ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮಂಡ್ಯದ ಟಿಕೆಟ್ ನನಗೆ ಸಿಗಲಿದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ನಗರದಲ್ಲಿ ಆಪ್ತರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಪ್ರದಾನಿ ಅವರು ನನ್ನ ಪರ ಇದ್ದಾರೆ. ಹೀಗಾಗಿ ಅವರು ಬೇರೆಯವರಿಗೆ ಟಿಕೆಟ್ ನೀಡುತ್ತಾರೆ ಎಂಬುವುದು ಸುಳ್ಳು. 5 ವರ್ಷಗಳ ಜರ್ನಿ ಮುಗಿದಿದೆ. ಸಬೆಯಲ್ಲಿ ಮುಂದಿನ ಚುನಾವಣೆ ಕುರಿತು ಚರ್ಚೆ ನಡೆಸಲಾಗಿದೆ. ದರ್ಶನ್ ಕೂಡ ಸಭೆಯಲ್ಲಿ ಮಾತನಾಡಿದ್ದಾರೆ. ಎಲ್ಲರೂ ಜೊತೆಗೆ ಹೋಗೋಣ ಎಂದು ದರ್ಶನ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸಚ್ಚಿದಾನಂದ ಸಂಧಾನ ವಿಚಾರ ಚರ್ಚೆ ಆಗ್ತಿರುವ ಬಗ್ಗೆ ಗೊತ್ತಿಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಬೇರೆ ಆಗಿದ್ದೇವೆ ಅಂತಾ ಸಚ್ಚಿನೂ ಹೇಳಿಲ್ಲ, ನಾನು ಹೇಳಿಲ್ಲ ಎಂದು ಹೇಳಿದ್ದಾರೆ. ನಾನು ಪಕ್ಷೇತರವಾಗಿ ಸ್ಪರ್ಧಿಸುವ ಕುರಿತು ಆಲೋಚನೆ ಮಾಡಿಲ್ಲ. ಬೆಂಬಲಿಗರು, ಆಪ್ತರು ಮಂಡ್ಯ ಬಿಟ್ಟು ಹೋಗಬೇಡಿ ಎನ್ನುತ್ತಿದ್ದಾರೆ. ಬಿಜೆಪಿಯವರು ಸೂಕ್ತ ಸಮಯದಲ್ಲಿ ಅನೌನ್ಸ್ ಮಾಡ್ತಾರೆ. ಪಾಸಿಟಿವ್ ಆಗಿ ಅನೌನ್ಸ್ ಇರುತ್ತೆ ಅಂತಾ ನಾನು ಅಂದುಕೊಂಡಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದರು.