Monday, September 25, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಾಯುವಿಹಾರಕ್ಕೆ ಹೊರಟಿದ್ದಾಗ ಆಟೋ ಗುದ್ದಿ ನ್ಯಾಯಾಧೀಶರ ಸಾವು – ಕೊಲೆ ಅನುಮಾನ ಮೂಡಿಸಿದ VIDEO

Namratha Rao by Namratha Rao
July 29, 2021
in Newsbeat, Viral News, ಅಪರಾಧ
Share on FacebookShare on TwitterShare on WhatsappShare on Telegram

ವಾಯುವಿಹಾರಕ್ಕೆ ಹೊರಟಿದ್ದಾಗ ಆಟೋ ಗುದ್ದಿ ನ್ಯಾಯಾಧೀಶರ ಸಾವು – ಕೊಲೆ ಅನುಮಾನ ಮೂಡಿಸಿದ VIDEO

ನವದೆಹಲಿ: ವಾಯುವಿಹಾರಕ್ಕೆ ಹೊರಟಿದ್ದ ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ಹಿಂಬದಿಯಿಂದ ಬಂದ ಟೆಂಪೋ ಗುದ್ದಿದೆ.. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನ್ಯಾಯಾಧೀಶರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. ಇದೀಗ ಈ ಪ್ರಕರಣದ ಸುತ್ತ ಅನುಮಾದ ಹುತ್ತವಿದ್ದು, ಇದು ಕೊಲೆಯೋ ಅಪಘಾತವೋ ಎಂಬ ಶಂಕೆ ಎದುರಾಗಿದೆ.  ಅಲ್ಲದೇ ಈ ಸಂಪೂರ್ಣ ದೃಶ್ಯದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗ್ತಾಯಿದೆ..

Related posts

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

September 25, 2023
ಗಣೇಶ ವಿಸರ್ಜನೆ ವೇಳೆ ಎರಡು ಗ್ರಾಮಗಳ ಯುವಕರ ಮಧ್ಯೆ ಗಲಾಟೆ

ಗಣೇಶ ವಿಸರ್ಜನೆ ವೇಳೆ ಎರಡು ಗ್ರಾಮಗಳ ಯುವಕರ ಮಧ್ಯೆ ಗಲಾಟೆ

September 23, 2023

ರಸ್ತೆಬದಿಯಲ್ಲಿ ಹೋಗುತ್ತಿದ್ದ ಝಾರ್ಕಂಡಿನ ನ್ಯಾಯಾಧೀಶ ಉತ್ತಮ್​ ಆನಂದ್​ ಅವರಿಗೆ ವಾಹನವೊಂದು ಉದ್ದೇಶಪೂರ್ವಕವಾಗಿ ಗುದ್ದಿದಂತೆ ಕಾಣುವ ಸಿಸಿಟಿವಿ ಫೂಟೇಜ್​ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೊ ರಿಕ್ಷಾ ಚಾಲಕರೊಬ್ಬರು ಗಂಭೀರ ಪರಿಸ್ಥಿತಿಯಲ್ಲಿದ್ದ ನ್ಯಾಯಾಧೀಶರನ್ನು ತಕ್ಷಣವೇ ಸಮೀಪದ ಶಹೀದ್‌ ನಿರ್ಮಲ್‌ ಮಹ್ತೊ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅವರು, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

धनबाद के ज़िला सत्र जज उत्तम आनंद का बुधवार सुबह मोर्निंग वॉक में एक ऑटो के ठक्कर में मौत का मामला गहराता जा रहा हैं ⁦@ndtvindia⁩ ⁦@Anurag_Dwary⁩ pic.twitter.com/oV3m3Ca6x0

— manish (@manishndtv) July 28, 2021

ಧನಬಾದ್‌ ನ್ಯಾಯಾಧೀಶರ ಹತ್ಯೆ ನಡೆದಿದೆ ಎನ್ನಲಾದ ಕುರಿತು ಜಾರ್ಖಂಡ್‌ ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅವರು ನ್ಯಾಯಾಧೀಶರ ಹತ್ಯೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನೊಳಗೊಂಡ ಪೀಠದ ಗಮನಕ್ಕೆ ತಂದರು.

