ಸಿದ್ದರಾಮಯ್ಯಗೆ ಹುಚ್ಚು ಬಿಡೋವರೆಗೂ ಸಿಎಂ ಆಗಲ್ಲ : ಕೆ.ಎಸ್.ಈಶ್ವರಪ್ಪ
ಧಾರವಾಡ : ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗುವವರೆಗೂ ಹುಚ್ಚು ಬಿಡಲ್ಲ, ಹುಚ್ಚು ಬಿಡುವವರೆಗೂ ಸಿಎಂ ಆಗಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಮನೆಯಲ್ಲಿ ನೋಟು ಕೌಂಟಿಂಗ್ ಮಷಿನ್ ಇದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಮೈಮೇಲೆ ಜ್ಞಾನವಿಲ್ಲದೇ ಹುಚ್ಚರ ಹಾಗೆ ಮಾತನಾಡುತ್ತಿದ್ದಾರೆ.
ನೋಟು ಕೌಂಟಿಂಗ್ ಮಷಿನ್ ಇರುವುದು ತಪ್ಪಲ್ಲ. ವ್ಯಾಪಾರಸ್ಥರು ಎಲ್ಲರ ಮನೆಯಲ್ಲೂ ನೋಟು ಕೌಂಟಿಂಗ್ ಮಷಿನ್ ಇಟ್ಟುಕೊಂಡಿರುತ್ತಾರೆ. ಇವರಿಗೆ ವ್ಯಾಪಾರ ಮಾಡಿ ಗೊತ್ತಿಲ್ಲ. ಬರೀ ಭ್ರಷ್ಟಾಚಾರದ ದಂಧೆ ಮಾಡಿ ಗೊತ್ತು ಎಂದು ಗರಂ ಆದರು.
ಇನ್ನು ಮೈಸೂರಿನಲ್ಲಿ ಸಿದ್ದರಾಮಯ್ಯ, ಅವರ ಮಕ್ಕಳು, ಸ್ನೇಹಿತರು ಎಷ್ಟರ ಮಟ್ಟಿಗೆ ಮರಳು ದಂಧೆ ಮಾಡಿದ್ದಾರೆ ಎಂಬುದನ್ನು ನಾನು ಈ ಹಿಂದೆ ಸ್ಪಷ್ಟವಾಗಿ ಹೇಳಿದ್ದೆ. ಅವರಿಗೆ ಭ್ರಷ್ಟಾಚಾರ ಬಿಟ್ಟು ಬೇರೆ ಗೊತ್ತಿಲ್ಲ.
ಹಾಗಾಗಿ ಸುಮ್ಮನೆ ಏನೋ ಒಂದು ಆಪಾದನೆ ಮಾಡಬೇಕು ಅಂತ ಮಾಡುತ್ತಾರೆ. ನೋಟು ಕೌಂಟಿಂಗ್ ಮಷಿನ್ ಇದೆ ಎಂಬುದರ ಅರ್ಥ ಭ್ರಷ್ಟಾಚಾರ ಮಾಡುತ್ತೇವೆ ಅಂತಾನಾ.. ಎಂದು ಪ್ರಶ್ನೆ ಮಾಡಿದರು.