ADVERTISEMENT
Friday, July 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಪ್ರತಿ ದಿನ ಟಿಫನ್ ಗೆ ವಿವಿಧ ಬಗೆಯ ಇಡ್ಲಿ , ದೋಸೆಗಳನ್ನ ಮಾಡಿ – ಬೋರ್ ಆಗದ ರೆಸಿಪಿಗಳು..!

Namratha Rao by Namratha Rao
January 2, 2022
in Cooking, Newsbeat, ಅಡುಗೆ
Saakshatv cooking recipe how to prepare masala podi idli
Share on FacebookShare on TwitterShare on WhatsappShare on Telegram

ಪ್ರತಿ ದಿನ ಟಿಫನ್ ಗೆ ವಿವಿಧ ಬಗೆಯ ಇಡ್ಲಿ , ದೋಸೆಗಳನ್ನ ಮಾಡಿ – ಬೋರ್ ಆಗದ ರೆಸಿಪಿಗಳು..!

ಮೊಳಕೆ ಬರಿಸಿದ ಹೆಸರು ಬೇಳೆ ದೋಸೆ

ಬೇಕಾಗುವ ಪದಾರ್ಥಗಳು 

Related posts

mohammad salah

fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆

July 10, 2026
ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

July 10, 2026

3/4 ಕಪ್ ಮೊಳಕೆ ಬರಿಸಿದ ಹೆಸರು ಬೇಳೆ
3/4 ಕಪ್ ನೆನೆಸಿದ ನವಣೆ ಅಕ್ಕಿ
1 ಇಂಚು ತಾಜಾ ಶುಂಠಿ ತುಂಡು
1-2 ಹಸಿರು ಮೆಣಸಿನಕಾಯಿಗಳು
1 ಟೀಸ್ಪೂನ್ ಜೀರಿಗೆ
ರುಚಿಗೆ ತಕ್ಕಂತೆ ಉಪ್ಪು
ತಾಜಾ ಕೊತ್ತಂಬರಿ ಸೊಪ್ಪು
ಎಣ್ಣೆ/ತುಪ್ಪ
Saakshatv cooking recipes moong dosa

ನವಣೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಕನಿಷ್ಠ 2-3 ಗಂಟೆಗಳ ಕಾಲ ನೆನೆಸಿಡಿ.
ನೆನೆದ ನವಣೆ ಅಕ್ಕಿಯನ್ನು ನೀರಿನಿಂದ ಸೋಸಿ. ಮಿಕ್ಸರ್ ಗೆ ನವಣೆ ಅಕ್ಕಿ, ಹೆಸರು ಕಾಳು, ಶುಂಠಿ, ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ರುಬ್ಬಿಕೊಳ್ಳಿ. ಸುಮಾರು 1/2 ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿ.

ದೋಸೆ ಕಾವಲಿಯನ್ನು ಬಿಸಿ ಮಾಡಿ. ಕಾದಾಗ ಸ್ವಲ್ಪ ಎಣ್ಣೆ/ತುಪ್ಪ ಹಾಕಿ

ನಂತರ ರುಬ್ಬಿಕೊಂಡ ಹಿಟ್ಟನ್ನು ತೆಗೆದುಕೊಂಡು, ಕಾವಲಿ ಮೇಲೆ ಬಿಡಿ. ವೃತ್ತಾಕಾರದಲ್ಲಿ ಹರಡಿ.

ಎಣ್ಣೆಯನ್ನು ಚಿಮುಕಿಸಿ, ಎರಡು ಬದಿಗಳನ್ನು ಬೇಯಿಸಿ.

ನಿಮಗಿಷ್ಟವಾದ ಚಟ್ನಿಯೊಂದಿಗೆ ಬಿಸಿಯಾಗಿ ನವಣೆ ಅಕ್ಕಿ ಹೆಸರು ಬೇಳೆ ದೋಸೆ ಸೇವಿಸಿ .

ಇದು ರುಚಿಕರವಾದ ಮತ್ತು ಎಲ್ಲಾ ವಯಸ್ಸಿನವರಿಗೆ ಆರೋಗ್ಯಕರ ಉಪಹಾರವಾಗಿದೆ.

ಬಟಾಣಿ ರವೆ ಇಡ್ಲಿ  

ಬೇಕಾಗುವ ಸಾಮಗ್ರಿಗಳು

ಬಟಾಣಿ – 1ಕಪ್
ಸಾಸಿವೆ – 1 ಚಮಚ
ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು ಸ್ವಲ್ಪ
ಸಣ್ಣಗೆ ಕತ್ತರಿಸಿದ ಈರುಳ್ಳಿ 2
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ – 6
ಚಿರೋಟಿ ರವೆ -1 ಕಪ್
ಗಟ್ಟಿ ಮೊಸರು – 1 ಕಪ್
ತುರಿದ ಕ್ಯಾರೆಟ್ – 1/2ಕಪ್
ಶುಂಠಿ – 1 ಇಂಚು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು Saakshatv cooking recipes Rava idli

Saakshatv cooking recipes Rava idli

ಮಾಡುವ ‌ವಿಧಾನ

ಮೊದಲಿಗೆ ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಳಿಕ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಚಿರೋಟಿ ರವೆ ಸೇರಿಸಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿಯಿರಿ.

Saakshatv cooking recipes Rava idli

ಈಗ ಅದಕ್ಕೆ ಕ್ಯಾರೆಟ್, ಸಣ್ಣಗೆ ತುರಿದ ಶುಂಠಿ, ಬೇಯಿಸಿದ ಬಟಾಣಿ, ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. 20 ನಿಮಿಷ ಹಾಗೆಯೇ ಬಿಡಿ. ಬಳಿಕ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ. ಈಗ ರುಚಿಕರವಾದ ಬಟಾಣಿ ರವೆ ಇಡ್ಲಿ ಸವಿಯಲು ರೆಡಿ.

ಇನ್’ಸ್ಟಂಟ್ (instant) ಸಬ್ಬಕ್ಕಿ /ಸಾಬುದಾನ /ಸಾಗು ಇಡ್ಲಿ

ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ/ಸಾಗು/ಸಾಬುದಾನ – 1 ಕಪ್
ಮೊಸರು – 1 ಕಪ್
ಇಡ್ಲಿ ರವೆ ಅಥವಾ ಅಕ್ಕಿ ರವೆ – 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು

 

ಮಾಡುವ ವಿಧಾನ
ಸಬ್ಬಕ್ಕಿ/ಸಾಗು/ಸಾಬುದಾನವನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಮೂರು ಗಂಟೆ ಕಾಲ ಹಾಗೆಯೇ ಬಿಡಿ. ಇಡ್ಲಿ ರವೆ/ಅಕ್ಕಿ ರವೆಯನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಅರ್ಧ ಗಂಟೆ ಹಾಗೆಯೇ ಬಿಡಿ..
Saakshatv cooking recipe sabbakki idli

ನಂತರ ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ನೆನೆಸಿದ ಸಬ್ಬಕ್ಕಿ,  ರವೆಯನ್ನು ಸೇರಿಸಿ, ಮೊಸರನ್ನು ಹಾಕಿ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣಕ್ಕೆ ಉಪ್ಪು ಹಾಕಿ, ಅಗತ್ಯವಿದ್ದರೆ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅರ್ಧ ಗಂಟೆ ಕಳೆದ ಬಳಿಕ ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಸುಮಾರು ಇಪ್ಪತ್ತು ನಿಮಿಷ ಬೇಯಿಸಿ. ತುಂಬಾ ರುಚಿಕರವಾದ ಆರೋಗ್ಯಕರ ಇಡ್ಲಿ ಚಟ್ನಿಯೊಂದಿಗೆ ಸವಿಯಲು ಸಿದ್ಧ.

ಧಿಡೀರ್ (instant) ಅವಲಕ್ಕಿ ಉತ್ತಪ್ಪ

ಬೇಕಾಗುವ ಸಾಮಗ್ರಿಗಳು :

ಅವಲಕ್ಕಿ 1/2 ಕಪ್
ಮೊಸರು 1/2 ಕಪ್
ರವೆ 1/2 ಕಪ್
ಚಿಕ್ಕದಾಗಿ ಕತ್ತರಿಸಿದ ತರಕಾರಿಗಳು (ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಹಸಿಮೆಣಸು, ಬೀನ್ಸ್)
ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ
Saakshatv cooking recipe poha uttappa

ಮಾಡುವ ವಿಧಾನ :
ಮೊದಲಿಗೆ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ. ಬಳಿಕ ನೆನೆದ ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಉಪ್ಪು ಸೇರಿಸಿ ‌20 ನಿಮಿಷ ಹಾಗೆ ಬಿಡಿ.
Saakshatv cooking recipe poha uttappa
ಇನ್ನೊಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ತರಕಾರಿಗಳಿಗೆ ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಿ ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ದೋಸೆ ಕಾವಲಿಯನ್ನು ಬಿಸಿ ಮಾಡಿ. ಮಾಡಿಟ್ಟುಕೊಂಡ ಅವಲಕ್ಕಿ ಹಿಟ್ಟನ್ನು ಕಾವಲಿ ಮೇಲೆ ದೋಸೆಯಂತೆ ಹುಯ್ಯಿರಿ. ಬಳಿಕ ದೋಸೆ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಯನ್ನು ಉದುರಿಸಿ. ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ರುಚಿಯಾದ ಅವಲಕ್ಕಿ ಉತ್ತಪ್ಪ ಸವಿಯಲು ರೆಡಿ.

ನೀರು ದೋಸೆ

ಬೇಕಾಗುವ ಸಾಮಗ್ರಿಗಳು

2 ಕಪ್ ದೋಸೆ ಅಕ್ಕಿ
1 ಕಪ್ ತೆಂಗಿನಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
ನೀರು
Saakshatv cooking recipe neeru dosa

ಮಾಡುವ ವಿಧಾನ

1. ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು 2 ರಿಂದ 3 ಗಂಟೆಗಳ ಕಾಲ ನೆನೆಸಿ.

2. ನಂತರ ಮಿಕ್ಸಿ ಜಾರಿನಲ್ಲಿ ಅಕ್ಕಿ, ತೆಂಗಿನಕಾಯಿ ತುರಿ , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಾಕಷ್ಟು ನೀರನ್ನು ಸೇರಿಸಿ ನಯವಾಗಿ ಅರೆಯಿರಿ.

3. ಬಳಿಕ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ, ಅದು ಹಾಲಿನಂತೆ ತೆಳ್ಳಗಾಗುವಷ್ಟು ನೀರು ಸೇರಿಸಿ.

Saakshatv cooking recipe neeru dosa

4. ದೋಸೆ ಕಾವಲಿಯನ್ನು ಬಿಸಿ ಮಾಡಿ, ಎಣ್ಣೆ ಹಚ್ಚಿ, ಅದರ ಮೇಲೆ ಹಿಟ್ಟನ್ನು ಚೆಲ್ಲಿದಂತೆ ಹರಡಿ. ಒಂದು ಬದಿಯನ್ನು ಬೇಯಿಸಿ ಎರಡು ‌ಪದರ ಮಾಡಿ ತೆಗೆಯಿರಿ.

ಬಿಸಿ ಬಿಸಿಯಾದ ನೀರು ದೋಸೆಯನ್ನು ಚಟ್ನಿ ಅಥವಾ ರಸಾಯನದೊಂದಿಗೆ ಸವಿಯಿರಿ.

ಧಿಡೀರ್ (instant) ಟೊಮೆಟೊ ದೋಸೆ

ಬೇಕಾಗುವ ಪದಾರ್ಥಗಳು

1 ಕಪ್ ಅಕ್ಕಿ
1 ಟೀಸ್ಪೂನ್ ಉದ್ದಿನ ಬೇಳೆ
3 ಟೊಮೆಟೊ
1/2 ಕ್ಯಾರೆಟ್
3 ಒಣಗಿದ ಕೆಂಪು ಮೆಣಸು
8 ಕರಿಬೇವಿನ ಎಲೆಗಳು
1/2 ಇಂಚು ಶುಂಠಿ
3 ಟೀಸ್ಪೂನ್ ತೆಂಗಿನಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
1/4 ಚಮಚ ಜೀರಿಗೆ
2 ಟೀಸ್ಪೂನ್ ಅಡುಗೆ ಎಣ್ಣೆ

Saakshatv cooking recipe how to prepare tomato dose

ಮಾಡುವ ವಿಧಾನ

ಮೊದಲು ಅಕ್ಕಿ ಮತ್ತು ಬೇಳೆಯನ್ನು ತೊಳೆದು ‌3 ಗಂಟೆಗಳ ಕಾಲ ನೆನೆಸಿಡಿ. ನಂತರ ಎಲ್ಲಾ ತರಕಾರಿಗಳನ್ನು ಕತ್ತರಿಸಿ ( ಒಣಗಿದ ಕೆಂಪು ಮೆಣಸಿನಕಾಯಿ ಇಲ್ಲದಿದ್ದರೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ ಬಳಸಿ)

ಮೊದಲು ಎಲ್ಲಾ ತರಕಾರಿಗಳು ಮತ್ತು ತೆಂಗಿನಕಾಯಿ ತುರಿಯನ್ನು ನೀರು ಸೇರಿಸದೆ ರುಬ್ಬಿ.

