ನವದೆಹಲಿ – ಭಾರತ ತನ್ನ ಭಯಾನಕ ಪ್ರತೀಕಾರದ ದಾಳಿಯಿಂದ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಕರಾಚಿಯಲ್ಲಿ ಐಎನ್ಎಸ್ ವಿಕ್ರಾಂತ್ ದಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇಸ್ಲಾಮಾಬಾದ್ ಸೇರಿ ಹಲವು ಪಾಕ್ ನಗರಗಳು ಕಂಗಾಲಾಗಿವೆ.
ಇದರ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಯೋಧ ಮುರಳಿ ನಾಯ್ಕ್ ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರ ಇಂದು ತವರೂರು ಕಲ್ಲಿತಾಂಡಕ್ಕೆ ತಲುಪಲಿದೆ.
ಗುರುವಾರ ರಾತ್ರಿ ಪಾಕ್ ಸೇನೆ ಭಾರತ ಗಡಿಗೆ ಗುಂಡಿನ ದಾಳಿ ನಡೆಸಿದಾಗ, ಭಾರತೀಯ ಸೇನೆಯು ಕೂಡ ತಕ್ಷಣ ಪ್ರತ್ಯುತ್ತರ ನೀಡಿದೆ. ಈ ದಾಳಿನಲ್ಲಿ ಹುತಾತ್ಮರಾದ ಯೋಧನ ಕುಟುಂಬಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಸಂತಾಪವನ್ನು ತಿಳಿಸಿದ್ದಾರೆ.