ಜೆಡಿಎಸ್ ಯಾವುದೇ ಪಕ್ಷದ ಜೊತೆ ವಿಲೀನವಾಗಲ್ಲ : ಸುರೇಶ್ ಗೌಡ
ಮಂಡ್ಯ: ನಮ್ಮ ಜೆಡಿಎಸ್ ಪಕ್ಷ ಯಾವುದೇ ಪಕ್ಷದ ಜೊತೆ ವಿಲೀನವಾಗಲ್ಲ. ಆದರೆ ವಿಷಯಾಧಾರಿತವಾಗಿ ಯಾರನ್ನಾದರೂ ಬೆಂಬಲಿಸಬಹುದು ಅಷ್ಟೇ ಎಂದು ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ಜೆಡಿಎಸ್ ಪಕ್ಷ ಬಿಜೆಪಿ ಬಗ್ಗೆ ಸಾಫ್ಟ್ ಕರ್ನರ್ ಹೊಂದಿರೋದು ಈಗ ಜಗತ್ ಜಾಹೀರಾಗಿದೆ. ಈ ಹಿನ್ನೆಲೆ ಜೆಡಿಎಸ್ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಹೋಗುತ್ತೆ ಎಂಬ ಚರ್ಚೆಗಳು ಈಗ ರಾಜಕೀಯ ವಲಯದಲ್ಲಿ ಶುರುವಾಗಿವೆ. ಈ ಬಗ್ಗೆ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೌಡ, ಜೆಡಿಎಸ್ ಪಕ್ಷ ವಿಲೀನದ ಬಗ್ಗೆ ನಮ್ಮ ಮಾಜಿ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾವು ಎಲ್ಲೂ ಪಕ್ಷವನ್ನು ವಿಲೀನ ಮಾಡುತ್ತೀವಿ ಅಂತಾ ಹೇಳಿಲ್ಲ. ಇದೆಲ್ಲಾ ಸೃಷ್ಟಿ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸುರೇಶ್ ಗೌಡ, ಈ ವಿಲೀನದ ವಿಚಾರವನ್ನು ಶುರು ಕಾಂಗ್ರೆಸ್ ನವರು ಮಾಡಿದ್ದಾರೆ. ಅವರಿಗೆ ಎಲ್ಲೋ ಸ್ವಲ್ಪ ನೋವಾಗ್ತಿರಬಹುದು. ಒಂದು ಕಡೆ ಈ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ತೀರ್ಮಾನದಲ್ಲಿದ್ದಾರೆ. ಅದಕ್ಕೆ ಈ ತರಹದ ಕತೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel