Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020 – ಕೆಕೆಆರ್ ಗೆ ಚಕ್ರವರ್ತಿಯ ಅಭಯ.. ಡೆಲ್ಲಿ ಹುಡುಗರಿಗೆ ಸೋಲಿನ ತಾಪ..!

Sanath Rai by Sanath Rai
October 25, 2020
in IPL 2020, Newsbeat, ಕ್ರೀಡೆ
Varun Chakravarthy kkr ipl 2020 saakshatv
Share on FacebookShare on TwitterShare on WhatsappShare on Telegram

ಐಪಿಎಲ್ 2020 – ಕೆಕೆಆರ್ ಗೆ ಚಕ್ರವರ್ತಿಯ ಅಭಯ.. ಡೆಲ್ಲಿ ಹುಡುಗರಿಗೆ ಸೋಲಿನ ತಾಪ..!

Nitish Rana kkr ipl 2020 saakshatvಗೆಲುವಿನ ಆಮಲಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿನತ್ತ ಮುಖ ಮಾಡಿದೆ.

Related posts

ವುಶುದಲ್ಲಿ ಭಾರತಕ್ಕೆ ಬೆಳ್ಳಿ

ವುಶುದಲ್ಲಿ ಭಾರತಕ್ಕೆ ಬೆಳ್ಳಿ

October 2, 2023
ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

October 2, 2023

ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಡೆಲ್ಲಿ ಹುಡುಗರು ಬರ್ತಾ ಬರ್ತಾ ಮಂಕಾಗುತ್ತಿದ್ದಾರೆ.

ಅತೀಯಾದ ಆತ್ಮವಿಶ್ವಾಸವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಳುವಾಗುತ್ತಿದೆ ಅಂತ ಅನ್ನಿಸುತ್ತಿದೆ.

ಹೌದು, ಐಪಿಎಲ್ ಟೂರ್ನಿಯ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 59 ರನ್ ಗಳಿಂದ ಕೆಕೆಆರ್ ತಂಡಕ್ಕೆ ಶರಣಾಗಿದೆ.

ಅಬುಧಾಬಿಯಲ್ಲಿ ನಡೆದ ಟೂರ್ನಿಯ 42ನೇ ಪಂದ್ಯದಲ್ಲಿ ಕೆಕೆಆರ್ ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು.

ಅಬ್ಬರದ ಆರಂಭ ಪಡೆದ್ರೂ ಕೆಕೆಆರ್ ತಂಡ 42 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಶುಬ್ಮನ್ ಗಿಲ್ 9 ರನ್, ರಾಹುಲ್ ತ್ರಿಪಾಠಿ 13 ರನ್ ಹಾಗೂ ದಿನೇಶ್ ಕಾರ್ತೀಕ್ 3 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದಿದ್ದರು.

ಆಗ ಆರಂಭಿಕ ನಿತೇಶ್ ರಾಣ ಜೊತೆಗೂಡಿದ ಸುನೀಲ್ ನರೇನ್ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು.

ನೋಡ ನೋಡುತ್ತಲೇ ಡೆಲ್ಲಿ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ರು. ಒಂದು ಕಡೆ ನಿತೀಶ್ ರಾಣಾ.. ಮತ್ತೊಂದು ಕಡೆ ಸುನೀಲ್ ನರೇನ್.

ಇವರಿಬ್ಬರ ಬ್ಯಾಟಿಂಗ್ ವೈಖರಿಗೆ ಡೆಲ್ಲಿ ಬೌಲರ್ ಗಳು ಬೆಚ್ಚಿಬಿದ್ದಿದ್ದರು.

ನಾಲ್ಕನೇ ವಿಕೆಟ್ ಗೆ ನರೇನ್ ಮತ್ತು ರಾಣಾ 115 ರನ್ ಕಲೆ ಹಾಕಿದ್ದರು.

ಈ ಹಂತದಲ್ಲಿ 32 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ 64 ರನ್ ಸಿಡಿಸಿದ್ರು.

Shreyas Iyer delhli capitals ipl 2020 saakshatvಮತ್ತೊಂದೆಡೆ ನಿತೇಶ್ ರಾಣಾ ಸ್ಪೋಟಕವಾಗಿ ಬ್ಯಾಟ್ ಬೀಸಿದ್ರು.

ರಾಣಾ ಅವರು 53 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಆಕರ್ಷಕ 81 ರನ್ ಸಿಡಿಸಿದ್ರು.

ಇಯಾನ್ ಮೊರ್ಗಾನ್ 17 ರನ್ ಗಳಿಸಿದ್ರು. ಅಂತಿಮವಾಗಿ ಕೆಕೆಆರ್ ತಂಡ 6 ವಿಕೆಟ್ ನಷ್ಟಕ್ಕೆ 194 ರನ್ ದಾಖಲಿಸಿತ್ತು.

ಗೆಲ್ಲಲು ಕಠಿಣ ಸವಾಲನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಮುಗ್ಗರಿಸಿತ್ತು.

ಅಜ್ಯಂಕ್ಯಾ ರಹಾನೆ ಶೂನ್ಯ ಸುತ್ತಿದ್ರೆ, ಶಿಖರ್ ಧವನ್ 6 ರನ್‍ಗೆ ಹೋರಾಟ ಮುಗಿಸಿದ್ರು.

ನಂತರ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ತಂಡಕ್ಕೆ ಚೇತರಿಕೆ ನೀಡುವ ಸೂಚನೆ ನೀಡಿದ್ರು.

ಆದ್ರೆ ರಿಷಬ್ ಪಂತ್ ಅಬ್ಬರ 27 ರನ್ ಗೆ ಕೊನೆಗೊಂಡಿತ್ತು. ಶಿಮ್ರೋನ್ ಹೆಟ್ಮೇರ್ 10 ರನ್ ಗೆ ಸೀಮಿತವಾದ್ರು.

ಹಾಗೇ ನಾಯಕ ಶ್ರೇಯಸ್ ಆಟ 47 ರನ್ ಗೆ ಕೊನೆಗೊಂಡಿತ್ತು.

ಇನ್ನುಳಿದಂತೆ ಮಾರ್ಕೊಸ್ ಸ್ಟೋನಿಸ್ 6 ರನ್, ಅಕ್ಸರ್ ಪಟೇಲ್ 9 ರನ್, ಕಾಗಿಸೊ ರಬಾಡ 9 ರನ್ ಹಾಗೂ ಅಶ್ವಿನ್ ಅಜೇಯ 14 ರನ್ ದಾಖಲಿಸಿದ್ರು.

ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ದಾಖಲಿಸಿತ್ತು.

20 ರನ್ ಗೆ ಐದು ವಿಕೆಟ್ ಉರುಳಿಸಿದ್ದ ವರುಣ್ ಚಕ್ರವರ್ತಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Tags: #Rishabh Pant.#saakshatv#Sunil Narinedelhi capitalsIPLIPL 2020Kolkata Knight RidersNitish RanaShikhar DhawanVarun Chakravarthy
ShareTweetSendShare
Join us on:

Related Posts

ವುಶುದಲ್ಲಿ ಭಾರತಕ್ಕೆ ಬೆಳ್ಳಿ

ವುಶುದಲ್ಲಿ ಭಾರತಕ್ಕೆ ಬೆಳ್ಳಿ

by Honnappa Lakkammanavar
October 2, 2023
0

ಹ್ಯಾಂಗ್‍ಝೌ: ಏಷ್ಯನ್ ಗೇಮ್ಸ್ ನ (Asian Games) ಮಹಿಳೆಯರ 60 ಕೆ.ಜಿ ವುಶು (Wushu) ಫೈನಲ್‍ ನಲ್ಲಿ ದೇಶದ ರೋಶಿಬಾನಾದೇವಿ ನವೋರೆಮ್ ಬೆಳ್ಳಿ ಪದಕ್ಕೆ ಕೊರಳೊಡ್ಡಿದ್ದಾರೆ. ರೋಶಿಬಿನಾ...

ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

by Honnappa Lakkammanavar
October 2, 2023
0

ಏಷ್ಯನ್ ಗೇಮ್ಸ್ನ ಪುರುಷರ ಹಾಕಿಯಲ್ಲಿ ಬಾರತ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಪ್ರದರ್ಶನ ತೋರಿದೆ. ಈ ಮೂಲಕ ಭಾರತ ತಂಡ ಸೆಮಿಪೈನಲ್ ಗೆ ಲಗ್ಗೆಯಿಟ್ಟಿದೆ. ಆರಂಭದಿಂದಲೇ ಏಕಪಕ್ಷೀಯವಾಗಿ...

9ನೇ ದಿನವೂ ಪದಕ ಬೇಟೆ ಮುಂದುವರೆಸಿದ ಭಾರತ

9ನೇ ದಿನವೂ ಪದಕ ಬೇಟೆ ಮುಂದುವರೆಸಿದ ಭಾರತ

by Honnappa Lakkammanavar
October 2, 2023
0

ಹ್ಯಾಂಗ್‌ಝೌ : ಏಷ್ಯನ್‌ ಗೇಮ್ಸ್‌ ನಲ್ಲಿ (Asian Games 2023) ಭಾರತೀಯ ಆಟಗಾರರು 9ನೇ ದಿನವೂ ಪದಕ ಬೇಟೆ ಆರಂಭಿಸಿದೆ. ಭಾರತೀಯ ಆಟಗಾರರು ಈ ಬಾರಿ ಎಲ್ಲ...

ಗಾಂಧಿ ಜಯಂತಿಯಂದು ಭಾರತಕ್ಕೆ 3 ಪದಕಗಳು

ಗಾಂಧಿ ಜಯಂತಿಯಂದು ಭಾರತಕ್ಕೆ 3 ಪದಕಗಳು

by Honnappa Lakkammanavar
October 2, 2023
0

ಏಷ್ಯನ್ ಗೇಮ್ಸ್ ನ 9 ದಿನವಾದ ಇಂದು ಆರಂಭದಲ್ಲಿ ಭಾರತಕ್ಕೆ ಮೂರು ಕಂಚು ಬಂದಿವೆ. ಭಾರತೀಯ ರೋಲರ್ ಸ್ಕೇಟರ್ ಗಳ ಪುರುಷ ಮತ್ತು ಮಹಿಳೆಯರ 3 ಸಾವಿರ...

ಭಾರತಕ್ಕೆ ಸ್ಕೇಟಿಂಗ್ ನಲ್ಲಿ ಎರಡು ಕಂಚಿನ ಪದಕ

ಭಾರತಕ್ಕೆ ಸ್ಕೇಟಿಂಗ್ ನಲ್ಲಿ ಎರಡು ಕಂಚಿನ ಪದಕ

by Honnappa Lakkammanavar
October 2, 2023
0

ಏಷ್ಯನ್ ಗೇಮ್ಸ್ ನ 9 ದಿನವಾದ ಇಂದು ಆರಂಭದಲ್ಲಿ ಭಾರತಕ್ಕೆ ಎರಡು ಕಂಚು ಬಂದಿವೆ. ಭಾರತೀಯ ರೋಲರ್ ಸ್ಕೇಟರ್ ಗಳ ಪುರುಷ ಮತ್ತು ಮಹಿಳೆಯರ 3 ಸಾವಿರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ಬಹಿರಂಗ

ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ಬಹಿರಂಗ

October 3, 2023
ರಾತ್ರೋರಾತ್ರಿ ಕುವೆಂಪು, ಅಪ್ಪು ಪ್ರತಿಮೆಗಳ ನಿರ್ಮಾಣ

ರಾತ್ರೋರಾತ್ರಿ ಕುವೆಂಪು, ಅಪ್ಪು ಪ್ರತಿಮೆಗಳ ನಿರ್ಮಾಣ

October 3, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram