Jammu and Kashmir: ಗಸ್ತು ತಿರುಗುವ ವೇಳೆ ಕಂದರಕ್ಕೆ ಬಿದ್ದು ಸಾವನ್ನಪ್ಪಿದ ಮೂವರು ಯೋಧರು…
ಜಮ್ಮು ಮತ್ತು ಕಾಶ್ಮೀರದಲ್ಲಿ ದುರಂತ ಘಟನೆಯೊಂದು ನಡೆದಿದ್ದು, ಉತ್ತರ ಕಾಶ್ಮೀರದ ಕುಪ್ವಾರದ ಮಚಲ್ ಸೆಕ್ಟರ್ನಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದ ಮೂವರು ಯೋಧರು ಆಕಸ್ಮಿಕವಾಗಿ ಮಂಜು ತುಂಬಿದ್ದ ಕಂದರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ
ಡೋಗ್ರಾ ರೆಜಿಮೆಂಟ್ನ 14ನೇ ಬೆಟಾಲಿಯನ್ಗೆ ಸೇರಿದ ಮೂವರು ಯೋಧರು ಹಿಮ ಸುರಿಯತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನೂ ಲೆಕ್ಕಿಸದೇ ದೇಶಕ್ಕಾಗಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಹಿಮಾಪಾತವಾಗಿದ್ದ ಜಾಗದಲ್ಲಿ ಮಂಜು ಕುಸಿದಿದ್ದರಿಂದ ಕಂದರಕ್ಕೆ ಕುಸಿದು ಸೈನಿಕರು ಪ್ರಾಣ ತೆತ್ತಿದ್ದಾರೆ.
ಮೃತ ಪಟ್ಟವರಲ್ಲಿ ಇಬ್ಬರು ಸೈನಿಕರು ಮತ್ತು ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದ್ದಾರೆ. ಮಂಗಳವಾರ ಸಂಜೆ 6.30 ರ ಸುಮಾರಿಗೆ, ಮೂವರು ಮುಂಭಾಗದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಘಟನೆ ನಡೆದಿದೆ. ಮೂರು ಮೃತದೇಹಗಳು ಪತ್ತೆಯಾಗಿವೆ ಎಂದು ಚಿನಾರ್ ಕೋರ್ ಅಧಿಕಾರಿಗಳು ತಿಳಸಿದ್ದಾರೆ. ಮೃತಪಟ್ಟ ಯೋಧರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.
Jammu and Kashmir: Three soldiers died after falling into a ravine while on patrol.