂಸ್ಕøತಿ ನಮ್ಮ ದೇಶದಲ್ಲಿ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಕಾಶ್ಮೀರ ವಿಚಾರವಾಗಿ ಮಾತನಾಡುತ್ತಾ ತಮ್ಮ ವಿದ್ಯಾಭ್ಯಾಸದ ದಿನಗಳನ್ನ ನೆನೆದ ಗುಲಾಂ ನಬಿ, ನಾನು ಕಾಶ್ಮೀರದ ಎಸ್ ಪಿ ಕಾಲೇಜಿನಲ್ಲಿ ಓದುತ್ತಿರುವಾಗ ಆಗಸ್ಟ್ 14 ಮತ್ತು 15 ಎರಡೂ ದಿನ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತಿತ್ತು.
ಆಗಸ್ಟ್ 14 ರಂದು ಯಾವ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೀವಿ ಅಂತ ಗೊತ್ತಾಲ್ವಾ ಎಂದು ಪ್ರಶ್ನಿಸಿದ್ರು. ಹಾಗೇ ನಮ್ಮ ಕಾಲೇಜಿನಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸೋರ ಸಂಖ್ಯೆನೇ ಜಾಸ್ತಿ ಇತ್ತು.
ಆದರೆ ನಾನು ಮತ್ತು ನನ್ನ ಕೆಲವೇ ಕೆಲವು ಸ್ನೇಹಿತರು ಕಾಲೇಜಿನ ಸಿಬ್ಬಂದಿ, ಪ್ರಿನ್ಸಿಪಾಲ್ ಜೊತೆ ಸೇರಿಕೊಂಡು 15ನೇ ತಾರೀಕು ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿದ್ವಿ. ಅದಾದ ಬಳಿಕ ಒಂದು ವಾರ ನಾವು ಕಾಲೇಜಿಗೆ ಹೋಗುತ್ತಿರಲ್ಲಿಲ್ಲ.
ಯಾಕೆಂದ್ರೆ ಅವರೆಲ್ಲ ಸೇರಿ ನಮ್ಮನ್ನ ಹೊಡೀತಿದ್ದರು ಎಂದು ಆಗಿನ ಕಾಶ್ಮೀರ ಮತ್ತು ತಮ್ಮ ಕಾಲೇಜಿನ ದಿನಗಳ ಬಗ್ಗೆ ಮೆಲುಕು ಹಾಕಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇದಕ್ಕೆ ಮುನ್ನಾ ಮಾತನಾಡಿದ್ದ ಮೋದಿ, ಗುಲಾಂ ನಬಿ ಆಜಾದ್ ಅವರ ವ್ಯಕ್ತಿತ್ವವನ್ನು ಹಾಡಿ ಹೊಗಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel