ನಾನೇ ಸಿಎಂ ಆಗುತ್ತೇನೆ : ಯತ್ನಾಳ್
ವಿಜಯಪುರ: ಪ್ರಧಾನಿ ಮನಸ್ಸು ಮಾಡಿದರೆ ನಾನೇ ಸಿಎಂ ಆಗುತ್ತೇನೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ ಒಪ್ಪಿದರೆ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ನಾನು ಮುಖ್ಯಮಂತ್ರಿ ಆಗಬಾರದಾ? ನನ್ನ ಮೇಲೆ ಗಣಿ, ಅಕ್ರಮ, ಆಸ್ತಿ, ಜಾತಿ ಆರೋಪ ಯಾವುದೂ ಇಲ್ಲ. ಪ್ರಧಾನಿ ಮನಸ್ಸು ಮಾಡಿದರೆ ನಾನೇ ಸಿಎಂ ಆಗುತ್ತೇನೆ ಎಂದು ಹೇಳಿದರು.
ಅಲ್ಲದೇ ಚುನಾವಣೆಯ ನೇತೃತ್ವವನ್ನು ನನಗೆ ವಹಿಸಿದರೆ 130 ಸೀಟ್ ತರುವ ತಾಕತ್ತು ನನಗಿದೆ ಎಂದು ಶಾಸಕ ಯತ್ನಾಳ್ ವಿಶ್ವಾಸವ್ಯಕ್ತಪಡಿಸಿದರು.