ADVERTISEMENT
Wednesday, June 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ವಿರಾಟನ ಯುಕ್ತಿ.. ಎಬಿಡಿಯ ಶಕ್ತಿ.. ಐಪಿಎಲ್ ಕುರುಕ್ಷೇತ್ರದಲ್ಲಿ ಆರ್ ಸಿಬಿ ಆರ್ಭಟ..!

Sanath Rai by Sanath Rai
October 21, 2020
in IPL 2020, Newsbeat, ಕ್ರೀಡೆ
virat khhli rcb ipl ipl 2020 saakshatv
Share on FacebookShare on TwitterShare on WhatsappShare on Telegram

Related posts

ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

June 10, 2026
ಆರ್‌ಎಸ್‌ಎಸ್ ದೇಶಪ್ರೇಮಿಗಳ ಸಂಘಟನೆ, ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ: ಪ್ರಿಯಾಂಕ್ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು

ಆರ್‌ಎಸ್‌ಎಸ್ ದೇಶಪ್ರೇಮಿಗಳ ಸಂಘಟನೆ, ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ: ಪ್ರಿಯಾಂಕ್ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು

June 10, 2026

ವಿರಾಟನ ಯುಕ್ತಿ.. ಎಬಿಡಿಯ ಶಕ್ತಿ..
ಐಪಿಎಲ್ ಕುರುಕ್ಷೇತ್ರದಲ್ಲಿ ಆರ್ ಸಿಬಿ ಆರ್ಭಟ..!

virat kohli rcb team ipl 2020 saakshatvಈ ಬಾರಿ ಕಪ್ ನಮ್ದೆ..
ಇದು ಆರ್ ಸಿಬಿ  ಅಭಿಮಾನಿಗಳ ಬಾಯಲ್ಲಿ ಕಳೆದ 12 ವರ್ಷದಿಂದ ಕೇಳಿ ಬರುತ್ತಿರುವ ಜಪ.

ಹೌದು, ಈ ಬಾರಿ ಆರ್ ಸಿಬಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಚಿಕ್ಕ ಸುಳಿವನ್ನು ನೀಡಿದೆ.
ಆರ್ ಸಿಬಿಯ ಪ್ರದರ್ಶನ ಅಭಿಮಾನಿಗಳಿಗೆ ಹಿತವನ್ನುಂಟು ಮಾಡುತ್ತಿದೆ. ಎಲ್ಲೋ ಒಂದು ಕಡೆ ಭರವಸೆ ಮೂಡಿಸಿದೆ. ಆರ್ ಸಿಬಿ ಗೆದ್ದೇ ಗೆಲ್ಲುತ್ತೆ.. ಈ ಬಾರಿ ಕಪ್ ನಮ್ದೆ ಅಂತ ಬೀಗುವಂತೆ ಮಾಡಿದೆ ವಿರಾಟ್ ಪಡೆ.

ಅಂದ ಹಾಗೇ ಆರ್ ಸಿಬಿ ಐಪಿಎಲ್ ನಲ್ಲಿ 12 ವರ್ಷಗಳ ಪ್ರಶಸ್ತಿ ಬರದ ವನವಾಸವನ್ನು ಮುಗಿಸಿದೆ.

ಹಾಗೇ ಒಂದು ವರ್ಷದ ಅಜ್ಞಾತವಾಸದಂತೆ ಐಪಿಎಲ್ ನ ಮೊದಲ ಹಂತದ ಹಿನ್ನಡೆಯಿಂದಲೂ ಹೊರಬಂದಿದೆ.
ಇದೀಗ ಐಪಿಎಲ್ ಕುರುಕ್ಷೇತ್ರ ಎರಡನೇ ಹಂತದದಲ್ಲಿ ಗೆಲುವಿನ ನಗಾರಿ ಮೊಳಗಿಸುತ್ತಿದೆ.

rcb team ipl 2020 saakshatvಇಲ್ಲಿ, ವಿರಾಟ್ ಕೊಹ್ಲಿಯ ಯುಕ್ತಿ.. ಎಬಿಡಿ ವಿಲಿಯರ್ಸ್‍ನ ಶಕ್ತಿ.. ಆರೋನ್ ಫಿಂಚ್ ನ ಕೀರ್ತಿ… ದೇವದತ್ತ್ ಪಡಿಕ್ಕಲ್ ನ ಪ್ರೀತಿ.. ವಾಸಿಂಗ್ಟನ್ ಸುಂದರ್ ನ ಸ್ಪೂರ್ತಿ…
ಕ್ರಿಸ್ ಮೋರಿಸ್ ನ ಬೌಲಿಂಗ್ ತಂತ್ರ.. ಯುಜುವೇಂದ್ರ ಚಾಹಲ್ ನ ಸ್ಪಿನ್ ಮಂತ್ರ..

ನವದೀಪ್ ಸೈನಿಯ ಮಿಂಚಿನ ಎಸೆತದ ಕಾಟ.. ಇಸುರು ಉಡಾನೆಯ ಶಿಸ್ತು ಬದ್ಧ ಹೋರಾಟ…ಮಹಮ್ಮದ್ ಸಿರಾಜ್ ನ ಆರ್ಭಟ… ಶಿವಂ ದುಬೆಯ ಆಲ್ ರೌಂಡ್ ಆಟ.. ಇದೆಲ್ಲಾ ವರ್ಕ್ ಔಟಾದ್ರೆ ಮುಗಿಲು ಮುಟ್ಟುತ್ತೆ ಅಭಿಮಾನಿಗಳ ಚೀರಾಟ.. ಮುಂದುವರಿಯುತ್ತೆ ಆರ್ ಸಿಬಿಯ ಗೆಲುವಿನ ಓಟ.. ಯಾಮಾರಿದ್ರೆ ಮಾತ್ರ ಕಲಿಸುತ್ತೆ ಸೋಲಿನ ಪಾಠ.

ಸದ್ಯ ಆರ್ ಸಿಬಿ ತಂಡ 9 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ ಆರು ಪಂದ್ಯಗಳನ್ನು ಗೆದ್ದುಕೊಂಡಿದೆ. ಮೂರು ಪಂದ್ಯಗಳನ್ನು ಸೋಲು ಅನುಭವಿಸಿದೆ. ಒಟ್ಟು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

rcb ipl 2020 saakshatvಇದೀಗ 10ನೇ ಪಂದ್ಯವನ್ನು ಆಡುತ್ತಿದೆ. ಕೆಕೆಆರ್ ವಿರುದ್ಧ ಆರ್ ಸಿಬಿ ಮತ್ತೊಂದು ಗೆಲುವು ದಾಖಲಿಸಿ ಪ್ಲೇ ಆಫ್ ಎಂಟ್ರಿಯನ್ನು ಖಚಿತಪಡಿಸಿಕೊಳ್ಳಲು ಹೋರಾಟ ನಡೆಸಲಿದೆ.

ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕವಾಗಿರುವ ರಾಯಲ್ ಚಾಲೆಂಜರ್ಸ್ ತಂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ.

ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಆರ್ ಸಿಬಿಯ ಭಾಗವಾಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಈ ಬಾರಿ ನಿರಾಸೆ ಮೂಡಿಸುವುದಿಲ್ಲ. ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಅನ್ನೋ ರೀತಿಯಲ್ಲಿ ಆರ್ ಸಿಬಿ ತಂಡ ಆಡುತ್ತಿದೆ.

ಅಂದ ಹಾಗೇ, ಆರ್ ಸಿಬಿ ತಂಡವನ್ನು ಅಭಿಮಾನಿಗಳು ಹೃದಯದಿಂದ ಪ್ರೀತಿಸುತ್ತಿದ್ದಾರೆ. ಬೇರೆ ರಾಜ್ಯಗಳ ಹಾಗೂ ಬೇರೆ ದೇಶದ ಆಟಗಾರರು ಇದ್ರೂ ಕೂಡ ನಮ್ಮವರು ಅನ್ನೋ ಭಾವನೆಯನ್ನಿಟ್ಟುಕೊಂಡಿದ್ದಾರೆ.

virat kohli abd rcb ipl 2020 saakshatvಅದ್ರಲ್ಲೂ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಮೇಲಿನ ಅಭಿಮಾನವನ್ನಂತೂ ಬಣ್ಣಿಸಲು ಸಾಧ್ಯವಿಲ್ಲ.

ಆರ್ ಸಿಬಿಗೆ ಎಬಿಡಿ ಆಮ್ಲಜನಕವಾದ್ರೆ, ವಿರಾಟ್ ಕೊಹ್ಲಿ ಉಸಿರಾಗಿದ್ದಾರೆ. ಇದ್ರಿಂದಲೇ ಆರ್ ಸಿಬಿಯ ಪಂದ್ಯ ನಡೆದಾಗ ಅಭಿಮಾನಿಗಳ ಹೃದಯಬಡಿತ ಕೂಡ ಹೆಚ್ಚಾಗುತ್ತದೆ.

ಒಟ್ಟಿನಲ್ಲಿ ಐಪಿಎಲ್ ಪ್ರಶಸ್ತಿ ಬರವನ್ನು ಎದುರಿಸುತ್ತಿರುವ ಆರ್ ಸಿಬಿ ಈ ಬಾರಿಯಾದ್ರೂ ಪ್ರಶಸ್ತಿ ಗೆಲ್ಲಲೇಬೇಕು ಅನ್ನೋದು ಆರ್ ಸಿಬಿ ಅಭಿಮಾನಿಗಳ ಒಕ್ಕೋರಲ ಕೂಗು.

Tags: #Aaron Finch#Devdutt PadikkalAB de VilliersChris MorrisIndian Premier LeagueIPL 2020kohliRCBRoyal Challengers Bangalorevirat kohliWashington SundarYuzvendra Chahal
ShareTweetSendShare
Join us on:

Related Posts

ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

by Shwetha
June 10, 2026
0

ರಾಜ್ಯ ಸಚಿವ ಸಂಪುಟ ರಚನೆಯಾಗಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಕರ್ನಾಟಕ ರಾಜಕಾರಣದಲ್ಲಿ ವಾಕ್ಸಮರ ತಾರಕಕ್ಕೇರಿದೆ. ಪ್ರಮುಖವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ನಡುವಿನ ಜಟಾಪಟಿ...

ಆರ್‌ಎಸ್‌ಎಸ್ ದೇಶಪ್ರೇಮಿಗಳ ಸಂಘಟನೆ, ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ: ಪ್ರಿಯಾಂಕ್ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು

ಆರ್‌ಎಸ್‌ಎಸ್ ದೇಶಪ್ರೇಮಿಗಳ ಸಂಘಟನೆ, ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ: ಪ್ರಿಯಾಂಕ್ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು

by Shwetha
June 10, 2026
0

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರು ಜವಾಬ್ದಾರಿಯನ್ನು ಮರೆತು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

ನೆಹರು ದಾಖಲೆಯನ್ನು ಹಿಂದಿಕ್ಕಲಿರುವ ಪ್ರಧಾನಿ ಮೋದಿ

ನೆಹರು ದಾಖಲೆಯನ್ನು ಹಿಂದಿಕ್ಕಲಿರುವ ಪ್ರಧಾನಿ ಮೋದಿ

by Shwetha
June 10, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮತ್ತೊಂದು ಮಹತ್ವದ ದಾಖಲೆಯನ್ನು ಸರಿಗಟ್ಟಿದ್ದು, ನಾಳೆಯಿಂದ ಅದನ್ನು ಹಿಂದಿಕ್ಕಲಿದ್ದಾರೆ. ಚುನಾವಣೆಯಲ್ಲಿ ಜನರಿಂದ ಆಯ್ಕೆಯಾಗಿ...

ಅತಿ ವಿನಯಂ ಧೂರ್ತ ಲಕ್ಷಣಂ: ನಾನೇನು ಹರಿದಿಲ್ಲ ಎಂದ ಮೇಲೆ ಸಲಹೆ ಯಾಕೆ? ಡಿಕೆಶಿ ಭೇಟಿಗೆ ಹಳೆಯ ಇತಿಹಾಸ ನೆನಪಿಸಿದ ಹೆಚ್‌ಡಿಕೆ

ಅತಿ ವಿನಯಂ ಧೂರ್ತ ಲಕ್ಷಣಂ: ನಾನೇನು ಹರಿದಿಲ್ಲ ಎಂದ ಮೇಲೆ ಸಲಹೆ ಯಾಕೆ? ಡಿಕೆಶಿ ಭೇಟಿಗೆ ಹಳೆಯ ಇತಿಹಾಸ ನೆನಪಿಸಿದ ಹೆಚ್‌ಡಿಕೆ

by Shwetha
June 10, 2026
0

ರಾಜ್ಯ ರಾಜಕಾರಣದ ದಿಗ್ಗಜರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ವಾಕ್ಸಮರ ಈಗ ಮತ್ತೊಂದು ರೋಚಕ ಘಟ್ಟವನ್ನು ತಲುಪಿದೆ. ಇತ್ತೀಚೆಗೆ...

ದಿನ ಭವಿಷ್ಯ (25-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 10, 2026
0

ದಿನ ಭವಿಷ್ಯ : 10-06-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವ ಗುಣಗಳಿಗೆ ತಕ್ಕ ಮನ್ನಣೆ ಸಿಗುತ್ತದೆ. ಕಚೇರಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram