ADVERTISEMENT
Sunday, November 9, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

RCBಗೆ ಕಾಡುತ್ತಿದೆ ದೊಡ್ಡ ಶನಿ ಕಾಟ

Mahesh M Dhandu by Mahesh M Dhandu
April 16, 2022
in Marjala Manthana, Newsbeat, ಮಾರ್ಜಲ ಮಂಥನ
ipl-2022-3-players-rcb-might-release-ahead-next-season saaksha tv

ipl-2022-3-players-rcb-might-release-ahead-next-season saaksha tv

Share on FacebookShare on TwitterShare on WhatsappShare on Telegram

RCBಗೆ ಕಾಡುತ್ತಿದೆ ದೊಡ್ಡ ಶನಿ ಕಾಟ

ರಾಮೇಶ್ವರಕ್ಕೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಿತಿ. ನಾಯಕ ಬದಲಾದ್ರೂ, ಜರ್ಸಿ ಚೇಂಜ್ ಆದ್ರೂ, ಹೊಸ ಆಟಗಾರರು ಬಂದ್ರೂ ಆ ಒಂದು ಸಮಸ್ಯೆ ಮಾತ್ರ ಆರ್ ಸಿಬಿಯ ತಲೆಮೇಲಿಂದ ಇಳೀತಿಲ್ಲ. ಇದು ಪದೇ ಪದೇ ತಂಡದ ಸೋಲಿಗೆ ಕಾರಣವಾಗುತ್ತಲೇ ಇದೆ. ಕಳೆದ ಕೆಲವು ವರ್ಷಗಳಿಂದ ಬೇತಾಳನಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆನ್ನೇರಿಸುವ ಸಮಸ್ಯೆ ಅಂದ್ರೆ ಅದು ಓಪನಿಂಗ್ ಕಾಂಬಿನೇಷನ್ ಮತ್ತು ಒನ್ ಡೌನ್ ಸಮಸ್ಯೆ..!!

Related posts

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

November 9, 2025
ಸಿಹಿ ಕಬ್ಬು, ಕಹಿ ಸತ್ಯ: ರೈತರಿಗೆ ಹೆಚ್ಚುವರಿ 50 ರೂ. ನೀಡಲು ಸಕ್ಕರೆ ಕಾರ್ಖಾನೆಗಳ ಹಿಂದೇಟು! – ಸತೀಶ್ ಜಾರಕಿಹೊಳಿ

ಸಿಹಿ ಕಬ್ಬು, ಕಹಿ ಸತ್ಯ: ರೈತರಿಗೆ ಹೆಚ್ಚುವರಿ 50 ರೂ. ನೀಡಲು ಸಕ್ಕರೆ ಕಾರ್ಖಾನೆಗಳ ಹಿಂದೇಟು! – ಸತೀಶ್ ಜಾರಕಿಹೊಳಿ

November 9, 2025

ಹೌದು..! 2010 ರ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೆಗಲೇರಿದ ಶನಿ, ಓಪನಿಂಗ್ ಸಮಸ್ಯೆ. ಆರಂಭದಲ್ಲಿ ಇದಕ್ಕೆ ಸಾಕಷ್ಟು ಪ್ರಯೋಗಗಳು ನಡೆದವು. ಕ್ರಿಸ್ ಗೇಲ್ ಮೂಲಕ ಅದಕ್ಕೆ ಉತ್ತರ ಸಿಕ್ಕರೂ ಅವರ ಜೊತೆ ಆರಂಭಿಕರಾಗಿ ಆಡೋದು ಯಾರು ಅನ್ನೋ ಪ್ರಶ್ನೆ ಬಂತು. ಶ್ರೀಲಂಕಾ ಬ್ಯಾಟರ್ ದಿಲ್ ಶಾನ್ ಕೆಲ ವರ್ಷ ಆರಂಭಿಕರಾದ್ರೆ, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್ ಕೂಡ ಆರ್ ಸಿಬಿಯ ಓಪನರ್ ಆಗಿದ್ದರು. 2016ರಲ್ಲಿ ವಿರಾಟ್ ಕೊಹ್ಲಿಯೇ ಆರಂಭಿಕರಾಗಿ ಬಂದು ಆ ಸಮಸ್ಯೆಗೆ ತಿಲಾಂಜಲಿ ಇಟ್ಟರು. ಆದ್ರೆ ಇಲ್ಲಿಂದ ಒನ್ ಡೌನ್ ಸಮಸ್ಯೆ ಉಂಟಾಯಿತು.
ವಿರಾಟ್ ಕೊಹ್ಲಿ ಓಪರ್ ಆಗಿ ಬಂದು ಅದ್ಭುತಗಳನ್ನು ಸೃಷ್ಟಿ ಮಾಡಿದ್ರು. ದಾಖಲೆಗಳನ್ನು ಬರೆದರು. ಆದ್ರೆ ಒನ್ ಡೌನ್ ಸಮಸ್ಯೆ ಮಾತ್ರ ಬೆಳೆಯುತ್ತಲೇ ಹೋಯ್ತು. ಈ ಸಮಸ್ಯೆಗೆ ಮುಲಾಮಿನಂತೆ ಸಾಕಷ್ಟು ಅನುಭವಿ, ಯುವ ಆಟಗಾರರನ್ನ ಟ್ರೈ ಮಾಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

