BJP Tweet | ವಿನಾಕಾರಣ ಗಲಭೆ, ದೊಂಭಿಗಳಿಗೆ ಕಾಂಗ್ರೆಸ್ ಕಾರಣ
ಬೆಂಗಳೂರು : ಅಗ್ನಿಪಥ ಯೋಜನೆಯಡಿಯಲ್ಲಿ ಯಾವುದೇ ಬಲವಂತವಿಲ್ಲ ಮತ್ತು ಆಕಾಂಕ್ಷಿಗಳು ತಮ್ಮ ಸ್ವ-ಇಚ್ಛೆಯಿಂದ ಸೇರಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಆದರೆ ಕಾಂಗ್ರೆಸ್ ಪಕ್ಷ ವಿನಾಕಾರಣ ಗಲಭೆ, ದೊಂಭಿಗಳಿಗೆ ಕಾರಣವಾಗುತ್ತದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇವುಗಳ ಹಿಂದೆ ಕೋಚಿಂಗ್ ಸೆಂಟರ್ ಗಳ ಕೈವಾಡ ಇರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಖಾಸಗಿ ಸೇನಾ ತರಬೇತಿ ಕೇಂದ್ರಗಳು ಆರ್ಮಿ ಕೋಚಿಂಗ್ ಸೆಂಟರ್ ಹೆಸರಿನಲ್ಲಿ ದಂಧೆ ಮಾಡುತ್ತಿದ್ದವು. ಈ ಸಂಸ್ಥೆಗಳು ಅಗ್ನಿಪಥ್ ಯೋಜನೆಯಿಂದ ತಮ್ಮ ದಂಧೆಗೆ ಪೆಟ್ಟು ಬೀಳುತ್ತದೆ ಎಂಬ ಭೀತಿಯಿಂದ #Agnipath ವಿರುದ್ಧ ಯುವಜನತೆಯನ್ನು ಎತ್ತಿಕಟ್ಟುತ್ತಿದ್ದಾರೆ. ಕಾಂಗ್ರೆಸ್ ಈ ದಂಧೆಕೋರರಿಗೆ ಬೆಂಗಾವಲಾಗಿ ನಿಲ್ಲುತ್ತಿದೆ.
ಅಗ್ನಿಪಥ ಯೋಜನೆಯಡಿಯಲ್ಲಿ ಯಾವುದೇ ಬಲವಂತವಿಲ್ಲ ಮತ್ತು ಆಕಾಂಕ್ಷಿಗಳು ತಮ್ಮ ಸ್ವ-ಇಚ್ಛೆಯಿಂದ ಸೇರಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಆದರೆ ಕಾಂಗ್ರೆಸ್ ಪಕ್ಷ ವಿನಾಕಾರಣ ಗಲಭೆ, ದೊಂಭಿಗಳಿಗೆ ಕಾರಣವಾಗುತ್ತದೆ. ಇದು ದೇಶದ ಯೋಧ ಪರಂಪರೆಗೆ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು?
ರಷ್ಯಾ, ಉತ್ತರ ಕೊರಿಯಾ, ಇರಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಸೇನೆ ಸೇರುವುದು ಕಡ್ಡಾಯ.ತಪ್ಪಿದ್ದಲ್ಲಿ ಅವರಿಗೆ ಸರ್ಕಾರದಿಂದ ಲಭಿಸುವ ಅನೇಕ ಸವಲತ್ತುಗಳಿಗೆ ಅನರ್ಹರಾಗುತ್ತಾರೆ.ಆದರೆ, ಭಾರತದಲ್ಲಿನ #Agnipath ಯೋಜನೆಗೆ ಇಂತಹ ಯಾವುದೇ ಷರತ್ತು ವಿಧಿಸಿಲ್ಲ, ಆದರೂ ವಿರೋಧವೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.