ಐಪಿಎಲ್ 2020 – ಧೋನಿಯ ತಂತ್ರ -ಮಂತ್ರ… ದಕ್ಕಿತ್ತು ಚೆನ್ನೈಗೆ ಗೆಲುವಿನ ನಗು..!
ಎಸ್ ಆರ್ ಎಚ್ ವಿರುದ್ಧ 20 ರನ್ ಗಳ ಜಯ. ಹಾಗಂತ ಚೆನ್ನೈ ತಂಡಕ್ಕೆ ಸಿಕ್ಕಿರುವ ಅದ್ಭುತ ಗೆಲುವು ಏನೂ ಅಲ್ಲ.
ಆದ್ರೂ ಸಿಎಸ್ ಕೆ ತಂಡಕ್ಕೆ ಈ ಗೆಲುವು ಅನಿವಾರ್ಯವಾಗಿತ್ತು. ಕಳೆಗುಂದಿದ್ದ ಸಿಎಸ್ ಕೆ ತಂಡಕ್ಕೆ ಆತ್ಮವಿಶ್ವಾಸ ತುಂಬಲು ಇಂತಹುದ್ದೊಂದು ಜಯ ಬೇಕಾಗಿತ್ತು.
ಹಾಗೇ ನೋಡಿದ್ರೆ ಸಿಎಸ್ ಕೆ ತಂಡ ಐಪಿಎಲ್ ನಲ್ಲಿ 2010ರ ಐಪಿಎಲ್ ಟೂರ್ನಿಯನ್ನು ನೆನಪು ಮಾಡಿಕೊಳ್ಳುವಂತೆ ಮಾಡುತ್ತಿದೆ.
2010ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲಿ ಸತತ ಸೋಲಿನಿಂದ ಕಂಗೆಟ್ಟಿತ್ತು. ಆನಂತರ ಸತತ ಗೆಲುವು ದಾಖಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಇದೀಗ 2020ರಲ್ಲೂ ಅದೇ ಹಾದಿಯಲ್ಲಿ ಇದೆ. ಸದ್ಯ ಟೂರ್ನಿಯಲ್ಲಿ ಸಿಎಸ್ ಕೆ ಆಡಿರುವ ಎಂಟು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನುಳಿದ ಎಲ್ಲಾ ಆರು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕು.
ಇನ್ನು ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಧೋನಿಯ ಗೇಮ್ ಪ್ಲಾನ್ ವರ್ಕೌಟ್ ಆಗಿತ್ತು.
ಸ್ಯಾಮ್ ಕುರನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಎಸ್ ಆರ್ ಎಚ್ ತಂಡಕ್ಕೆ ಅಚ್ಚರಿಯನ್ನು ಮಾಡಿದ್ದರು.
ಆ ನಂತರ ಮೂವರು ಸ್ಪಿನ್ನರ್ ಗಳು ಮತ್ತು ನಾಲ್ವರು ವೇಗಿಗಳನ್ನು ಬಳಸಿಕೊಂಡು ಎಸ್ ಆರ್ ಎಚ್ ತಂಡಕ್ಕೆ ಶಾಕ್ ನೀಡಿದ್ದರು.
ಇನ್ನು ಧೋನಿ ಅಂಪೈರ್ ವಿರುದ್ದವೂ ವಾಗ್ವಾದ ಮಾಡಿಕೊಂಡು ಅಂಪೈರ್ ತೀರ್ಮಾನವನ್ನೇ ಬದಲಾಯಿಸುವಂತೆ ಕೂಡ ಮಾಡಿದ್ದರು.
ಶಾರ್ದೂಲ್ ಥಾಕೂರ್ ಅವರ ಎಸೆತವೊಂದನ್ನು ವೈಡ್ ಎಂದು ಅಂಪೈರ್ ತೀರ್ಮಾನ ಮಾಡಿದ್ದರು.
ಆದ್ರೆ ಅಂಪೈರ್ ತೀರ್ಮಾನ ಕೈಗೊಳ್ಳುವುದಕ್ಕೆ ಮುನ್ನವೇ ಧೋನಿ ಹಸ್ತಕ್ಷೇಪ ಮಾಡಿದ್ದರು. ಕೊನೆಗೆ ಅಂಪೈರ್ ವೈಡ್ ಅಲ್ಲ ಎಂದು ನಿರ್ಧರಿಸಿದ್ದರು.
ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದೆ.
ಇದೀಗ ಈ ಗೆಲುವವನ್ನು ಮುಂದುವರಿಸಿಕೊಂಡು ಹೋಗುವ ಅನಿವಾರ್ಯತೆಗೆ ಸಿಲುಕಿದೆ.
ಒಟ್ಟಾರೆ, ಧೋನಿಯ ತಂತ್ರ ಮತ್ತು ಮಂತ್ರದಿಂದ ಸಿಎಸ್ಕೆ ಗೆಲುವಿನ ನಗೆ ಬೀರಿದೆ.