ಸುಪ್ರೀಂ ಕೋರ್ಟ್​ ಬಾರ್​ ಅಸೋಸಿಯೇಷನ್​ ಪರವಾಗಿ ಹಿರಿಯ ವಕೀಲ ವಿಕಾಸ್​ ಸಿಂಗ್​ ಅವರು ಇಂದು ಈ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಅವರೆದುರು ಪ್ರಸ್ತಾಪ ಮಾಡಿದರು. ‘ಇದು ನ್ಯಾಯಾಂಗದ ಮೇಲೆ ಮಾಡಿರುದ ದಾಳಿಯಂತಿದ್ದು, ಈ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್​ ಈ ಬಗ್ಗೆ ಸುಯೋ ಮೋಟೋ ವಿಚಾರಣೆ ಕೈಗೊಂಡು ಸೂಕ್ತ ಆದೇಶ ನೀಡಬೇಕು’ ಎಂದರು.

ಭೂಗತ ಪಾತಕಿ ಛೋಟಾ ರಾಜನ್ ಗೆ ಹೊಟ್ಟೆ ನೋವು – ಏಮ್ಸ್ ಗೆ ದಾಖಲು

ಬುಧವಾರ ಬೆಳಿಗ್ಗೆ ಜಾಗಿಂಗ್​ ಗಾಗಿ ತೆರಳಿದ್ದ ನ್ಯಾಯಾಧೀಶರಾದ ಆನಂದ್​ ಆಸ್ಪತ್ರೆಯಲ್ಲಿ ಹಿಟ್​ ಅಂಡ್​ ರನ್​ ಕೇಸ್​ ಅಡಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಅವರ ಸಾವಿಗೆ ಕಾರಣವಾದ ‘ಅಪಘಾತ’ದ ದೃಶ್ಯವನ್ನು ತೋರಿಸುವ ಸಿಸಿಟಿವಿ ಫೂಟೇಜ್​ ಹೊರಬಿದ್ದಿದೆ. ಅದರಲ್ಲಿ ಬೆಳಿಗ್ಗೆ 5 ಗಂಟೆಗೆ ವಾಹನ ಸಂಚಾರ ಕಡಿಮೆ ಇರುವ ರಸ್ತೆಯಲ್ಲಿ ಆನಂದ್​ ಅವರು ಜಾಗ್​ ಮಾಡುತ್ತಿರುವಾಗ, ಟೆಂಪೋ ಒಂದು ಟರ್ನ್​ ತೆಗೆದುಕೊಂಡು ಅವರೆಡೆಗೇ ಹೋಗಿ ಗುದ್ದುವುದು. ಅವರು ಕೆಳಗೆ ನಿತ್ರಾಣರಾಗಿ ಬಿದ್ದಂತೆ, ಆ ವಾಹನ ಮುಂದೆ ಹಾದುಹೋಗುವುದು ಕಂಡುಬರುತ್ತದೆ. ಇದರಿಂದಾಗಿ ನ್ಯಾಯಾಧೀಶ ಆನಂದ್​ ಅವರ ಸಾವು ನಿಜವಾಗಿ ಅಪಘಾತವೋ ಅಥವಾ ಕೊಲೆಯೋ ಎಂಬ ಶಂಕೆ ಮೂಡಿದೆ.

ಧನಬಾದ್​ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಮೃತ ಉತ್ತಮ್​ ಆನಂದ್​ ಅವರು ನಿರ್ವಹಿಸುತ್ತಿದ್ದ ಕೇಸುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಧನಬಾದ್ ಪಟ್ಟಣದಲ್ಲಿ ನಡೆದ ಮಾಫಿಯಾ ಹತ್ಯೆಗಳ ಹಲವು ಮೊಕದ್ದಮೆಗಳನ್ನು ಅವರು ವಿಚಾರಣೆ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರು ಗ್ಯಾಂಗ್​ ಸ್ಟರ್​ ಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ವಾಹನದ ಚಾಲಕ ಮತ್ತು ಕೆಲವು ಸಹಚರರನ್ನು ಧನಬಾದಿನ ಗಿರಿದಿಹ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  ಇನ್ನೂ ಗ್ಯಾಂಗ್‌ ಸ್ಟರ್‌ ಗೆ ಜಾಮೀನು ನೀಡದೇ ಇದ್ದದ್ದೇ ಈ ಹತ್ಯೆಗೆ ಕಾರಣ ಆಯ್ತಾ ಅನ್ನೋ ಅನುಮಾನ ಮೂಡಿದೆ.