Big change in RCB Star player out saaksha tv

ಹೀಗಾಗಿ 2022ರ ಮೆಗಾ ಹಜಾರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ಪಕ್ಕಾ ಲೆಕ್ಕಾಚಾರ ಹಾಕಿ ತಂಡವನ್ನ ಖರೀದಿ ಮಾಡಿತು. ಫಾಫ್ ಡುಪ್ಲಸಿ ಅವರನ್ನ ಖರೀದಿ ಮಾಡಿ, ಇವರೇ ನಮ್ಮ ಆರಂಭಿಕರು ಅಂತಾ ಸಾರಿ ಘೋಷಿಸಿತ್ತು. ಆದ್ರೆ ಅವರೊಂದಿಗೆ ಯಾರು ಓಪನ್ ಮಾಡ್ತಾರೆ ಅನ್ನೋದು ಮುನ್ನಲೆಗೆ ಬಂತು. ಆರಂಭದಲ್ಲಿ ವಿರಾಟ್ ಕೊಹ್ಲಿಯೇ ಓಪನ್ ಮಾಡ್ತಾರೆ ಅಂತಾ ಹೇಳಲಾಗಿತ್ತು. ಅಂತಿಮವಾಗಿ ಅನೂಜ್ ರಾವತ್ ಈಗ ಇನ್ನಿಂಗ್ಸ್ ಆರಂಭ ಮಾಡ್ತಿದ್ದಾರೆ. ವಿರಾಟ್ ಒನ್ ಡೌನ್ ನಲ್ಲಿ ಕ್ರೀಸ್ ಗೆ ಬರ್ತಿದ್ದಾರೆ.

ಇಲ್ಲಿಗೆ ಸಮಸ್ಯೆ ಬಗೆಹರಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮೊದಲಿಗೆ ಬಂದಿದೆ. ಯಾಕಂದರೇ ಫಾಫ್ ಡುಪ್ಲಸಿ ಮತ್ತು ಅನೂಜ್ ರಾವತ್ ತಂಡಕ್ಕೆ ಉತ್ತಮ ಆರಂಭವನ್ನು ಕೊಡುವಲ್ಲಿ ವಿಫಲರಾಗುತ್ತಿದ್ದಾರೆ. ಮುಖ್ಯವಾಗಿ ಪವರ್ ಪ್ಲೇ ಅನ್ನು ಬಳಸಿಕೊಳ್ಳುವಲ್ಲಿ ಇಬ್ಬರೂ ವಿಫಲರಾಗುತ್ತಿದ್ದಾರೆ. ಫಾಫ್ ಮೊದಲ ಪಂದ್ಯದಲ್ಲಿ ಮಿಂಚಿದ್ರೆ, ಅನೂಜ್ ಮುಂಬೈ ವಿರುದ್ಧ ಅಬ್ಬರಿಸಿದರು. ಆದ್ರೆ ಇನ್ನುಳಿದ ಪಂದ್ಯಗಳಲ್ಲಿ ಇಬ್ಬರೂ ಮಕಾಡೆ ಮಲಗಿದ್ದಾರೆ. ರನ್ ಗಳಿಸೋದು ಇರಲಿ ವಿಕೆಟ್ ಉಳಿಸಿಕೊಂಡರೇ ಸಾಕು ಎಂಬಂತಾಗಿದೆ.

