ಆಸೀಸ್ ನೆಲದಲ್ಲಿ `ಯಂಗ್ ಇಂಡಿಯಾ ಮೆಗಾ ದಿಗ್ವಿಜಯ’
ಆಸೀಸ್ ನೆಲದಲ್ಲಿ ಯಂಗ್ ಇಂಡಿಯಾ ಗೆಲುವಿನ ರಣಕೇಕೆ ಹಾಕಿದೆ. ಯಂಗ್ ಗನ್ ಗಳ ಆರ್ಭಟಕ್ಕೆ ಕಾಂಗರೂಗಳು ಬೆಚ್ಚಿಬಿದ್ದು ಮಣ್ಣುಮುಕ್ಕಿವೆ.
ಸಿರಾಜ್ – ಠಾಕೂರ್ ರೊರಿಂಗ್.. ಶುಭ್ ಮನ್ ಗಿನ್ – ರಿಷಬ್ ರಾಕಿಂಗ್.. ನಾಯಕನಾಗಿ ರಹಾನೆ ಶೈನಿಂಗ್.. ಆಸ್ಟ್ರೇಲಿಯಾ ವಿರುದ್ಧ ಯಂಗ್ ಇಂಡಿಯಾಗೆ ಮೆಗಾ ವಿನ್…
ಬ್ರಿಸ್ಬೇನ್ ನಲ್ಲಿ ರಣಾಂಗಣದಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ದಿಗ್ವಿಜಯ ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನ ಟೀಂ ಇಂಡಿಯಾ 2-1 ಅಂತರದಿಂದ ಗೆದ್ದು ಬೀಗಿದೆ.
ಗಾಬ್ಬಾ ಅಂಗಳದಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತ ತಂಡ ಮೂರು ವಿಕೆಟ್ ಅಂತರದಲ್ಲಿ ಪಂದ್ಯ ಗೆದ್ದುಕೊಂಡು ಕಾಂಗರೂಗಳಿಗೆ ತನ್ನ ನೆಲದಲ್ಲೇ ತಕ್ಕ ಪಾಠ ಕಳಿಸಿದೆ.
ಗೆಲುವಿಗೆ 328 ರನ್ ಗುರಿ ಪಡೆದು ಕ್ರೀಸ್ ಗೆ ಭಾರತ ತಂಡಕ್ಕೆ ಆರಂಭಿಕ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ನೆರವಾದರು. ಮೂವರು ಅರ್ಧಶತಕ ಸಿಡಿಸಿ, ಗಾಬ್ಬಾದಲ್ಲಿ ವಿಶ್ವದಾಖಲೆಯ ಜಯ ಸಾಧಿಸಲು ನೆರವಾದರು.
ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಂದ ಐದನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. ಕೇವಲ ಏಳು ರನ್ ಗಳಿಸಿ ರೋಹಿತ್ ಔಟಾದರು. ನಂತರ ಜೊತೆಗೂಡಿದ ಪೂಜಾರ- ಗಿಲ್ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ ತನ್ನ ಎರಡನೇ ಅರ್ಧಶತಕ ಬಾರಿಸಿದ ಶುಭ್ಮನ್ ಗಿಲ್ ಕೇವಲ ಒಂಬತ್ತು ರನ್ ಅಂತರದಲ್ಲಿ ಚೊಚ್ಚಲ ಶತಕದಿಂದ ವಂಚಿತರಾದರು. 91 ರನ್ ಗಳಿಸಿದ್ದ ವೇಳೆ ಗಿಲ್ ಲಯಾನ್ ಗೆ ವಿಕೆಟ್ ಒಪ್ಪಿಸಿದರು.
ಇತ್ತ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಚೇತೇಶ್ವರ್ ಪೂಜಾರ 56 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಪಂದ್ಯವನ್ನ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಂತೆ ಬ್ಯಾಟ್ ಬೀಸಿದ ನಾಯಕ ರಹಾನೆ ಹೋರಾಟ 22 ರನ್ ಗಳಿಗೆ ಅಂತ್ಯವಾಯಿತು. ಬಳಿಕ ಬಂದ ಮಯಾಂಕ್ 9 ರನ್ ಗಳಿಸುವಷ್ಟರಲ್ಲಿ ಮಾಯವಾದರು.
ಈ ಸಂಕಷ್ಟದ ಸ್ಥಿತಿಯಲ್ಲೂ ಎದೆಗುಂದದೇ ಬ್ಯಾಟಿಂಗ್ ಮಾಡಿದ ಕೀಪರ್ ರಿಷಭ್ ಪಂತ್ ಅಜೇಯ 89 ರನ್ ಗಳಿಸಿ ತಂಡವನ್ನು ಜಯ ಒದಗಿಸಿದರು. ಈ ಹಂತದಲ್ಲಿ ಇವರಿಗೆ ಮತ್ತೊಬ್ಬ ಯುವ ಆಟಗಾರ ವಾಷಿಂಗ್ ಟನ್ ಸುಂದರ್ ಉತ್ತಮ ಸಾಥ್ ನೀಡಿದರು. ಇನ್ನೇನು ಈ ಜೋಡಿ ಪಂದ್ಯವನ್ನ ಗೆಲ್ಲಿಸುತ್ತೆ ಅನ್ನೊಷ್ಟರಲ್ಲಿ ಸುಂದರ್ ಕ್ಲೀನ್ ಬೋಲ್ಡ್ ಆದ್ರು. ಗೆಲುವಿಗೆ ಮೂರು ರನ್ ಅವಶ್ಯಕತೆ ಇದ್ದಾಗ ಪಂತ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.
ಆಸೀಸ್ ಪರ ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದರೆ, ನಥನ್ ಲಯಾನ್ ಎರಡು ಮತ್ತು ಹ್ಯಾಜಲ್ ವುಡ್ ಒಂದು ವಿಕೆಟ್ ಪಡೆದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel