ADVERTISEMENT
Saturday, March 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ನೀಲಿನಾ, ಹಳದಿನಾ…?ಫಸ್ಟ್ ಮ್ಯಾಚ್ ಗೆಲ್ಲೋದು ಇವರೇನಾ..?

admin by admin
September 18, 2021
in IPL 2021, Sports
Share on FacebookShare on TwitterShare on WhatsappShare on Telegram

ಐಪಿಎಲ್​​ 2ನೇ ಇನ್ನಿಂಗ್ಸ್​​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಯುಎಇ ಆವೃತ್ತಿಯ ಮೊದಲ ಪಂದ್ಯ ದುಬೈ ಇಂಟರ್​​ ನ್ಯಾಷನಲ್​​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​​ ಮುಂಬೈ ಮತ್ತು ಮಾಜಿ ಚಾಂಪಿಯನ್​ ಚೆನ್ನೈ ಸೂಪರ್​​ ಕಿಂಗ್ಸ್​​​ ನಡುವೆ ಮೊದಲ ಮ್ಯಾಚ್​​ ನಡೆಯಲಿದೆ. ಹೀಗಾಗಿ ಗೆಲ್ಲೋದು ನೀಲಿನಾ, ಹಳದಿನಾ ಅನ್ನೋ ಕುತೂಹಲ ಹೆಚ್ಚಿದೆ.

ಎರಡೂ ತಂಡಗಳಿಗೂ ಇದು 8ನೇ ಪಂದ್ಯ. ಅಂಕಪಟ್ಟಿಯಲ್ಲಿ ಯೆಲ್ಲೋ ಬ್ರಿಗೇಡ್​​ 10 ಅಂಕ ಸಂಪಾದಿಸಿ ಉತ್ತಮ ರನ್​​ ರೇಟ್​​ನೊಂದಿಗೆ 2ನೇ ಸ್ಥಾನದಲ್ಲಿದೆ. ಬ್ಲೂ ಬಾಯ್ಸ್​​​ ಮುಂಬೈ ಇಂಡಿಯನ್ಸ್​​​ 7 ಪಂದ್ಯಗಳಿಂದ 8 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಚೆನ್ನೈ ಈ ಪಂದ್ಯ ಗೆದ್ದರೆ 12 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಜಿಗಿಯಲಿದೆ. ಮುಂಬೈ ಈ ಪಂದ್ಯ ಗೆದ್ದರೆ 10 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಏರಲಿದೆ.

