BJP | ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ : “ಕೈ” ಗೆ ಬಿಜೆಪಿ ಟಾಂಗ್
ಬೆಂಗಳೂರು : ಕೆಪಿಸಿಸಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ. ಮಾನ್ಯ ಡಿಕೆಶಿಯವರೇ, ರಾಜಾಜಿನಗರದಲ್ಲಿ ನಿರ್ಮಿತವಾಗಿರುವ ಲೂಲು ಶಾಪಿಂಗ್ ಮಾಲ್ನಲ್ಲಿ ನಿಮ್ಮದೇ ಸಿಂಹಪಾಲು ಅಲ್ಲವೇ?ಪಾದಚಾರಿ ಮಾರ್ಗವನ್ನು ಮಾಲ್ನ ಪ್ರವೇಶಕ್ಕಾಗಿ ಪ್ರತ್ಯೇಕ ಅಂಡರ್ ಪಾಸ್ ಆಗಿ ಪರಿವರ್ತಿಸಿದ್ದು ಯಾವ ವೈಭವ?ಕೆಂಪೇಗೌಡರು ಕಟ್ಟಿದ ನಾಡಿನಲ್ಲಿ ಅಕ್ರಮವೆಸಗಿದ್ದೇ ನಿಮ್ಮ ಗತವೈಭವವೇ ಎಂದು ಬಿಜೆಪಿ ಕುಟುಕಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ…
ಬೆಂಗಳೂರಿನ ಗತವೈಭವದ ಬಗ್ಗೆ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಟೆಂಡರ್ ಶ್ಯೂರ್ ರಸ್ತೆಯ ಹಗರಣ ನೆನಪಿಸಬೇಕೇ? ಚಂದ್ರಯಾನ ಯೋಜನೆಗಿಂತಲೂ ಹೆಚ್ಚಿನ ಹಣವನ್ನು ಮೈಸೂರು ರಸ್ತೆ ನಿರ್ಮಾಣಕ್ಕೆ ಬಳಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ.
ಮಾನ್ಯ ಡಿಕೆಶಿ ಅವರೇ, ಮಾಜಿ ಸಚಿವ ಕೆ.ಜೆ. ಜಾರ್ಜ್ ಬಿಬಿಎಂಪಿಗೆ ಬಾಕಿ ಉಳಿಸಿಕೊಂಡಿದ್ದ ತೆರಿಗೆ ಮೊತ್ತ ಎಷ್ಟು ಗೊತ್ತೇ? ಅದನ್ನು ಸಕಾಲದಲ್ಲಿ ಪಾವತಿಸಿದ್ದರೆ ಬೆಂಗಳೂರಿನ ಗತವೈಭವ ಸ್ಥಾಪನೆಗೆ ಅನುಕೂಲವಾಗುತ್ತಿತ್ತಲ್ಲವೇ? ಗ್ರೀನ್ ಬೆಲ್ಟ್ ಪರಿಷ್ಕರಣೆ ಸಂದರ್ಭದಲ್ಲಿ ನಡೆದ ಗೋಲ್ ಮಾಲ್ ಕೂಡಾ #ಕಾಂಗ್ರೆಸ್ಗತವೈಭವ ದ ಭಾಗವೇ ?
ಜನರ ಆದೇಶ ಇಲ್ಲದಿದ್ದರೂ, ಬಿಬಿಎಂಪಿ ಕೌನ್ಸಿಲ್ನಲ್ಲಿ ಹಿಂಬಾಗಿಲ ಮೂಲಕ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು, ಮೇಯರ್ ಉಪಮೇಯರ್ ಸ್ಥಾನದ ಗೌರವಕ್ಕೆ ಚ್ಯುತಿ ತಂದ ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಗತವೈಭವದ ಬಗ್ಗೆ ಪಾಠ ಬೇಕಾಗಿಲ್ಲ.
ಬೆಂಗಳೂರಿನ ಮತದಾರರು #ಕಾಂಗ್ರೆಸ್ಗತವೈಭವ ನೋಡಿಯೇ ಉಪಚುನಾವಣೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ, ನಾಲ್ಕರಲ್ಲಿ ಭಾಜಪ ಗೆಲ್ಲಿಸಿದ್ದರು. ಮರೆತು ಹೋಗಿದ್ದರೆ ಒಮ್ಮೆ ನೆನಪಿಸಿಕೊಳ್ಳಿ. 2023 ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ, ಜನ ಮೂರ್ಖರಲ್ಲ.
ಮಾನ್ಯ ಡಿಕೆಶಿ ಅವರೇ, ದಲಿತ ಮುಖ್ಯಮಂತ್ರಿ ಇರಲಿ ಬಿಡಿ, ಕಡೇಪಕ್ಷ ನಿಮ್ಮದೇ ಪಕ್ಷದ ಚಿನ್ಹೆಯಲ್ಲಿ ಗೆದ್ದ ಹಿರಿಯ ಶಾಸಕ, ದಲಿತ ಸಮುದಾಯದ ಶಾಸಕರ ಮನೆಗೆ ಬೆಂಕಿ ಬಿದ್ದಾಗ, ನಿಮ್ಮ ಪಕ್ಷದ ನೇತಾರರು ನಡೆಸಿಕೊಂಡಿದ್ದ ರೀತಿಯು #ಕಾಂಗ್ರೆಸ್ಗತವೈಭವ ವನ್ನು ನೆನಪಿಸುತ್ತದೆ.
ಉದ್ಯಾನನಗರಿ ಬೆಂಗಳೂರನ್ನು #GarbageCity ಮಾಡಿದವರಿಂದ, ವೈಟ್ ಟಾಪಿಂಗ್ ರಸ್ತೆ ಮಾಡಿ, ರಸ್ತೆ ಮೇಲೆ ನೀರು ನಿಲ್ಲುವಂತೆ ಮಾಡಿರುವವರಿಂದ,ಕೋಟಿ ಕೋಟಿ ಹಣ ಲೂಟಿ ಮಾಡಲು ಹೊಂಚು ಹಾಕಿ ಸ್ಟೀಲ್ ಬ್ರಿಡ್ಜ್ ಮಾಡಲು ಹೋರಟವರಿಂದ, ಬೆಂಗಳೂರ ಗತ ವೈಭವ ತರಲು ಸಾಧ್ಯವೇ?ತಪ್ಪು ಮಾಹಿತಿ ನೀಡಲು ಇದೇನು ಡಿಜಿಟಲ್ ಅಭಿಯಾನವಲ್ಲ ಎಂದು ವ್ಯಂಗ್ಯವಾಡಿದೆ.