Kanhaiya Lal Murder | ಧಾರವಾಡದಲ್ಲಿ ಪ್ರೊಟೆಸ್ಟ್
ಧಾರವಾಡ : ರಾಜಸ್ಥಾನದ ಕನ್ಹಯ್ಯಲಾಲ್ ಹತ್ಯೆಯನ್ನು ಖಂಡಿಸಿ ಧಾರವಾಡದಲ್ಲಿ ವ್ಯಾಪಾರಿಗಳಿಂದ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಧಾರವಾಡದ ಮಾರುಕಟ್ಟೆ ವ್ಯಾಪಾರಿಗಳಿಂದ ಮೆರವಣಿಗೆ ನಡೆದಿದ್ದು, ಕೆಸಿಸಿ ಬ್ಯಾಂಕ್ ಸರ್ಕಲ್ ನಿಂದ ಮೆರವಣಿಗೆ ಆರಂಭವಾಗಿ ಮಾರುಕಟ್ಟೆಯ ವಿವಿಧ ಬೀದಿಗಳಲ್ಲಿ ಸಾಗಿತು. ಅಂತಿಮವಾಗಿ ವಿವೇಕಾನಂದ ವೃತ್ತದಲ್ಲಿ ಮೆರವಣಿಗೆ ಮುಕ್ತಾಯಗೊಂಡಿದೆ.
ಇತ್ತ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ಗುರುಮಠಕಲ್ ಪಟ್ಟಣದ ಮೇರಾ ಭಾರತ್ ಮಹಾನ್ ವೇದಿಕೆ ವತಿಯಿಂದ ಹಾಗೂ ಹಿಂದೂ ಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ನಗರೇಶ್ವರ ದೇವಸ್ಥಾನ ದಿಂದ ಬಸ್ ನಿಲ್ದಾಣದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ಮುಖಾಂತರ ಕಾಕಲವಾರ ಕ್ರಾಸ್ ನ ಮುಖ್ಯ ರಸ್ತೆಗಳ ಮೂಲಕ ಬಸವೇಶ್ವರರ ವೃತ್ತ ದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಕೋಮುಗಲಬೆ ಮಾಡುವ ಮತಾಂದ ಜಿಹಾದಿ ಗಳನ್ನು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.