ಐಪಿಎಲ್ | ಆರ್ ಸಿಬಿಯಲ್ಲಿ ಮೇಜರ್ ಸರ್ಜರಿ.. ಗೆಲುವು ಯಾರಿಗೆ..?
ಐಪಿಎಲ್ ಇಂದಿನ ಪಂದ್ಯದಲ್ಲಿ ರಾಯಲ್ ತಂಡಗಳು ಮುಖಾಮುಖಿಯಾಗಿಲಿವೆ. ಸತತ ಮೂರು ಪಂದ್ಯಗಳನ್ನ ಗೆದ್ದ ಇತಿಹಾಸ ಬರೆದು ಆತ್ಮವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಸವಾಲ್ ಹಾಕಿದೆ.
ಹೆಡ್ ಟು ಹೆಡ್
ಐಪಿಎಲ್ ನಲ್ಲಿ ಈ ಎರಡೂ ತಂಡಗಳು 23 ಪಂದ್ಯಗಳನ್ನಾಡಿದ್ದು, ಇದರಲ್ಲಿ ಎರಡೂ ತಂಡಗಳು ತಲಾ 10 ಪಂದ್ಯಗಳನ್ನ ಗೆದ್ದಿವೆ. ಮೂರು ಪಂದ್ಯಗಳು ನೋ ರಿಸಲ್ಟ್ ಆಗಿವೆ. ಕಳೆದ 2 ಎರಡು ಪಂದ್ಯಗಳನ್ನ ಆರ್ ಸಿಬಿಯೇ ಗೆದ್ದು ಬೀಗಿದೆ.
ಗ್ರೌಂಡ್ ರಿಪೋರ್ಟ್
ನಮಗೆ ತಿಳಿದಿರುವಂತೆ ಮುಂಬೈ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ ಆಗಿದೆ. ಅದೇ ರೀತಿ ಫಾಸ್ಟ್ ಬೌಲರ್ ಗಳಿಗೆ ಹೆಲ್ಫ್ ಫುಲ್ ಆಗಿದೆ. ಮುಖ್ಯವಾಗಿ ಸೆಕೆಂಡ್ ಆಫ್ ನಲ್ಲಿ ಮಂಜು ಬೀಳುವುದರಿಂದ ಬೌಲಿಂಗ್ ಮಾಡುವವರಿಗೆ ಸ್ವಲ್ಪ ಕಷ್ಟವಾಗ್ತಿದೆ. ಬೌಲರ್ ಗಳು ಬಾಲ್ ಅನ್ನ ಗ್ರಿಪ್ ಮಾಡೋಕೆ ತುಂಬಾ ಕಷ್ಟ ಪಡ್ತಾ ಇದ್ದಾರೆ. ಇದು ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲಕರವಾಗಿದೆ.
ಇದೇ ಕಾರಣಕ್ಕೆ ಅಲ್ಲಿ ಯಾರೇ ಟಾಸ್ ವಿನ್ ಆದರೂ ಚೇಸಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಬಲಾಬಲಗಳೇನು..?
ಆರ್ ಸಿಬಿ ವಿಚಾರಕ್ಕೆ ಬಂದ್ರೆ ತಂಡ ತುಂಬಾ ಸಾಲಿಡ್ ಆಗಿ ಕಾಣ್ತಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ತುಂಬಾ ಬ್ಯಾಲನ್ಸಿಂಗ್ ಆಗಿದೆ. ಆದ್ರೆ ತಂಡದಲ್ಲಿ ಆಲ್ ರೌಂಡರ್ ಗಳು ಹೆಚ್ಚಾದ ಕಾರಣ ಒಬ್ಬ ಸ್ಪೆಷಲಿಷ್ಟ್ ಬ್ಯಾಟ್ಸ್ ಮೆನ್ ನ ಅವಶ್ಯಕತೆ ಇದೆ ಅಂತಾ ಅನಿಸುತ್ತಿದೆ. ಇದು ಬಿಟ್ಟರೇ ತಂಡಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಕೈಲ್ ಜೇಮಿಸನ್ಸ್, ಸುಂದರ್ ಲೋ ಆರ್ಡರ್ ನಲ್ಲಿ ತಂಡಕ್ಕೆ ನೆರವಾಗ್ತಿರೋದು ದೊಡ್ಡ ತಲೆನೋವನ್ನ ದೂರ ಮಾಡಿದೆ. ಇನ್ನು ಕಳೆದ ಮ್ಯಾಚ್ ನಲ್ಲಿ ಚಾಹಲ್ ಕಂ ಬ್ಯಾಕ್ ಮಾಡಿರೋದು ತಂಡಕ್ಕೆ ಬೂಸ್ಟ್ ನೀಡಿದೆ. ಮುಖ್ಯವಾಗಿ ಗ್ಲೇನ್ ಮ್ಯಾಕ್ಸ್ ವೆಲ್, ಎಬಿಡಿ ಫಾರ್ಮ್ ತಂಡದ ಆನೆ ಬಲವಾಗಿದೆ. ಇವರೊಂದಿಗೆ ಕೊಹ್ಲಿ ಬ್ಲಾಸ್ಟ್ ಆದ್ರೆ ಆರ್ ಸಿಬಿ ಗೆಲ್ಲೋದ್ರಲ್ಲಿ ಡೌಟೇ ಇಲ್ಲ.
ಇನ್ನ ರಾಜಸ್ಥಾನ್ ತಂಡದ ವಿಚಾರಕ್ಕೆ ಬಂದ್ರೆ ತಂಡದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡಲ್ಲೂ ಸಮಸ್ಯೆಗಳು ಕಾಣುತ್ತಿದೆ. ಮುಖ್ಯವಾಗಿ ವಿದೇಶಿ ಆಟಗಾರರ ಕೊರತೆ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಬೆನ್ ಸ್ಟ್ರೋಕ್ಸ್, ಆರ್ಚರ್ ಅಲಭ್ಯತೆ ಎದ್ದು ಕಾಣಿಸುತ್ತಿದೆ. ಇನ್ನೊಂದು ವಿಚಾರ ಏನಂದ್ರೆ ಲೋಕಲ್ ಆಟಗಾರರು ಕೂಡ ಟಚ್ ಅಲ್ಲಿ ಕಾಣ್ತೇ ಇಲ್ಲ. ಪರಾಗ್, ಮನನ್ ವೋಹ್ರಾ, ರಾಹುಲ್ ಟೆವಾಟಿಯಾ, ಶಿವಂ ದುಬೆ ಬ್ಯಾಟ್ ಯಿಂದ ರನ್ ಗಳೇ ಬರ್ತಿಲ್ಲ. ಬ್ಯಾಟಿಂಗ್ ನಲ್ಲಿ ಬಟ್ಲರ್, ಸಂಜು ಸ್ಯಾಮ್ಸನ್ ಬಿಟ್ಟರೇ ಬೇರ್ಯಾರು ಫಾರ್ಮ್ ನಲ್ಲಿಲ್ಲ.
ಬೌಲಿಂಗ್ ನಲ್ಲೂ ಸಕಾರಿಯಾ ಬಿಟ್ಟರೇ ಬೇರ್ಯಾರು ಬ್ಯಾಟ್ ಮೆನ್ ಗಳ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನೇ ಮಾಡ್ತಿಲ್ಲ.
ಸಾಂಭವ್ಯ ತಂಡ
ಆರ್ ಸಿಬಿ ಇವತ್ತಿನ ಪಂದ್ಯದಲ್ಲಿ ಒಂದು ಬದಲಾವಣೆಯನ್ನ ಮಾಡಬಹುದು. ಯಾಕೆಂದ್ರೆ ಇಂದಿನ ಪಂದ್ಯ ಮುಂಬೈನಲ್ಲಿ ನಡೆಯುತ್ತಿರೋ ಕಾರಣ ಒಬ್ಬ ಎಕ್ಸ್ಟ್ರಾ ಬ್ಯಾಟ್ಸ್ ಮೆನ್ ಅನ್ನ ಆಡಿಸೋ ಸಾಧ್ಯತೆ ಇದೆ. ಕಳೆದ ಮ್ಯಾಚ್ ನಲ್ಲಿ ಕ್ರಿಸ್ಟಿಯನ್ ಅವರನ್ನ ಕೈಬಿಟ್ಟು, ಕೇವಲ ಮೂರು ಮಂದಿ ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಫಿನ್ ಅಲೆನ್ ಅವರನ್ನ ಆಡಿಸುವ ಸಾಧ್ಯತೆ ಇದೆ. ಯಾಕೆಂದ್ರೆ ಮುಂಬೈ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ ಆಗಿರುವುದರಿಂದ ಅಲೆನ್ ಬ್ಲಾಸ್ಟ್ ಆಗುವ ಸಾಧ್ಯತೆಗಳಿವೆ.
ಇನ್ನುಳಿದಂತೆ ವಿರಾಟ್, ದೇವದತ್ ಪಡಿಕಲ್, ಅಲೆನ್, ಮ್ಯಾಕ್ಸ್ ವೆಲ್, ಎಬಿಡಿ ವಿಲಿಯರ್ಸ್, ಪಟಿದಾರ್, ವಾಷಿಂಗ್ ಸುಂದರ್, ಜೆಮಿನ್ಸನ್, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಚಾಹಲ್.
ರಾಜಸ್ಥಾನ್ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲದೇ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಯಾಕೆಂದ್ರೆ ಅವರಲ್ಲಿ ಹೆಚ್ಚಿನ ಆಟಗಾರರ ಆಯ್ಕೆ ಇಲ್ಲ.
ಜೋಸ್ ಬಟ್ಲರ್, ಮನನ್ ವೊಹ್ರಾ,ಸಂಜು ಸ್ಯಾಮನ್ಸ್,ದೇವಿಡ್ ಮಿಲ್ಲರ್, ರಿಯಾನ್ ಪರಾಗ್, ಶಿವಂ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್,ಉನಾದ್ಕಟ್, ಮುಸ್ತಾಫಿಜೂರ್, ಚೇತನ್ ಸಕಾರಿಯಾ.
ವಿನ್ನಿಂಗ್ ಚಾನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿನ್ನಿಂಗ್ ಫೆವರೇಟ್ ಆಗಿದೆ. ಯಾಕೆಂದ್ರೆ ಟೀಂ ವೆಲ್ ಸೆಟಲ್ ಆಗಿದೆ. ಸತತ ಮೂರು ಮ್ಯಾಚ್ ಗಳನ್ನ ಗೆದ್ದಿರುವ ಆತ್ಮವಿಶ್ವಾಸ ತಂಡಕ್ಕೆ ಬೂಸ್ಟ್ ನೀಡುತ್ತೆ. ಆದ್ರೆ ಟಾಸ್ ಮುಖ್ಯ ಪಾತ್ರ ವಹಿಸುತ್ತೆ. ಆನ್ ಪೇಪರ್ ಟೀಂ ನೋಡಿದ್ರೆ 100% ಆರ್ ಸಿಬಿ ಗೆಲ್ಲುವ ಫೇವರೆಟ್ ತಂಡ ಅನ್ನೋದ್ರಲ್ಲಿ ಡೌಟ್ ಇಲ್ಲ.