ಒಂದೇ ದಿನ 4,12,262 ಕೇಸ್ : ಕೋವಿಡ್ ಹಾಟ್ ಸ್ಪಾಟ್ ಆಯ್ತಾ ಭಾರತ..?
ನವದೆಹಲಿ : ಭಾರತದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 4,12,262 ಕೇಸ್ ಗಳು ಪತ್ತೆಯಾಗಿದ್ದರೆ, 3,980 ಮಂದಿ ವೈರಸ್ ನಿಂದಾಗಿ ಪ್ರಾಣಬಿಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲೀಗ ಕೋವಿಡ್ ಸೋಂಕಿತರ ಸಂಖ್ಯೆ 2,10,77,410ಕ್ಕೆ ಹಾಗೂ ಮೃತರ ಸಂಖ್ಯೆ 2,30,168ಕ್ಕೆ ಹೆಚ್ಚಳವಾಗಿದೆ.
ಬುಧವಾರ ಒಂದೇ ದಿನ 3,29,113 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಭಾರತದಲ್ಲಿ 1,72,80,844 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 35,66,398ಕ್ಕೆ ಏರಿಕೆಯಾಗಿದೆ.
ಕೋವಿಡ್ ಹಾಟ್ ಸ್ಪಾಟ್ ಆಯ್ತಾ ಭಾರತ..?
ಹೌದು..! ಭಾರತ ಈಗ ಕೋವಿಡ್ ನ ಹಾಡ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ವಿಶ್ವದ ಬೇರೆ ಯಾವ ದೇಶದಲ್ಲಿಯೂ ವರದಿಯಾಗದಷ್ಟು ಸಾವು ನೋವುಗಳು ಭಾರತದಲ್ಲಿ ಸಂಭವಿಸುತ್ತಿವೆ. ಸ್ಮಶಾನಗಳು ಹೌಸ್ ಫುಲ್ ಆಗಿವೆ. ಆಸ್ಪತೆಗಳನ್ನು ಕಟ್ಟಬೇಕಿದ್ದ ದೇಶದಲ್ಲಿ ಹೊಸ ಸ್ಮಶಾನಗಳನ್ನು ತೆರೆಯಲಾಗುತ್ತಿದೆ. ಇದಕ್ಕೆ ಕಾರಣ ಯಾರು..?
ಯಾರ ನಿರ್ಲಕ್ಷ್ಯಕ್ಕೆ ಯಾರಿಗೆ ಶಿಕ್ಷೆ..?
ಮೊದಲ ಅಲೆಯನ್ನ ಗೆದ್ದೇ ಬಿಟ್ಟಿದ್ದೇವೆ ಎಂಬ ಹಂಬಿನಿಂದ ಮೀಸೆ ತಿರಿಗಿಸಿಕೊಂಡು ಓಡಾಡಿದ ನಾಯಕರ ನಿರ್ಲಕ್ಷ್ಯವೇ ಭಾರತದ ಸದ್ಯದ ಸ್ಥಿತಿಗೆ ಕಾರಣ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಯಾಕೆಂದ್ರೆ ಮೊದಲ ಅಲೆಯಿಂದ ಜಾಗೃತರಾಗಬೇಕಿದ್ದ ಸರ್ಕಾರಗಳು, ಎರಡನೇ ಅಲೆ ಬಗ್ಗೆ ತಲೆಕಡೆಸಿಕೊಳ್ಳಲೇ ಇಲ್ಲ. ಅಧಿಕಾರ ಹಿಡಿಯೋದು ಒಂದೇ ಗುರಿಯಂಬಂತೆ ಚುನಾವಣೆಗಳ ಮೇಲೆ ಗಮನವಿಟ್ಟರು. ಬೃಹತ್ ಚುನಾವಣಾ ರ್ಯಾಲಿಗಳನ್ನ ನಡೆಸಿದರು. ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮಗನ್ನ ನಡೆಸಿದರು. ಇದಲ್ಲಿ ಜನರ ತಪ್ಪೂ ಕೂಡ ಇದೆ. ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದ್ದ ಜನರು ಬೇಕಾಬಿಟ್ಟಿ ಓಡಾಡಿದರು. ಈ ಎಲ್ಲಾ ಕಾರಣಗಳಿಂದ ಸದ್ಯ ಇಂದು ಭಾರತ ವಿಶ್ವದ ಕೋವಿಡ್ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಯಾವ ರಾಷ್ಟ್ರಗಳಲ್ಲಿಯೂ ವರದಿಯಾಗದಷ್ಟು ಸಾವು-ನೋವಿಗೆ ಭಾರತ ಸಾಕ್ಷಿಯಾಗುತ್ತಿದೆ.