Tags: #jarkhandjudge murderviral video
ShareTweetSendShare
Join us on:

Related Posts

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

by Honnappa Lakkammanavar
September 25, 2023
0

ಕಾಡಿಗೆ ಕರೆದೊಯ್ದು ಯುವಕನೇ, ಯುವತಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪವೊಂದು ಕೇಳಿ ಬಂದಿದೆ. ಪ್ರೇಮಿಗಳಿಬ್ಬರು ಆಂಧ್ರದಿಂದ ಕರ್ನಾಟಕದ ಗಡಿಯ ಅರಣ್ಯ ಪ್ರದೇಶದಲ್ಲಿ ಒಂದು ಸುತ್ತಾಡಲೆಂದು ಬಂದಿದ್ದರು. ಆದರೆ...

ಗಣೇಶ ವಿಸರ್ಜನೆ ವೇಳೆ ಎರಡು ಗ್ರಾಮಗಳ ಯುವಕರ ಮಧ್ಯೆ ಗಲಾಟೆ

ಗಣೇಶ ವಿಸರ್ಜನೆ ವೇಳೆ ಎರಡು ಗ್ರಾಮಗಳ ಯುವಕರ ಮಧ್ಯೆ ಗಲಾಟೆ

by Honnappa Lakkammanavar
September 23, 2023
0

ಆನೇಕಲ್: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಎರಡು ಗ್ರಾಮಗಳ ಯುವಕರ ಮಧ್ಯೆ ಗಲಾಟೆ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ವೇಳೆ ಆನೇಕಲ್ (Anekal) ತಾಲೂಕಿನ ಚಿನ್ನಯ್ಯನ ಪಾಳ್ಯ...

ಒಂದೇ ದಿನ 19 ಜನ ಸಂಚಾರಿ ಪೊಲೀಸರ ಸಸ್ಪೆಂಡ್

ಒಂದೇ ದಿನ 19 ಜನ ಸಂಚಾರಿ ಪೊಲೀಸರ ಸಸ್ಪೆಂಡ್

by Honnappa Lakkammanavar
September 23, 2023
0

ಬೆಂಗಳೂರು : ಒಂದೇ ದಿನಕ್ಕೆ ಬರೋಬ್ಬರಿ 19 ಜನ ಸಂಚಾರಿ ಪೊಲೀಸರನ್ನು ಅಮಾನತು ಮಾಡಿ ಡಿಸಿಪಿ ಅವರು ಆದೇಶ ಹೊರಡಿಸಿದ್ದಾರೆ. 2 ಸಂಚಾರಿ ಠಾಣೆಯ ಪೊಲೀಸರು ಅಮಾನತುಗೊಂಡಿದ್ದಾರೆ....

ಕುಟುಂಬಸ್ಥರನ್ನು ಕಟ್ಟಿ ಹಾಕಿ ಮೂವರ ಮೇಲೆ ಅತ್ಯಾಚಾರ

ಕುಟುಂಬಸ್ಥರನ್ನು ಕಟ್ಟಿ ಹಾಕಿ ಮೂವರ ಮೇಲೆ ಅತ್ಯಾಚಾರ

by Honnappa Lakkammanavar
September 22, 2023
0

ಚಂಡೀಗಢ : ಕುಟುಂಬಸ್ಥರನ್ನು ಕಟ್ಟಿ ಹಾಕಿ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಭಯಾನಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಈ ಘಟನೆ ಹರಿಯಾಣ (Hariyana)ದ ಪಾಣಿಪತ್‍ನಲ್ಲಿ ನಡೆದಿದೆ....

ಶಾಲಾ ವಾಹನ ನಿಲ್ಲಿಸಿ ಗನ್ ತೋರಿಸಿದ ಕಿಡಿಗೇಡಿಗಳು

ಶಾಲಾ ವಾಹನ ನಿಲ್ಲಿಸಿ ಗನ್ ತೋರಿಸಿದ ಕಿಡಿಗೇಡಿಗಳು

by Honnappa Lakkammanavar
September 22, 2023
0

ಪುಟ್ಟ ವಿದ್ಯಾರ್ಥಿಗಳಿದ್ದ ಶಾಲಾ ವಾಹನವನ್ನು ಕಿಡಿಗೇಡಿಗಳ ಗುಂಪೊಂದು ಏಕಾಏಕಿ ನಿಲ್ಲಿಸಿ, ಗನ್ ಝಳಪಿಸಿ ರೀಲ್ಸ್ ಮಾಡಿರುವ ಆಘಾತಕಾರಿ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

September 25, 2023
ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

September 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram