WIvsIND | ಟೀಂ ಇಂಡಿಯಾದಲ್ಲಿ ಬದಲಾವಣೆ.. ಮಾನ ಉಳಿಸಿಕೊಳ್ಳುತ್ತಾ ವಿಂಡೀಸ್ india-vs-west-indies-india-last-t20 Saaksha tv
ಕೋಲ್ಕತ್ತಾ : ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಟಿ 20 ಸರಣಿಯಲ್ಲೂ ಅದನ್ನೇ ಪುನರಾವರ್ತಿಸಲು ಪ್ಲಾನ್ ಮಾಡಿಕೊಂಡಿದೆ. ಮೂರು ಟಿ 20 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನ ಗೆದ್ದಿರುವ ಟೀಂ ಇಂಡಿಯಾ, ಇಂದು ಕೊಲ್ಕತ್ತಾದಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಗೆಲುವ ಸಾಧಿಸಿ ಮತ್ತೆ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ.
ಇತ್ತ ಟೀಂ ಇಂಡಿಯಾ ರೆಡ್ ಹಾರ್ಸ್ ಫಾರ್ಮ್ ನಲ್ಲಿದ್ದೇ ಟಿ 20 ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ತಂಡ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದೆ.
ಇನ್ನೊಂದೆಡೆ ಈಗಾಗಲೇ ಸರಣಿಯನ್ನು ಕೈ ವಶ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ.
ಈ ಪಂದ್ಯವೂ ಸೇರಿ ಶ್ರೀಲಂಕಾ ಪ್ರವಾಸದಿಂದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳಾಗೋದು ಗ್ಯಾರೆಂಟಿ.
ವಿರಾಟ್ ಕೊಹ್ಲಿ ಬದಲಿಗೆ ರುತುರಾಜ್ ಗಾಯಕ್ವಾಡ್, ಅಥವಾ ಶ್ರೇಯಸ್ ಅಯ್ಯರ್ ಗೆ ಚಾನ್ಸ್ ಸಿಗಬಹುದು. ಬೌಲಿಂಗ್ ವಿಭಾಗದಲ್ಲಿ ಚಹಾರ್ ಅಥವಾ ಭುವನೇಶ್ವರ್ ಅವರಲ್ಲಿ ಒಬ್ಬರನ್ನು ಬಿಟ್ಟು ಸಿರಾಜ್ ಅಥವಾ ಅವೇಶ್ ಖಾನ್ ಗೆ ಅವಕಾಶ ನೀಡಬಹುದು.
ಇನ್ನು ಶ್ರೀಲಂಕಾ ಟಿ 20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ವಿರಾಟ್ ಕೊಹ್ಲಿ, ಪಂತ್ ಗೆ ರೆಸ್ಟ್ ನೀಡಿಲಾಗಿದೆ. ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸ್ ಆಗಿದ್ದಾರೆ.