`ಮೀಸಲಾತಿ ಹೋರಾಟದ ವೇಳೆ RSS ನಾಯಕರು ಸಂಪರ್ಕಿಸಿದ್ದು ನಿಜ’
ಬೆಂಗಳೂರು : ಪಂಚಮಸಾಲಿಗಳಿಗೆ 2ಎ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಆರ್ ಎಸ್ ಎಸ್ ನಾಯಕರು ನಮ್ಮನ್ನು ಸಂಪರ್ಕಿಸಿದ್ದು ಮಾತನಾಡಿದ್ದು ನಿಜ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಹೋರಾಟ ಸ್ಥಗಿತಗೊಳಿಸಿದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಉಪಚುನಾವಣೆಗೂ ಮೀಸಲು ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿರೋದಕ್ಕು ಸಂಬಂಧವಿಲ್ಲ.
ಆದರೆ ಉಪಚುನಾವಣೆ ಕಾರಣಕ್ಕೆ ಸರ್ಕಾರ ಹೆದರಿ ಮೀಸಲಾತಿ ನೀಡುವ ಭರವಸೆ ನೀಡಿದೆ. ನಿಶ್ಚಿತವಾಗಿ ಇದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಹೋರಾಟದ ವೇಳೆ ಆರ್ ಎಸ್ ಎಸ್ ನಾಯಕರು ಸಂಪರ್ಕಿಸಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿ, ಹೌದು..! ಹೋರಾಟದ ಸಂದರ್ಭದಲ್ಲಿ ಆರ್ ಎಸ್ ಎಸ್ ನಾಯಕರು ನಮ್ಮನ್ನು ಸಂಪರ್ಕಿಸಿದ್ದು ಮಾತನಾಡಿದ್ದು ನಿಜ.
ಒಂದು ವೇಳೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಿದ್ರೆ, ಪಂಚಮಸಾಲಿ ಸಮುದಾಯದವರೇ ಒಬ್ಬರು ಸಿಎಂ ಆಗುತ್ತಾರೆ.
ಅವರು ಯಾರು ಎಂಬುದು ಮೋದಿ ಮತ್ತು ಅಮಿತ್ ಷಾ ಗೆ ಚೆನ್ನಾಗಿ ಗೊತ್ತು ಎಂದು ಹೊಸ ಬಾಂಬ್ ಸಿಡಿಸಿದ್ರು.