ತಾಲಿಬಾನ್ ಭಾರತದ ಕಡೆ ಬಂದ್ರೆ ಏರ್ ಸ್ಟ್ರೈಕ್ ಗೆ ಸಿದ್ಧ – ಯೋಗಿ ಆದಿತ್ಯನಾಥ್
ಉತ್ತರಪ್ರದೇಶ : ತಾಲಿಬಾನ್ ಅಫ್ಗಾನಿಸ್ತಾನವನ್ನ ವಶಕ್ಕೆ ಪಡೆದು ಅಧಿಕಾರ ವಹಿಸಿಕೊಂಡಿದೆ. ಅಲ್ಲಿನ ಜನರ ಜೀವನ ನರಕ ಮಾಡಿದೆ. ಈ ನಡುವೆ ತಾಲಿಬಾನ್ ಪಾಕಿಸ್ತಾನದ ಜೊತೆಗೂಡಿ ಭಾರತದ ಮೇಲೆ ಮುಗಿಬೀಳುವ ಸಾಧ್ಯತೆಗಳಿದೆ ಎನ್ನಲಾಗ್ತಿದೆ. ಆದ್ರೆ ಅಪ್ಪಿ ತಪ್ಪಿಯೂ ತಾಲಿಬಾನ್ ಭಾರತದ ಕಡೆ ಬಂದರೆ ಅವರ ವಿರುದ್ಧ ವೈಮಾನಿಕ ದಾಳಿಗೆ ಭಾರತ ಸಿದ್ಧವಾಗಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ಅಲ್ಕೋದಲ್ಲಿ ಮಾತನಾಡಿರುವ ಯೋಗಿ ಇಂದು ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ನಮ್ಮ ದೇಶ ಸುರಕ್ಷಿತವಾಗಿ ನಡೆಯುತ್ತಿದೆ. ಅದಕ್ಕೆ ಬೇರೆ ದೇಶದವರು ನಮ್ಮತ್ತ ಕಣ್ಣು ಎತ್ತಿ ನೋಡಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾಲಿಬಾನ್ನಿಂದ ತೊಂದರೆಗೀಡಾಗಿದೆ. ಒಂದು ವೇಳೆ ಆ ತಾಲಿಬಾನ್ ಗುಂಪು ಭಾರತದತ್ತ ಸಾಗಿದರೆ, ವೈಮಾನಿಕ ದಾಳಿ ಸಿದ್ಧವಾಗಿದೆ ಎಂದಿದ್ದಾರೆ.