Related posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

March 7, 2026
ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

March 7, 2026

ಟೀಮ್​ ಕಾಂಬಿನೇಷನ್​​​ ಕಡೆ ಗಮನ ಕೊಟ್ರೆ ನೀಲಿನಾ, ಹಳದಿನಾ ಅನ್ನೋ ಮಟ್ಟಕ್ಕಿದೆ. ಚೆನ್ನೈ ರುತುರಾಜ್​​ ಗಾಯಕ್ವಾಡ್​​​​ ಮತ್ತು ಮೊಯಿನ್​​ ಆಲಿ ಜೊತೆ ಆರಂಭ ಮಾಡುವ ಸಾಧ್ಯತೆ ಇದೆ. ಫಾಫ್​​ ಫಿಟ್​​ ಆಗಿದ್ದರೆ ಮೊಯಿನ್​​​ ಕೆಳಕ್ರಮಾಂಕದಲ್ಲಿ ಆಡಬಹುದು. ಸುರೇಶ್​​ ರೈನಾ ಮತ್ತು ಅಂಬಟಿ ರಾಯುಡು ಟಾಪ್​​ ಆರ್ಡರ್​​ನ ರಾಕೆಟ್​​ ಗಳು. ಕ್ಯಾಪ್ಟನ್​​ ಎಂ.ಎಸ್​.ಧೋನಿ ಮತ್ತು ರವೀಂದ್ರ ಜಡೇಜಾ ಸಿಕ್ಸರ್​​ ಹಬ್ಬಕ್ಕೆ ಚಾಲನೆ ನೀಡುವ ತಯಾರಿಯಲ್ಲಿದ್ದಾರೆ. ಡ್ವೈನ್​​ ಬ್ರಾವೋ ಕೆರಿಬಿಯನ್​ ಪ್ರೀಮಿಯರ್​ ಲೀಗ್​​ ನಲ್ಲಿ ತೋರಿದ ಪ್ರದರ್ಶನವನ್ನು ಇಲ್ಲೂ ಮುಂದುವರೆಸಿದ್ರೂ ಚೆನ್ನೈ ಆರಾಮವಾಗಿರಬಹುದು. ಸ್ಯಾಮ್​ ಕರ್ರನ್​​ ಎಲ್ಲಿಬೇಕೋ ಅಲ್ಲಿ ಬ್ಯಾಟಿಂಗ್​ ಮಾಡಬಹುದು. ಶಾರ್ದೂಲ್​​ ಠಾಕೂರ್​ ಮತ್ತು ದೀಪಕ್​​ ಚಹರ್​ ಕೂಡ ಸಿಕ್ಸರ್,​​ ಬೌಂಡರಿ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಲುಂಗಿ ಎನ್​ ಗಿಡಿ ಒಬ್ರೇ ಬ್ಯಾಟಿಂಗ್​​ ನಲ್ಲಿ ಹೆಸರು ಮಾಡಿಲ್ಲ. ಚೆನ್ನೈ ಬೌಲಿಂಗ್​ ಕಾಂಬಿನೇಷನ್​ ಕೂಡ ಸಖರ್​ ಇದೆ. ಲುಂಗಿ, ಶಾರ್ದೂಲ್​​ ದೀಪಕ್​​ ಮತ್ತು ಸ್ಯಾಮ್​ ಕರ್ರನ್​​ ವೇಗದ ಸಾರಥಿಗಳು. ಡ್ವೈನ್​​ ಬ್ರಾವೋ ಸ್ಲೋವರ್​​ ಮ್ಯಾಜಿಕ್​​ ದುಬೈನಲ್ಲಿ ತುಂಬಾ ಪ್ರಮುಖವಾಗಿರುತ್ತದೆ. ಜಡೇಜಾ ಮತ್ತು ಮೊಯಿನ್​​ ಆಲಿಯ ಸ್ಪಿನ್​ ಮ್ಯಾಜಿಕ್​​ ಬಗ್ಗೆಯೂ ಸಖತ್​ ನಂಬಿಕೆ ಇದೆ.

ಮುಂಬೈ ಇಂಡಿಯನ್ಸ್​​ ಕೂಡ ಸಾಮಾನ್ಯ ತಂಡವಲ್ಲ. ರೋಹಿತ್​​, ಕ್ವಿಂಟಾನ್​​ ಡಿ ಕಾಕ್​​, ಇಶಾನ್​ ಕಿಶಾನ್​​, ಸೂರ್ಯ ಕುಮಾರ್​​ ಯಾದವ್​  ಮತ್ತು ಸೌರಭ್​ ತಿವಾರಿ ಬ್ಯಾಟಿಂಗ್​ ಟ್ರಂಪ್​ ಕಾರ್ಡ್​ ಗಳು. ಕೈರಾನ್​ ಪೊಲ್ಲಾರ್ಡ್​, ಹಾರ್ಧಿಕ್​ ಪಾಂಡ್ಯ ಮತ್ತು ಕ್ರುನಾಲ್​ ಪಾಂಡ್ಯ ಬೌಂಡರಿ, ಸಿಕ್ಸರ್​​ ಗಳಿಗೆ ಫೇಮಸ್​​. ಇವರ ಜೊತೆಗೆ ಜೇಮ್ಸ್​ ನಿಶಾಮ್​​​​ ಬಲವೂ ಇದೆ.ರಾಹಲ್​ ಚಹರ್​, ಜಸ್ಪ್ರೀತ್​ ಬುಮ್ರಾ ಮತ್ತು ಟ್ರೆಂಟ್​ ಬೋಲ್ಡ್​​ ಎಲ್ಲಾ ಪಿಚ್​​​ ಗಳಲ್ಲೂ ಬ್ಯಾಟ್ಸ್​​ ಮನ್​​ಗಳಿಗೆ ಸವಾಲೊಡ್ಡುವುದು ಖಚಿತ.

ದುಬೈ ಇಂಟರ್​ ನ್ಯಾಷನಲ್​ ಸ್ಟೇಡಿಯಂ ಪಿಚ್​​​ ಸ್ಪಿನ್​​ ಫ್ರೆಂಡ್ಲಿ ಆಗಿದ್ದರೂ ಮೊದಲ ಪಂದ್ಯವಾಗಿರುವುದರಿಂದ ದೊಡ್ಡ ತಿರುವು ಸಿಗುವುದು ಸಂಶಯ. ಹೀಗಾಗಿ ಬೌಲಿಂಗ್​​ ವೇರಿಯೇಷನ್​​ ಹೊಂದಿರುವ ಬೌಲರ್​​ ಗಳು ಟ್ರಂಪ್​​ ಕಾರ್ಡ್​ ಆಗುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಐಪಿಎಲ್​​​​​​​​ ಧಮಾಕಾ ಆರಂಭವಾಗುತ್ತಿರುವುದು ಕ್ರಿಕೆಟ್​ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

Tags: CricketIPL
ShareTweetSendShare
Join us on:

Related Posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

by admin
March 7, 2026
0

ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

by Shwetha
March 7, 2026
0

ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಅತ್ಯಂತ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ...

ರನ್ ಸುನಾಮಿಗೆ ಕೊಚ್ಚಿ ಹೋದ ಇಂಗ್ಲೆಂಡ್: ವಾಂಖೆಡೆಯಲ್ಲಿ ಸಂಜು ಆರ್ಭಟ, ಬೆಥೆಲ್ ಏಕಾಂಗಿ ಹೋರಾಟ ವಿಫಲ,ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ರನ್ ಸುನಾಮಿಗೆ ಕೊಚ್ಚಿ ಹೋದ ಇಂಗ್ಲೆಂಡ್: ವಾಂಖೆಡೆಯಲ್ಲಿ ಸಂಜು ಆರ್ಭಟ, ಬೆಥೆಲ್ ಏಕಾಂಗಿ ಹೋರಾಟ ವಿಫಲ,ಫೈನಲ್‌ಗೆ ಲಗ್ಗೆ ಇಟ್ಟ ಭಾರತ

by Shwetha
March 6, 2026
0

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ಉಸಿರುಬಿಗಿ ಹಿಡಿಯುವಂತಹ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಿದೆ. ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಹಣಾಹಣಿಯಲ್ಲಿ...

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

by Shwetha
March 3, 2026
0

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ಆಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಟೂರ್ನಿಯಲ್ಲಿ ನಿರಾಶಾಜನಕ ಪ್ರದರ್ಶನ...

ajay sharma, jammu kashmir cricket head coach

ಅಂದು ಸರ್ವಾಧಿಕಾರಿ.. ಅಜಯ್ ಶರ್ಮಾ ಜಮ್ಮು ಕಾಶ್ಮೀರ ಕ್ರಿಕೆಟ್ ಆಟಗಾರರಿಗೆ ಇಂದು ಅಜ್ಜು ಭಾಯ್ ಆಗಿದ್ದೇಗೆ..?

by admin
February 25, 2026
0

ಭೈಯೋಂ ಮೇ ಭಾಯಿ ಕೈಸಾ ಹೋ, ಅಜ್ಜು ಭಾಯಿ ಜೈಸಾ ಹೋ..! (ಅಣ್ಣಂದಿರಲ್ಲಿ ಅಣ್ಣ ಹೇಗಿರಬೇಕು.. ಅಜ್ಜು ಭಾಯಿಯಂತಿರಬೇಕು) ಇದು ಅಜಯ್ ಶರ್ಮಾ ಅವರನ್ನು ಜಮ್ಮು ಕಾಶ್ಮೀರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram