ಯಾರನ್ನ ಸಿಎಂ ಮಾಡಬೇಕು ಎನ್ನುವುದು ಮತದಾರನ ಆಯ್ಕೆ; HDK ಬ್ರಾಹ್ಮಣ ಹೇಳಿಕೆಗೆ ಸುಭುದೇಂದ್ರತೀರ್ಥ ಶ್ರೀ ಉತ್ತರ…
ಪ್ರಹ್ಲಾದ್ ಜೋಶಿ ಅವರನ್ನ ನಿಂದಿಸುವ ಬರದಲ್ಲಿ ಬ್ರಾಹ್ಮಣರ ಬಗ್ಗೆ ಮಾತನಾಡಿ ಹೆಚ್ ಡಿ ಕುಮಾರ ಸ್ವಾಮಿ ತೊಂದರೆಗೆ ಸಿಲುಕಿದ್ದಾರೆ. ಈ ಕುರಿತು ಬಾಗಲಕೋಟೆಯಲ್ಲಿ ಮಂತ್ರಾಲಯದ ಸುಭುದೇಂದ್ರತೀರ್ಥ ಸ್ವಾಮೀಜಿ ಹೇಳಿಕೆ “ಮುಖ್ಯವಾಗಿ ಪಕ್ಷಗಳು ಜಾತ್ಯಾತೀತ ಅನ್ನೋದಕ್ಕಿಂತ ನಮ್ಮ ದೇಶವೇ ಜಾತ್ಯಾತೀತ ಇಂತಹ ದೇಶದಲ್ಲಿ ಒಂದು ಜಾತಿಯ ಬಗ್ಗೆ ನಿಂದನೆ, ಇನ್ನೊಂದು ಜಾತಿ ಬಗ್ಗೆ ವಿಶೇಷ ಹೊಗಳಿಕೆ ಸಂವಿಧಾನಕ್ಕೆ ನಾವು ಮಾಡುವ ಅಪಚಾರ.”
ಪ್ರಹ್ಲಾದ್ ಜೋಶಿ ಟಾರ್ಗೆಟ್ ಮಾಡಿ ಹೆಚ್ಡಿಕೆ ಮಾತನಾಡಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮಿಗಳು “ವ್ಯಕ್ತಿಗತವಾಗಿ ಯಾರನ್ನೇ ಆಯ್ಕೆ ಮಾಡೋದು ಮತದಾರರು. ಪಕ್ಷಗಳು
ಮತದಾರರು ಪ್ರಹ್ಲಾದ್ ಆಗಬೇಕು, ಬೇಡ ಅಂತ ಹೇಳಿದ್ರೆ ಆ ವಿಚಾರ ಬೇರೆ, ಆದ್ರೆ ವ್ಯಕ್ತಿಗಳು ಇಂತವ್ರೇ ಆಗಬೇಕು, ಆಗಬಾರದು ಅಂತಾ ಹೇಳೋದಾದ್ರೆ ಅದು ಡೆಮಾಕ್ರಟಿ ಆಗಲ್ಲ, ಅದೊಂದು ಡಿಕ್ಟೇಕ್ಟರಶಿಪ್ ಆಗುತ್ತದೆ. ಈ ತರಹದ ಮಾತುಗಳು ಅರ್ಥಹೀನ ಎಂದು ಸ್ವಾಮಿಜಿ ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ರಾಜ್ಯದ ಬ್ರಾಹ್ಮಣರಲ್ಲಿ ಒಡೆದಾಳು ನೀತಿ ಮಾಡ್ತಿದಾರಾ ಎಂಬ ಪ್ರಶ್ನೆ ಉತ್ತರಿಸಿ.
“ನಾವೆಲ್ಲರೂ ಭಾರತೀಯರು ಎಂಬ ಉದಾತ್ತ ಭಾವನೆ ಇದ್ರೆ ಮಾತ್ರ ಭದ್ರತೆ, ದೇಶಪ್ರೇಮ, ಅಭಿವೃದ್ಧಿ. ನಾವು ಒಂದು ತಾಯಿಯ ಮಕ್ಕಳು, ನಾವೆಲ್ಲ ಭಾರತಾಂಬೆಯ ಮಕ್ಕಳು ಅದ್ರಲ್ಲಿ ದೊಡ್ಡಮಗ, ಚಿಕ್ಕಮಗ, ಹೆಣ್ಣಮಗ, ಮಗಳು ಹೀಗೆ ಬೇರೆ ಭಾಗದ ಪ್ರಾಂತಗಳಿರಬಹುದು, ಭಾರತೀಯರೆಲ್ಲರೂ ನಾವು ಅಣ್ಣ ತಮ್ಮಂದಿರಿದ್ದಂತೆ. ಆದ್ದರಿಂದ ಸೌಹಾರ್ದತೆ ಅನ್ನೋದು ಇರಬೇಕು. ಪರಸ್ಪರ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯಗಳು, ಪರಸ್ಪರ ಜಾತಿಗಳಲ್ಲಿ ಭಿನ್ನಾಭಿಪ್ರಾಯಗಳು. ಪರಸ್ಪರ ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯಗಳು ತಂದ್ರೆ . ದೇಶದ ಅಭಿವೃದ್ಧಿಗೆ ರಾಜ್ಯದ ಅಭಿವೃದ್ಧಿಗೆ. ಜನತೆಯ ಕಲ್ಯಾಣಕ್ಕೆ ಅಡ್ಡಿಯಾಗುತ್ತದೆ.
It is the voter’s choice who should be made the CM; Subhudendratirtha Sri Answer to HDK Brahmin statement…