Ipl 2022 rcb biggest problem  Saaksha Tv

ಇತ್ತ ಒನ್ ಡೌನ್ ನಲ್ಲಿ ಬರುವ ವಿರಾಟ್ ಕೊಹ್ಲಿ ಕೂಡ ಮೊದಲಿನ ಖದರ್ ನಲ್ಲಿ ಕಾಣ್ತಿಲ್ಲ. ಒಂದು ಪಂದ್ಯದಲ್ಲಿ ಮಿಂಚಿದ್ರೆ ಎರಡು ಪಂದ್ಯಗಳಲ್ಲಿ ಡಲ್ ಹೊಡೆಯುತ್ತಿದ್ದಾರೆ. ಹೀಗಾಗಿ ಈ ಟಾಪ್ ಆರ್ಡರ್ ವೈಪಲ್ಯ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ಫಾಫ್, ಕೊಹ್ಲಿ ಬೇಗ ಔಟ್ ಆಗುತ್ತಿರುವುದರಿಂದ ಮಿಡಲ್ ಆರ್ಡರ್ ಮತ್ತು ಲೋ ಆರ್ಡರ್ ಬ್ಯಾಟರ್ ಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಉತ್ತಮ ಬ್ಯಾಟಿಂಗ್ ವಿಭಾಗವಿದ್ದರೂ ಪಂದ್ಯ ಸೋಲಬೇಕಾಗುತ್ತಿದೆ.

Tags: #Saaksha TVbangaloreipl 2022RCB
ShareTweetSendShare
Join us on:

Related Posts

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

by Shwetha
November 9, 2025
0

ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ, ಕಾಂಗ್ರೆಸ್‌ಗೆ ಮತ ಹಾಕುವ ಮತದಾರರನ್ನು ವ್ಯವಸ್ಥಿತವಾಗಿ ಗುರುತಿಸಿ, ಅವರ ಮತಗಳನ್ನು ಅಕ್ರಮವಾಗಿ ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡುವ ಮೂಲಕ...

ಸಿಹಿ ಕಬ್ಬು, ಕಹಿ ಸತ್ಯ: ರೈತರಿಗೆ ಹೆಚ್ಚುವರಿ 50 ರೂ. ನೀಡಲು ಸಕ್ಕರೆ ಕಾರ್ಖಾನೆಗಳ ಹಿಂದೇಟು! – ಸತೀಶ್ ಜಾರಕಿಹೊಳಿ

ಸಿಹಿ ಕಬ್ಬು, ಕಹಿ ಸತ್ಯ: ರೈತರಿಗೆ ಹೆಚ್ಚುವರಿ 50 ರೂ. ನೀಡಲು ಸಕ್ಕರೆ ಕಾರ್ಖಾನೆಗಳ ಹಿಂದೇಟು! – ಸತೀಶ್ ಜಾರಕಿಹೊಳಿ

by Shwetha
November 9, 2025
0

ರಾಜ್ಯದ ಕಬ್ಬು ಬೆಳೆಗಾರರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನಿಗದಿಪಡಿಸಿದ ಹೆಚ್ಚುವರಿ 50 ರೂಪಾಯಿಗಳನ್ನು ನೀಡಲು ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ನಕಾರ ವ್ಯಕ್ತಪಡಿಸಿದ್ದಾರೆ. ಈ ಮೂಲಕ...

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

by Shwetha
November 9, 2025
0

"ನಾನು ಪುಣೆಯವಳು, ಆದರೆ ಬಿಹಾರದ ಚುನಾವಣೆಗಾಗಿ ಮತ ಚಲಾಯಿಸಿದ್ದೇನೆ," ಎಂಬರ್ಥದ ಯುವತಿಯೊಬ್ಬಳ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ಇದೀಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಲೋಕಸಭೆ...

ಸಿದ್ದು ಕೆಳಗಿಳಿಸಿದರೆ ಕಾಂಗ್ರೆಸ್ ಖತಂ: ಹೈಕಮಾಂಡ್‌ಗೆ ವರ್ತೂರು ಪ್ರಕಾಶ್ ಖಡಕ್ ವಾರ್ನಿಂಗ್!;ಕಮಲ ನಾಯಕನ ಸಿದ್ದು ಪ್ರೇಮ!

ಸಿದ್ದು ಕೆಳಗಿಳಿಸಿದರೆ ಕಾಂಗ್ರೆಸ್ ಖತಂ: ಹೈಕಮಾಂಡ್‌ಗೆ ವರ್ತೂರು ಪ್ರಕಾಶ್ ಖಡಕ್ ವಾರ್ನಿಂಗ್!;ಕಮಲ ನಾಯಕನ ಸಿದ್ದು ಪ್ರೇಮ!

by Shwetha
November 9, 2025
0

ಕೋಲಾರ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿರುವಾಗಲೇ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ...

ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

by Shwetha
November 9, 2025
0

ಪಾಟ್ನಾ: "ಕ್ರಿಕೆಟ್ ಬ್ಯಾಟ್ ಅನ್ನು ಸರಿಯಾಗಿ ಹಿಡಿಯಲು ಬಾರದ ವ್ಯಕ್ತಿಯೇ ಇಂದು ಇಡೀ ಕ್ರಿಕೆಟ್ ಜಗತ್ತನ್ನು ಆಳುತ್ತಿದ್ದಾರೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram