ಜೆಡಿಎಸ್ ನ ಇನ್ನೊಂದು ವಿಕೆಟ್ ಪತನ : ಶ್ರೀನಿವಾಸ ಗೌಡ ಭೇಟಿ ರಹಸ್ಯವೇನು..? JDS MLA saaksha tv
ಬೆಂಗಳೂರು : ಶಾಸಕ ಜಿ.ಟಿ.ದೇವೇಗೌಡ ಬೆನ್ನಲ್ಲೇ ಜೆಡಿಎಸ್ ನ ಮತ್ತೊಬ್ಬ ಶಾಸಕ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ.
ಜೆಡಿಎಸ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಾ ಕಾಂಗ್ರೆಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿರುವ ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಕೈ ಹಿಡಿಯಲು ಕರಸತ್ತು ಆರಂಭಿಸಿದ್ದಾರೆ.
ಕೆ ಸಿ ವ್ಯಾಲಿ ನೀರಿನ ವಿಚಾರವಾಗಿ ಮೊನ್ನೆ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದ ಶ್ರೀನಿವಾಸ್ ಗೌಡ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕೋಲಾರದ ಮೂಲಗಳ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀನಿವಾಸ ಗೌಡ ಕಾಂಗ್ರೆಸ್ ಸೇರಲು ಇಚ್ಛಿಸಿದ್ದಾರಂತೆ.
ಈ ಬಗ್ಗೆ ಈಗಾಗಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.