ಇದಕ್ಕೆ ಅಕ್ಕಿ, ಬೇಳೆ ಮತ್ತು ಸ್ವಲ್ಪ ನೀರು ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿ.

ನಂತರ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಉಪ್ಪು ಮತ್ತು ಜೀರಿಗೆ ಸೇರಿಸಿ. 30 ನಿಮಿಷಗಳ ಕಾಲ ಹಿಟ್ಟನ್ನು ಹಾಗೆಯೇ ‌ಇಡಿ.

ಬಳಿಕ ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ಹಾಕಿ ವೃತ್ತಾಕಾರವಾಗಿ ಹರಡಿ. ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ.

ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ ತೆಗೆಯಿರಿ. ‌

ತೆಂಗಿನಕಾಯಿ ಚಟ್ನಿ ಅಥವಾ ಪುದೀನ ಚಟ್ನಿಯೊಂದಿಗೆ ಬಿಸಿಯಾದ ದೋಸೆಯನ್ನು ಸವಿಯಿರಿ.

ಮಸಾಲೆ ಪೋಡಿ ಇಡ್ಲಿ

ಬೇಕಾಗುವ ಸಾಮಗ್ರಿಗಳು

ಉಳಿದ ಇಡ್ಲಿಗಳು
ಕೆಂಪು ಮೆಣಸು -5
ಕಡ್ಲೆಬೇಳೆ – 1/4 ಕಪ್
ಉದ್ದಿನಬೇಳೆ -1/4 ಕಪ್
ಅಕ್ಕಿ -1 ಚಮಚ
ಎಳ್ಳು -1 ಚಮಚ
ರುಚಿಗೆ ‌ತಕ್ಕಷ್ಟು ಉಪ್ಪು

Saakshatv cooking recipe how to prepare masala podi idli

ಮಾಡುವ ವಿಧಾನ

ಒಂದು ಕಡಾಯಿ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ‌ನಂತರ ಕೆಂಪು ಮೆಣಸು, ಕಡ್ಲೆಬೇಳೆ, ಉದ್ದಿನಬೇಳೆ, ಅಕ್ಕಿ, ಎಳ್ಳು ಸೇರಿಸಿ ಚೆನ್ನಾಗಿ ಹುರಿಯಿರಿ. ‌ನಂತರ ಇದನ್ನು ತಣ್ಣಗಾಗಿಸಿ.
ಬಳಿಕ ಮಿಕ್ಸರ್ ಜಾರ್ ಗೆ ಇದನ್ನು ‌ಹಾಕಿ, ಸ್ವಲ್ಪ ಇಂಗು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಹುಡಿ ಮಾಡಿ.

ನಂತರ ತವಾ ಬಿಸಿ ‌ಮಾಡಿ ಸ್ವಲ್ಪ ತುಪ್ಪ ‌ಸವರಿ.‌ ಇಡ್ಲಿಯ ಎರಡೂ ಬದಿಗಳನ್ನು ಅರ್ಧ ನಿಮಿಷ ಹುರಿಯಿರಿ.‌ ನಂತರ ರುಬ್ಬಿದ ಪುಡಿಯನ್ನು ಸೇರಿಸಿ. ಇಡ್ಲಿಗೆ ಮಸಾಲೆ ಹುಡಿಯನ್ನು‌ ಚೆನ್ನಾಗಿ ‌ಬೆರೆಸಿ. ಈಗ ಮಸಾಲೆ ಪೋಡಿ ಇಡ್ಲಿ ಸವಿಯಲು ಸಿದ್ಧವಾಗಿದೆ. ‌ಇದನ್ನು ಬಿಸಿಯಾಗಿ ಬೆಳಿಗ್ಗೆಯ ಬ್ರೇಕ್ ಫಾಸ್ಟ್ ಆಗಿ‌ ಅಥವಾ ಸಂಜೆಯ ಸ್ಯಾಕ್ಸ್ ಆಗಿ‌ ಸೇವಿಸಬಹುದು.

