ADVERTISEMENT
Friday, June 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೈಗಾರಿಕಾ ಘಟಕಗಳಲ್ಲಿ ಕೊರೊನಾ ಹರಡಲ್ವಾ..? – ವಾರಾಂತ್ಯದ ಲಾಕ್ ಡೌನ್ ಯಾಕಿಲ್ಲ..? 

admin by admin
April 24, 2021
in Newsbeat, State, ರಾಜ್ಯ
covid 19 and industry saakshatv
Share on FacebookShare on TwitterShare on WhatsappShare on Telegram

ಕೈಗಾರಿಕಾ ಘಟಕಗಳಲ್ಲಿ ಕೊರೊನಾ ಹರಡಲ್ವಾ..? – ವಾರಾಂತ್ಯದ ಲಾಕ್ ಡೌನ್ ಯಾಕಿಲ್ಲ..? 

covid 19 and industry saakshatvಬೆಂಗಳೂರು : ಕೈಗಾರಿಕಾ ಘಟಕಗಳಲ್ಲಿ ಕೊರೊನಾ ಹರಡಲ್ವಾ..? ವಾರಾಂತ್ಯದ ಲಾಕ್ ಡೌನ್ ಯಾಕಿಲ್ಲ..?  ಸದ್ಯ ಜನ ಸಾಮಾನ್ಯರಲ್ಲಿ ಕಾಡುತ್ತಿರುವ ಪ್ರಶ್ನೆ ಇದು. ಯಾಕೆಂದ್ರೆ ರಾಜ್ಯದಲ್ಲಿ ಕೊರೊನಾ ಹುಚ್ಚು ಕುದುರೆಯ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಒಂದಿಷ್ಟು ಕಠಿಣ ಕ್ರಮಗಳನ್ನು ಜಾರಿಗೆ ಮಾಡಿದೆ. ಅದರಂತೆ ಬೆಳಗ್ಗೆ ಆರರಿಂದ ರಾತ್ರಿ ಒಂಭತ್ತರವರೆಗೂ ಕೇವಲ ಅಗತ್ಯ ಸೇವೆ, ಅಂಗಡಿಗಳನ್ನ ಹೊರೆತುಪಡಿಸಿ ಇನ್ನುಳಿದಂತೆ ವಾಣಿಜ್ಯ ಅಂಗಡಿಗಳಿಗೆ ಬೀಗ ಹಾಕಿಸಿದೆ. ಶನಿವಾರ ಮತ್ತು ಭಾನುವಾರ ಭಾಗಶಃ ಲಾಕ್ ಡೌನ್ ಮಾಡಿದೆ. ಆದ್ರೆ ಕೈಗಾರಿಕಾ ವಲಯಕ್ಕೆ ಮಾತ್ರ ಯಾವುದೇ ನಿರ್ಭಂದ ತಂದಿಲ್ಲ. ಕೇವಲ ಉತ್ಪಾದನೆಯ ಮಿತಿಯನ್ನು ಕಡಿತಗೊಳಿಸಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದೆ.

Related posts

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಬಯೋಮೆಟ್ರಿಕ್ ನೆಪದಲ್ಲಿ ಬಡವರ ಹೊಟ್ಟೆಗೆ ಹೊಡೆದ ಕೈ ಸರ್ಕಾರ: ತಾಯಂದಿರ ಕಿವಿಗೆ ಹೂವಿಟ್ಟ ಕಾಂಗ್ರೆಸ್ ಅಸಲಿ ಬಣ್ಣ ಬಯಲು ಎಂದ ಜೆಡಿಎಸ್

June 12, 2026
ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

June 12, 2026

ಇದೇ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಲ್ಲಾ ವಲಯಗಳನ್ನ ಭಾಗಶಃ ಸ್ಥಗಿತಗೊಳಿಸಿರುವ ಸರ್ಕಾರ ಕೈಗಾರಿಕಾ covid 19 and industry saakshatvವಲಯವನ್ಯಾಕೆ ಸ್ವತಂತ್ರ್ಯವಾಗಿ ಬಿಟ್ಟಿದೆ..? ಅಲ್ಲಿ ಕೊರೊನಾ ಹರಡಲ್ವಾ..? ಎನ್ನುತ್ತಿದ್ದಾರೆ ಜನರು. ಅಂದಹಾಗೆ ಜನ ರೀತಿ ಚರ್ಚೆ ಮಾಡಲು ಕಾರಣ ಕೂಡ ಇದೆ. ಸಾಮಾನ್ಯವಾಗಿ ಕೈಗಾರಿಕಾ ಘಟಕಗಳು ಅಂದ್ರೆ ಎರಡು ಸಾವಿರಕ್ಕಿಂತ ಕಡಿಮೆ ಕಾರ್ಮಿಕರು ಇರುವುದಿಲ್ಲ. ಎಷ್ಟೆ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಂಡಿದ್ದೇವೆ ಅಂದರೂ ಒಂದಲ್ಲಾ ಒಂದು ಬಾರಿ ನಿಯಮಗಳು ಗಾಳಿಗೆ ತೂರಿ ಕೆಲಸ ಮಾಡಲೇಬೇಕಾಗುತ್ತದೆ. ಕೆಲ ಕೈಗಾರಿಕಾ ಘಟಕಗಳಲ್ಲಿ ಸಾಮಾಜಿಕ ಅಂತರಕ್ಕೆ ಜಾಗವೇ ಇರುವುದಿಲ್ಲ. ಜೊತೆಗೆ ಮಾಸ್ಕ್ ಧರಿಸುವ ಕೂಡ ಅನುಮಾನವೇ. ಇನ್ನೂ ಮುಖ್ಯವಾಗಿ ಗಾರ್ಮೆಂಟ್ ಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಕೆಲಸಕ್ಕೆ ಬರುತ್ತಾರೆ. ಅಲ್ಲಿ ಸೂಕ್ತ ವ್ಯವಸ್ಥೆ ಕೂಡ ಇರುವುದಿಲ್ಲ. ಒಂದು ವೇಳೆ ಇಲ್ಲಿ ಯಾರಿಗಾದ್ರೂ ಕೊರೊನಾ ಸೋಂಕು ದೃಢಪಟ್ಟರೇ ಕಾರ್ಮಿಕರೆಲ್ಲರೂ ಆತಂಕಕ್ಕೆ ಒಳಗಾಗುತ್ತಾರೆ. ಜೊತೆಗೆ ಒಂದಿಷ್ಟು ಮಂದಿಯನ್ನ ಪ್ರಾಥಮಿಕ ಸಂಪರ್ಕ ಅದು ಇದು ಅಂತ ಐಸೋಲೇಷನ್ ನಲ್ಲಿ ಇಡಲಾಗುತ್ತದೆ.

ಇದು ಒಂದು ಕಡೆಯಾದ್ರೆ ಇವರು ಮನೆಯಿಂದ ಕಾರ್ಖಾನೆಗೆ ಬರಬೇಕೆಂದರೆ ಕೆಲವರಿಗೆ ಕಂಪನಿಯಿಂದಲೇ ವಾಹನ ವ್ಯವಸ್ಥೆ ಇರುತ್ತದೆ. ಇನ್ನೂ ಕೆಲವರಿಗೆ ಇರುವುದಿಲ್ಲ. ಇಲ್ಲಿ ವಾಹನದ ಸೌಲಭ್ಯ ಇಲ್ಲದವರೇ ಹೆಚ್ಚಿರುತ್ತಾರೆ. ಇವರು ಸಾರಿಗೆ ಬಸ್, ಶೇರ್ ಆಟೋ, ