ಜೆಡಿಎಸ್ ಸತ್ತಿರುವ ಪಕ್ಷ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ : ಜಮೀರ್
ಬಾಗಲಕೋಟೆ : ಹೆಚ್ ಡಿ ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಗುಡುಗಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜೆಡಿಎಸ್ ವಿರುದ್ಧ ಕಿಡಿಕಾರಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ..?
ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಸೇರಿಕೊಂಡಿದೆ. ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವೇಳೆ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದೆ.
ಜೆಡಿಎಸ್ ಮೊದಲು ಎಸ್ ತೆಗೆಯಲಿ, ಇದು ಯಾವ ಜಾತ್ಯತೀತ ಪಕ್ಷ. ಜೆಡಿಎಸ್ ಈಗ ಸತ್ತಿರುವ ಪಕ್ಷ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅಂತ ಲೀಡರ್ ನಾನು ನೋಡಿಯೇ ಇಲ್ಲ. ಅವರು ಜೆಡಿಎಸ್ ನಲ್ಲಿದ್ದಾಗ 59 ಸೀಟ್ ಬಂದಿತ್ತು.
ಈಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೀಡರ್ ಎಂದು ಹೇಳ್ತಾರೆ.
ಈಗ ಅವರಿಗೆ 59 ನಂಬರ್ ರೀಚ್ ಮಾಡೋಕೆ ಆಗಿಲ್ಲ. ಅವರು ಯಾವ ಸೀಮೆ ಲೀಡರ್ ಎಂದು ಜಮೀರ್ ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ಬಗ್ಗೆ ಮಾತನಾಡಿ, ಇಬ್ರಾಹಿಂ ಅವರು ಸೋತರೂ 2 ಬಾರಿ ಎಂಎಲ್ ಸಿ ಆಗಿದ್ದರು. ಇದಕ್ಕಿಂದ ಅವರಿಗೆ ಇನ್ನೇನು ಬೇಕು.
ಕಾಂಗ್ರೆಸ್ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ಸಿಕ್ಕಿದೆ. 120 ಕೋಟಿ ಇದ್ದದ್ದು 3,100 ಕೋಟಿಗೆ ಹೆಚ್ಚಿಸಿದ್ದರು.
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿಲ್ಲ ಅಂತಿದ್ದಾರಲ್ಲ. ಅನುದಾನ ಹೆಚ್ಚಿಸಿದ ಸಮಯದಲ್ಲಿ ಇಬ್ರಾಹಿಂ ಕಾಂಗ್ರೆಸ್ನಲ್ಲಿದ್ರು.
ಆಗ ಏಕೆ ಸಿ.ಎಂ.ಇಬ್ರಾಹಿಂ ಏನೂ ಮಾತನಾಡಿಲ್ಲವೆಂದು ಪ್ರಶ್ನೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel