Karnataka Congress | ಬಡಮಕ್ಕಳು ವಿದ್ಯಾವಂತರಾಗುವುದನ್ನು ಸಹಿಸದ ನೀಚಬುದ್ಧಿ ಸರ್ಕಾರ
ಬೆಂಗಳೂರು : ಬಡಮಕ್ಕಳು ವಿದ್ಯಾವಂತರಾಗುವುದನ್ನು ಸಹ ಸಹಿಸದ ನೀಚಬುದ್ಧಿ ಸರ್ಕಾರವಿದು ಎಂದು ಜಿಎಸ್ ಟಿ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಆಕ್ರೋಶ ಹೊರಹಾಕಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, GST ಜಾರಿಯಾಗಿ ಐದು ವರ್ಷಗಳು ಕಳೆದಿವೆ, ಜಾರಿಗೊಳಿಸುವಾಗ ಜಿಎಸ್ಟಿಯಿಂದ ಸ್ವರ್ಗವೇ ಧರೆಗಿಳಿದುಬಿಡುತ್ತದೆ ಎಂದು ಬೆನ್ನು ತಟ್ಟಿಕೊಂಡಿದ್ದ ಬಿಜೆಪಿಗೆ ಇಂದು ಅದರಿಂದಾದ ಏಳಿಗೆಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕ GST ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ, ಜನರ ಬದುಕನ್ನು ಕಷ್ಟಕ್ಕೆ ದೂಡಿದೆ.
ಈ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷವೂ GST ಪಾಲಿನಲ್ಲಿ ಅನ್ಯಾಯವಾಗಿದೆ. ಜಿಎಸ್ಟಿ ಮೂಲಕ ಜನತೆಗೆ, ಸಣ್ಣ ಉದ್ಯಮಗಳಿಗೆ ಅಷ್ಟೇ ಅಲ್ಲ ಕರ್ನಾಟಕಕ್ಕೂ ಮೋಸ ಮಾಡಿದೆ ಕೇಂದ್ರ ಸರ್ಕಾರ. GSTಯಿಂದ ಈ ಐದು ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಆಗಿರುವ ಒಂದೇ ಒಂದು ಪ್ರಯೋಜನವನ್ನು ಬಿಜೆಪಿ ವಿವರಿಸಲಿ.
ಈ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷವೂ GST ಪಾಲಿನಲ್ಲಿ ಅನ್ಯಾಯವಾಗಿದೆ.
ಜಿಎಸ್ಟಿ ಮೂಲಕ ಜನತೆಗೆ,
ಸಣ್ಣ ಉದ್ಯಮಗಳಿಗೆ ಅಷ್ಟೇ ಅಲ್ಲ ಕರ್ನಾಟಕಕ್ಕೂ ಮೋಸ ಮಾಡಿದೆ ಕೇಂದ್ರ ಸರ್ಕಾರ.GSTಯಿಂದ ಈ ಐದು ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಆಗಿರುವ ಒಂದೇ ಒಂದು ಪ್ರಯೋಜನವನ್ನು @BJP4Karnataka ವಿವರಿಸಲಿ.#5YearsOfGSTMess
— Karnataka Congress (@INCKarnataka) July 1, 2022
ಕಾರ್ಪೋರೇಟ್ ಸಂಸ್ಥೆಗಳ ಮೇಲಿನ ತೆರಿಗೆಯನ್ನು 30% ಇಂದ 22% ಗೆ ಇಳಿಸಿ, ಬಡ ಮತ್ತು ಮಧ್ಯಮ ವರ್ಗ ಉಪಯೋಗಿಸುವ ದಿನನಿತ್ಯದ ವಸ್ತುಗಳ ಮೇಲೆ ಹೆಚ್ಚೆಚ್ಚು ತೆರಿಗೆ ವಿಧಿಸಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ನಿರ್ನಾಮಗಳಿಸಲು ಹೊರಟಿರುವ ಪರಮನೀಚ ಬಿಜೆಪಿ ಸರ್ಕಾರ.
ತೆರಿಗೆ ವಿನಾಯಿತಿ ಪಡೆದಿದ್ದ ಶೈಕ್ಷಣಿಕ ವಸ್ತುಗಳಾದ ಮ್ಯಾಪ್, ಚಾರ್ಟ್ ಮುಂತಾದವುಗಳ ಮೇಲೂ 12% ತೆರಿಗೆ ವಿಧಿಸಿ ಬಡಮಕ್ಕಳ ಶಿಕ್ಷಣವನ್ನು ಕಸಿಯಲು ಹೊರಟಿರುವ ಭಂಡ ಬಿಜೆಪಿ ಸರ್ಕಾರ. ಬಡಮಕ್ಕಳು ವಿದ್ಯಾವಂತರಾಗುವುದನ್ನು ಸಹ ಸಹಿಸದ ನೀಚಬುದ್ಧಿ ಸರ್ಕಾರವಿದು ಎಂದು ಬರೆದುಕೊಂಡಿದೆ.