ವೆಜಿಟೇಬಲ್ ದೋಸೆ

ಬೇಕಾಗುವ ಸಾಮಾಗ್ರಿಗಳು
ದೋಸೆ ಅಕ್ಕಿ – 1 ಕಪ್
ಉದ್ದಿನಬೇಳೆ – 1/4 ಕಪ್
ಬೇಯಿಸಿದ ಆಲೂಗಡ್ಡೆ – 1
ಮೊಸರು – 1 ಕಪ್
ಈರುಳ್ಳಿ – 1
ಟೊಮೆಟೋ – 1
ಕ್ಯಾರೆಟ್ – 1
ಸೋಡಾ ಹುಡಿ – ಚಿಟಿಕೆಯಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ
ಮೊದಲಿಗೆ ಅಕ್ಕಿ ಮತ್ತು ಉದ್ದಿನಬೇಳೆಯನ್ನು 3 – 4 ಗಂಟೆಗಳ ಕಾಲ ನೆನೆ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣಕ್ಕೆ ಉಪ್ಪು, ಸೋಡಾ ಹುಡಿ, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋ, ತುರಿದ ಕ್ಯಾರೆಟ್, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯವಿರುವಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ತವಾವನ್ನು ಬಿಸಿ ಮಾಡಿ ದೋಸೆ ಹಿಟ್ಟನ್ನು ಹುಯ್ಯಿರಿ. ಎಣ್ಣೆ ಹಾಕಿ ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ಕಾಯಿ ಚಟ್ನಿ ಜೊತೆ ವೆಜಿಟೇಬಲ್ ದೋಸೆ ಸವಿಯಿರಿ.

ಮೆಂತೆ ಸೊಪ್ಪಿನ ದೋಸೆ

ಬೇಕಾಗುವ ಸಾಮಗ್ರಿಗಳು

ದೋಸೆ ಅಕ್ಕಿ – 2 ಕಪ್
ಉದ್ದಿನಬೇಳೆ – 1/2 ಕಪ್
ಮೆಂತೆ – 1 ಚಮಚ
ಮೆಂತೆ ಸೊಪ್ಪು – 1 ಕಟ್ಟು
ರುಚಿಗೆ ತಕ್ಕಷ್ಟು ‌ಉಪ್ಪು

ಮಾಡುವ ವಿಧಾನ
Saakshatv cooking recipe prepare menthe soppu dose
ಮೊದಲಿಗೆ ದೋಸೆ ಅಕ್ಕಿ, ಮೆಂತೆಯನ್ನು ತೊಳೆದು ‌4 ಗಂಟೆಗಳ ಕಾಲ ನೀರಲ್ಲಿ ನೆನೆಸಿಡಿ. ಉದ್ದಿನಬೇಳೆಯನ್ನು ಸಾಕಷ್ಟು ನೀರಿನಲ್ಲಿ 2 ಗಂಟೆಗಳ ಕಾಲ ‌ನೆನೆಸಿಡಿ. ನೀರನ್ನು ಸೋಸಿ ದೋಸೆ ಅಕ್ಕಿ ಮತ್ತು ಮೆಂತೆ ಹಾಗೂ ಉದ್ದಿನಬೇಳೆಯನ್ನು ಚೆನ್ನಾಗಿ ರುಬ್ಬಿ.‌ ರಾತ್ರಿಯಿಡೀ ಹುದುಗಲು ಬಿಡಿ. ಮರುದಿನ ಬೆಳಗ್ಗೆ ಹಿಟ್ಟಿಗೆ ಉಪ್ಪು ಸೇರಿಸಿ ಕಲಸಿ.‌ ಮೆಂತೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸೇರಿಸಿ.
ದೋಸೆ ತವಾಗೆ ಎಣ್ಣೆ ಸವರಿ ‌‌ದೋಸೆ ‌ಹಿಟ್ಟನ್ನು ಹೊಯ್ದು ವೃತ್ತಾಕಾರವಾಗಿ ‌ಹರಡಿ. ಬಿಸಿಯಾದ ಗರಿಗರಿ ದೋಸೆಯನ್ನು ಚಟ್ನಿ ಜೊತೆಗೆ ಸವಿಯಿರಿ.

