ವಾಯುವಿಹಾರಕ್ಕೆ ಹೊರಟಿದ್ದಾಗ ಆಟೋ ಗುದ್ದಿ ನ್ಯಾಯಾಧೀಶರ ಸಾವು – ಕೊಲೆ ಅನುಮಾನ ಮೂಡಿಸಿದ VIDEO
ನವದೆಹಲಿ: ವಾಯುವಿಹಾರಕ್ಕೆ ಹೊರಟಿದ್ದ ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ಹಿಂಬದಿಯಿಂದ ಬಂದ ಟೆಂಪೋ ಗುದ್ದಿದೆ.. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನ್ಯಾಯಾಧೀಶರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. ಇದೀಗ ಈ ಪ್ರಕರಣದ ಸುತ್ತ ಅನುಮಾದ ಹುತ್ತವಿದ್ದು, ಇದು ಕೊಲೆಯೋ ಅಪಘಾತವೋ ಎಂಬ ಶಂಕೆ ಎದುರಾಗಿದೆ. ಅಲ್ಲದೇ ಈ ಸಂಪೂರ್ಣ ದೃಶ್ಯದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗ್ತಾಯಿದೆ..
ರಸ್ತೆಬದಿಯಲ್ಲಿ ಹೋಗುತ್ತಿದ್ದ ಝಾರ್ಕಂಡಿನ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ವಾಹನವೊಂದು ಉದ್ದೇಶಪೂರ್ವಕವಾಗಿ ಗುದ್ದಿದಂತೆ ಕಾಣುವ ಸಿಸಿಟಿವಿ ಫೂಟೇಜ್ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೊ ರಿಕ್ಷಾ ಚಾಲಕರೊಬ್ಬರು ಗಂಭೀರ ಪರಿಸ್ಥಿತಿಯಲ್ಲಿದ್ದ ನ್ಯಾಯಾಧೀಶರನ್ನು ತಕ್ಷಣವೇ ಸಮೀಪದ ಶಹೀದ್ ನಿರ್ಮಲ್ ಮಹ್ತೊ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅವರು, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
धनबाद के ज़िला सत्र जज उत्तम आनंद का बुधवार सुबह मोर्निंग वॉक में एक ऑटो के ठक्कर में मौत का मामला गहराता जा रहा हैं @ndtvindia @Anurag_Dwary pic.twitter.com/oV3m3Ca6x0
— manish (@manishndtv) July 28, 2021
ಧನಬಾದ್ ನ್ಯಾಯಾಧೀಶರ ಹತ್ಯೆ ನಡೆದಿದೆ ಎನ್ನಲಾದ ಕುರಿತು ಜಾರ್ಖಂಡ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ನ್ಯಾಯಾಧೀಶರ ಹತ್ಯೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠದ ಗಮನಕ್ಕೆ ತಂದರು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಇಂದು ಈ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರೆದುರು ಪ್ರಸ್ತಾಪ ಮಾಡಿದರು. ‘ಇದು ನ್ಯಾಯಾಂಗದ ಮೇಲೆ ಮಾಡಿರುದ ದಾಳಿಯಂತಿದ್ದು, ಈ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್ ಈ ಬಗ್ಗೆ ಸುಯೋ ಮೋಟೋ ವಿಚಾರಣೆ ಕೈಗೊಂಡು ಸೂಕ್ತ ಆದೇಶ ನೀಡಬೇಕು’ ಎಂದರು.
ಭೂಗತ ಪಾತಕಿ ಛೋಟಾ ರಾಜನ್ ಗೆ ಹೊಟ್ಟೆ ನೋವು – ಏಮ್ಸ್ ಗೆ ದಾಖಲು
ಬುಧವಾರ ಬೆಳಿಗ್ಗೆ ಜಾಗಿಂಗ್ ಗಾಗಿ ತೆರಳಿದ್ದ ನ್ಯಾಯಾಧೀಶರಾದ ಆನಂದ್ ಆಸ್ಪತ್ರೆಯಲ್ಲಿ ಹಿಟ್ ಅಂಡ್ ರನ್ ಕೇಸ್ ಅಡಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಅವರ ಸಾವಿಗೆ ಕಾರಣವಾದ ‘ಅಪಘಾತ’ದ ದೃಶ್ಯವನ್ನು ತೋರಿಸುವ ಸಿಸಿಟಿವಿ ಫೂಟೇಜ್ ಹೊರಬಿದ್ದಿದೆ. ಅದರಲ್ಲಿ ಬೆಳಿಗ್ಗೆ 5 ಗಂಟೆಗೆ ವಾಹನ ಸಂಚಾರ ಕಡಿಮೆ ಇರುವ ರಸ್ತೆಯಲ್ಲಿ ಆನಂದ್ ಅವರು ಜಾಗ್ ಮಾಡುತ್ತಿರುವಾಗ, ಟೆಂಪೋ ಒಂದು ಟರ್ನ್ ತೆಗೆದುಕೊಂಡು ಅವರೆಡೆಗೇ ಹೋಗಿ ಗುದ್ದುವುದು. ಅವರು ಕೆಳಗೆ ನಿತ್ರಾಣರಾಗಿ ಬಿದ್ದಂತೆ, ಆ ವಾಹನ ಮುಂದೆ ಹಾದುಹೋಗುವುದು ಕಂಡುಬರುತ್ತದೆ. ಇದರಿಂದಾಗಿ ನ್ಯಾಯಾಧೀಶ ಆನಂದ್ ಅವರ ಸಾವು ನಿಜವಾಗಿ ಅಪಘಾತವೋ ಅಥವಾ ಕೊಲೆಯೋ ಎಂಬ ಶಂಕೆ ಮೂಡಿದೆ.
ಧನಬಾದ್ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಮೃತ ಉತ್ತಮ್ ಆನಂದ್ ಅವರು ನಿರ್ವಹಿಸುತ್ತಿದ್ದ ಕೇಸುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಧನಬಾದ್ ಪಟ್ಟಣದಲ್ಲಿ ನಡೆದ ಮಾಫಿಯಾ ಹತ್ಯೆಗಳ ಹಲವು ಮೊಕದ್ದಮೆಗಳನ್ನು ಅವರು ವಿಚಾರಣೆ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರು ಗ್ಯಾಂಗ್ ಸ್ಟರ್ ಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ವಾಹನದ ಚಾಲಕ ಮತ್ತು ಕೆಲವು ಸಹಚರರನ್ನು ಧನಬಾದಿನ ಗಿರಿದಿಹ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಗ್ಯಾಂಗ್ ಸ್ಟರ್ ಗೆ ಜಾಮೀನು ನೀಡದೇ ಇದ್ದದ್ದೇ ಈ ಹತ್ಯೆಗೆ ಕಾರಣ ಆಯ್ತಾ ಅನ್ನೋ ಅನುಮಾನ ಮೂಡಿದೆ.