ಹೃದ್ರೋಗಿಗಳು ಬೇಸಿಗೆಯಲ್ಲಿ ಈ ಲಕ್ಷಣ ಕಂಡು ಬಂದರೆ ನಿರ್ಲಕ್ಷಿಸದೇ ಮುನ್ನೆಚ್ಚೆರಿಕೆ ಕೈಕೊಳ್ಳಿ..
ಬದಲಾಗುತ್ತಿರುವ ಹವಾಮಾನದ ಪರಿಣಾಮ ಬೇಸಿಗೆಯ ಕಾವು ಹೆಚ್ಚಾಗುತ್ತಿರುವರುವ ಜೊತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಬಿಸಿಲಿನ ಉಷ್ಣತೆ ಹೃದ್ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೃದ್ರೋಗಿಗಳು ಬೇಸಿಗೆಯಲ್ಲಿ ಅನುಸರಿಸಬೇಕಾದ ಆರೋಗ್ಯಕರ ಕ್ರಮಗಳ ಕುರಿತು ನಾವು ನಿಮಗಿಂದು ತಿಳಿಸುತ್ತೇವೆ.
ಈ ಬೇಸಿಗೆಯಲ್ಲಿ ನಿಮ್ಮ ದೇಹ ಈ ಲಕ್ಷಣಗಳನ್ನ ಅನುಭವಿಸುತ್ತಿದ್ದರೆ ನೀವು ಮುನ್ನೆಚ್ಚೆರಿಕೆ ತೆಗದುಕೊಳ್ಳಬೇಕಾಗುತ್ತದೆ.
ಸುಸ್ತು
ಬದಲಾಗುತ್ತಿರುವ ಋತುಮಾನಗಳಿಂದಾಗಿ ಜನರು ಬೇಗನೆ ಸುಸ್ತಾಗುತ್ತಾರೆ. ನೀವು ಬೇಸಿಗೆಯಲ್ಲಿ ಅತಿಯಾದ ಸುಸ್ತು ಅನುಭವಿಸುತ್ತಿದ್ದಾರೆ ಜಾಗರೂಕರಾಗಿರಿ. ಇದು ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಬಹುದು. ಹೃದಯ ಸ್ತಂಭನದಿಂದಾಗಿ, ವ್ಯಕ್ತಿಯ ದೇಹದಲ್ಲಿ ರಕ್ತದ ಪ್ರಮಾಣವು ಕಡಿಮೆಯಾಗುತ್ತದೆ, ಆದರೆ ಜನರು ಅದನ್ನು ಬಿಸಿಲಿನ ಬಳಲಿಕೆ ಎಂದು ನಿರ್ಲಕ್ಷಿಸುತ್ತಾರೆ. ನೀವು ಅಂತಹ ತಪ್ಪು ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಮೂರ್ಛೆ ಹೋಗುವುದು
ಬೇಸಿಗೆಯಲ್ಲಿ ಜನರು ಸಾಮಾನ್ಯವಾಗಿ ಮೂರ್ಛೆ ಹೋಗುತ್ತಾರೆ, ದೇಹದಲ್ಲಿ ನೀರಿನ ಕೊರತೆ ಅಥವಾ ಸೂರ್ಯನ ಬಿಸಿಲಿನ ಪ್ರಖರತೆ ಎಂದು ಅರ್ಥಮಾಡಿಕೊಳ್ಳುತ್ತಾರೆ. ನಮ್ಮ ಹೃದಯ ರಕ್ತವನ್ನು ಸಾಮಾನ್ಯ ಹರಿವಿನಲ್ಲಿ ಪರಿಚಲನೆ ಮಾಡಲು ಸಾಧ್ಯವಾಗದಿದ್ದಾಗ, ಹೃದಯ ರೋಗಿಗಳು ಪ್ರಜ್ಞಾಹೀನ ಪರಿಸ್ಥಿತಿಗೆ ಹೋಗುವ ಸಾಧ್ಯತೆ ಇರುತ್ತದೆ. ಗಮನಿಸಬೇಕಾದ ವಿಷಯವೆಂದರೆ ನೀವು ಈ ಸಮಸ್ಯೆಯ ಬಗ್ಗೆ ಸಮಯಕ್ಕೆ ಗಮನ ಹರಿಸದಿದ್ದರೆ, ಹೃದಯಾಘಾತದ ಅಪಾಯವೂ ಇದೆ.
ಮೈಗ್ರೇನ್
ಹೆಚ್ಚುತ್ತಿರುವ ಶಾಖದಿಂದಾಗಿ ಮೈಗ್ರೇನ್ ಸಮಸ್ಯೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಬಿಸಿಲಲ್ಲ. ವಾಸ್ತವವಾಗಿ, ಈ ಋತುವಿನಲ್ಲಿ ಮೈಗ್ರೇನ್ ರೋಗಿಗಳ ಹೃದಯದ ಮೇಲೆ ಹೆಚ್ಚಿನ ಒತ್ತಡ ತರುತ್ತದೆ. ಬಿಸಿಲಿಗೆ ಮೈ ಒಡ್ಡಿಕೊಳ್ಳುವುದರಿಂದ ಹೃದಯದ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು.
ನಿರ್ಜಲೀಕರಣ
ಸಾಮಾನ್ಯವಾಗಿ ಜನರು ನಿರ್ಜಲೀಕರಣವನ್ನು ನೀರಿನ ಕೊರತೆ ಎಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಮಾರಕವಾಗಬಹುದು. ನಿರ್ಜಲೀಕರಣದಿಂದ ಬಳಲುತ್ತಿರುವ ಜನರು ಬೇಸಿಗೆಯ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಾರೆ.
ಏನ್ ಮಾಡಬೇಕು
ನೀವು ಪ್ರತಿದಿನ ಹೆಚ್ಚು ಆಯಾಸವನ್ನು ಅನುಭವಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ, ವೈದ್ಯರನ್ನು ಸಂಪರ್ಕಿಸಿ.
ಯಾರಿಗಾದರೂ ಮೂರ್ಛೆ ಬಿದ್ದರೆ ನೀರು, ಜ್ಯೂಸ್ ಕೊಟ್ಟು ಬಟ್ಟೆ ಬಿಚ್ಚಿ ಉಸಿರಾಡಲು ಅನುವು ಮಾಡಿಕೊಡಿ
ಬೆಳಗಿನ ಉಪಾಹಾರವು ಅವಶ್ಯಕವಾಗಿದೆ, ಬೆಳಗಿನ ಉಪಾಹಾರದಲ್ಲಿ ಮೊಳಕೆಕಾಳು ತೆಗೆದುಕೊಳ್ಳಿ.
ತಣ್ಣೀರಿನಿಂದ ಸ್ನಾನ ಮಾಡಿ, ಹೃದ್ರೋಗದಿಂದಲೂ ಪ್ರಯೋಜನವಾಗುತ್ತದೆ.
ಹೃದ್ರೋಗಿಗಳು ಬೇಸಿಗೆಯಲ್ಲಿ 6-7 ಲೀಟರ್ ನೀರು ಕುಡಿಯಬೇಕು.
ಏನು ಮಾಡಬಾರದು
ಹೃದಯ ರೋಗಿಗಳು ಅತಿಯಾದ ಕೆಲಸವನ್ನು ತಪ್ಪಿಸಬೇಕು.
ನಿಮಗೆ ತಲೆನೋವು, ವಾಕರಿಕೆ, ತಲೆತಿರುಗುವಿಕೆ, ದೌರ್ಬಲ್ಯ ಇದ್ದರೆ ನಿರ್ಲಕ್ಷಿಸಬೇಡಿ.
ಸ್ನಾಯು ಸೆಳೆತ ಮತ್ತು ತ್ವರಿತ ಉಸಿರಾಟ ಇದ್ದರೆ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ತಪ್ಪನ್ನು ಮಾಡಬೇಡಿ.
ಚರ್ಮವು ಶೀತ ಮತ್ತು ತೇವವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ.
ನಾಡಿಮಿಡಿತ ವೇಗವಾಗಿದ್ದರೆ ವೈದ್ಯರ ಸಲಹೆ ಪಡೆಯಿರಿ
ಯೋಗದಿಂದ ಬೊಜ್ಜು ಕಡಿಮೆಯಾಗುವುದಲ್ಲದೆ ದೇಹದ ಆಕಾರವನ್ನು ಸರಿಪಡಿಸಿ ದೇಹವನ್ನು ಆರೋಗ್ಯವಾಗಿಡುತ್ತದೆ. ಸೂರ್ಯ ನಮಸ್ಕಾರವನ್ನು ಹೃದಯಕ್ಕೆ ಅತ್ಯಂತ ಪರಿಣಾಮಕಾರಿ ಯೋಗವೆಂದು ಪರಿಗಣಿಸಲಾಗಿದೆ. ಇದು ದೇಹದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಿಂದ ಹೆಚ್ಚು ಬೆವರು ಬಿಡುಗಡೆಯಾಗಿ ಬೊಜ್ಜು ಕಡಿಮೆಯಾಗುತ್ತದೆ.