Tags: #saakshatvcookingdosafood recipiesidli
ShareTweetSendShare
Join us on:

Related Posts

mohammad salah

fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆

by admin
July 10, 2026
0

ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ.. ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ.. ಹೀಗೂ ಇದೆಯಾ ಅನ್ನೋ ಯೋಚನೆ..! 🚀🔥⚽ ಇದು ಒಂದು ಸಣ್ಣ ಹಳ್ಳಿಯ ಕೆಳ...

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

by Shwetha
July 10, 2026
0

ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿರುವ ಒಂದು ಹೇಳಿಕೆ...

ಇರಾನ್ ಮೇಲೆ ಮತ್ತೆ ಅಮೆರಿಕ ದಾಳಿ?; ಇರಾನ್ ಆರೋಪ, ಅಮೆರಿಕದಿಂದ ಇನ್ನೂ ಪ್ರತಿಕ್ರಿಯೆ ಇಲ್ಲ

ಇರಾನ್ ಮೇಲೆ ಮತ್ತೆ ಅಮೆರಿಕ ದಾಳಿ?; ಇರಾನ್ ಆರೋಪ, ಅಮೆರಿಕದಿಂದ ಇನ್ನೂ ಪ್ರತಿಕ್ರಿಯೆ ಇಲ್ಲ

by Shwetha
July 10, 2026
0

ಇರಾನ್‌ನ ಪ್ರಕಾರ, ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಮುನ್ನ ಮಶ್ಹಾದ್ ನಗರದ ಸಮೀಪದ ರೈಲ್ವೆ ಸೇತುವೆ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಸೇತುವೆಗೆ ಹಾನಿಯಾಗಿದೆ ಎಂದು...

ಮೇಕೆದಾಟು ಪಾದಯಾತ್ರೆ ಕೇವಲ ಚುನಾವಣಾ ನಾಟಕವೇ?: ತಾಕತ್ತಿದ್ದರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ; ಹೈಕಮಾಂಡ್ ಗೆ ಹೆದರಿ ಕನ್ನಡಿಗರ ಹಿತ ಬಲಿಗೊಟ್ಟರಾ ಡಿಕೆಶಿ?-ಡಿಕೆಶಿ ಮೌನದ ವಿರುದ್ಧ ಆರ್ ಅಶೋಕ್ ವಾಗ್ದಾಳಿ!

ಪರಿಶೀಲನೆ ನೆಪದಲ್ಲಿ ಕಾಲಹರಣ ಬೇಡ, ಸಾಲಮನ್ನಾ ಮಾಡಿ ರೈತರನ್ನು ಬದುಕಿಸಿ -ರೈತರ 50 ಸಾವಿರ ರೂಪಾಯಿ ವರೆಗಿನ ಸಾಲ ತಕ್ಷಣ ಮನ್ನಾ ಮಾಡಿ: ರಾಜ್ಯ ಸರ್ಕಾರಕ್ಕೆ ಆರ್ ಅಶೋಕ್ ಒತ್ತಾಯ

by Shwetha
July 10, 2026
0

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಮತ್ತು ಪ್ರವಾಹದಿಂದ ಕಂಗಾಲಾಗಿರುವ ರೈತರ ನೆರವಿಗೆ ತಕ್ಷಣವೇ ಧಾವಿಸಬೇಕು ಎಂದು ಒತ್ತಾಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸಂಕಷ್ಟದಲ್ಲಿರುವ ಅನ್ನದಾತರ...

ಪದವಿ, PG ಕಾಲೇಜುಗಳಲ್ಲಿ ವಾರಕ್ಕೆ 4 ಗಂಟೆ ಕನ್ನಡ ಕಡ್ಡಾಯಕ್ಕೆ ಶಿಫಾರಸು

ಪದವಿ, PG ಕಾಲೇಜುಗಳಲ್ಲಿ ವಾರಕ್ಕೆ 4 ಗಂಟೆ ಕನ್ನಡ ಕಡ್ಡಾಯಕ್ಕೆ ಶಿಫಾರಸು

by Shwetha
July 10, 2026
0

ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ (PG) ಕಾಲೇಜುಗಳಲ್ಲಿ ವಾರಕ್ಕೆ 4 ಗಂಟೆಗಳ ಕನ್ನಡ ಬೋಧನೆಯನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram