ಕೊರೊನಾ ಮಹಾಮಾರಿಯ ರೌದ್ರ ನರ್ತನಕ್ಕೆ ಇಡೀ ವಿಶ್ವವೇ ಲಾಕ್ ಡೌನ್ ಆಗಿದೆ. ಇದು ನಾನಾ ದೇಶದ ಸಾವಿರಾರು ಜನರ ಪ್ರಾಣವನ್ನ ತೆಗೆದು ಅಟ್ಟಹಾಸದ ಕೇಕೆ ಹಾಕುತ್ತಿದ್ದು. ಜನ ಜೀವನವನ್ನ ಸಂಕಷ್ಟಕ್ಕೆ ಸಿಲುಕಿಸಿದೆ.. ಇತ್ತ ಭಾರತದಂತ ದೊಡ್ಢದೇಶವನ್ನೂ ಕೊರೊನಾ ತೀವ್ರವಾಗಿ ಬಾದಿಸುತ್ತಿದ್ದು.. ದೇಶವನ್ನ ಲಾಕ್ ಡೌನ್ ಗೆ ದೂಡಿದೆ.. ಲಾಕ್ ಡೌನ್ ನಿಂದ ಜನರು ತಮ್ಮೆಲ್ಲ ಚಟುವಟಿಕೆಯನ್ನು ಸ್ತಬ್ಧಗೊಳಿಸಿ ಮನೆಯಲ್ಲೇ ಉಳಿಯುವಂತೆ ಮಾಡಿದೆ.. ಉಳ್ಳವರೂ ಹೇಗೂ ಕಾಲ ದೂಡುತ್ತಿದ್ದರೆ.. ಇಲ್ಲದವರ ಪಾಡು ಹೇಳತೀರದಾಗಿದೆ.. ದೇಶದಲ್ಲಿ ಸದ್ಯ ಯಾವುದೇ ಆರ್ಥಿಕ ಚಟುವಟಿಕೆಗಳು ನಡೆಯದ ಕಾರಣ ಕೆಲ ಅನಾಥಾಶ್ರಮ, ವೃದ್ರಾಶ್ರಮಗಳು ಸಂಕಷ್ಟಕ್ಕೆ ಸಿಲುಕಿದೆ. ಆಶ್ರಮಗಳಲ್ಲಿ ದವಸಧಾನ್ಯಗಳು ಖಾಲಿಯಾಗಿದ್ದು ಆಶ್ರಮ ವಾಸಿಗಳು ಖಾಲಿಹೊಟ್ಟೆಯಲ್ಲಿ ದಿನದೂಡುವ ಪರಿಸ್ಥಿತಿಯನ್ನು ತಂದೊಡ್ಡಿದೆ. ಅಂತಹ ಆಶ್ರಮಗಳಲ್ಲಿ ನವಜ್ಯೋತಿ ವೃದ್ರಾಶ್ರಮ ಕೂಡ ಒಂದಾಗಿದೆ..
ಹೌದು, ಬೆಂಗಳೂರಿನ ಕೆ. ಆರ್.. ಪುರಂ ಬಳಿಯ ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿರುವ ನವಜ್ಯೋತಿ ಚಾರಿಟಬಲ್ ಟ್ರಸ್ಟ್ ನಲ್ಲಿ ಸುಮಾರು 20ಕ್ಕೂ ಹೆಚ್ಚು ವೃದ್ಧರು ಆಶ್ರಯ ಪಡೆದಿದ್ದಾರೆ.. ಹಲವು ವರ್ಷಗಳಿಂದ ನವಜ್ಯೋತಿ ಟ್ರಸ್ಟ್ ನ ಮುಖ್ಯಸ್ಥರು ದಾನಿಗಳು ನೀಡಿದ ಸಹಾಯದಿಂದ ಇಲ್ಲಿನ ವೃದ್ಧರನ್ನ ಪೋಷಣೆ ಮಾಡಿ, ಅವರಿಗೆ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದಾರೆ.. ಆದರೆ ಇತ್ತೀಚೆಗೆ ಕೊರೊನಾ ಕಾಟದಿಂದ ಆಶ್ರಮಕ್ಕೆ ಬರುತ್ತಿದ್ದ ದವಸಧಾನ್ಯ, ಮೆಡಿಕಲ್ ಸಾಮಗ್ರಿಗಳು ಏಕಾಏಕಿ ನಿಂತು ಹೋಗಿರುವುದು ಇಲ್ಲಿನ ಅನಾಥ ವೃದ್ಧರನ್ನ ಕಣ್ ಕಣ್ ಬಿಡುವಂತೆ ಮಾಡಿದೆ.. ಊಟಕ್ಕೂ ತೊಂದರೆ ಅನುಭವಿಸುತ್ತಿರುವ ವೃದ್ಧರು ದಾನಿಗಳ ಸಹಾಯಕ್ಕಾಗಿ ಮಡಿಲು ಒಡ್ಡಿದ್ದಾರೆ.. ಜೀವನ ಜಂಜಾಟದ ಹೊಡೆತಕ್ಕೆ ಸಿಲುಕಿ ತನ್ನವರ ನಿಂದನೆಗೆ ಒಳಗಾಗಿ ಬೀದಿಗೆ ಬಿದ್ದ ಈ ಹಿರಿಯ ಜೀವಗಳಿಗೆ ಒಂದೊತ್ತಿನ ಊಟವಿಕ್ಕುವ ದಾನಿಗಳು ಮುಂದಾಗಿ ನಿಜ ಧರ್ಮದ ಔದಾರ್ಯವನ್ನ ಮೆರೆಯಬೇಕಿದೆ. ಈ ಆಶ್ರಮವಾಸಿ ವೃದ್ಧರಿಗೆ ಸಹಾಯ ಮಾಡಿ ಪುಣ್ಯದ ಸ್ವಲ್ಪ ಭಾಗವನ್ನ ನಿಮ್ಮದಾಗಿಸಿಕೊಳ್ಳುವಿರ…?
ದಾನ ಮಾಡಲು ಇಚ್ಚಿಸುವರು ಕೂಡಲೇ ಈ ವಿಳಾಸಕ್ಕೆ ಸಂಪರ್ಕಿಸಿ:
ನವಜ್ಯೋತಿ ಚಾರಿಟಬಲ್ ಟ್ರಸ್ಟ್ ವಿಳಾಸ: ನಂ .109, ಕ್ರಿಸ್ತು ಜಾಯ್ತಿ ನಿಲಯ, ಮುಕ್ತಿ ವಿನಾಯಕ ಲೇಔಟ್ , 2 ನೇ ಕ್ರಾಸ್, ಪೆಟ್ರೋಲ್ ಬಂಕ್ ಬಳಿ, ಆನಂದಪುರ, ಟಿಸಿ ಪಾಳ್ಯ ಮುಖ್ಯ ರಸ್ತೆ, ಕೆ.ಆರ್. ಪುರಂ, ಬೆಂಗಳೂರು 560036.
Bank Details:
Account no: 3219101007571
IFSC Code: CNRB0003219
Mob: 8549071552
Canara Bank
Branch: K.R.Puram, Bangalore-36








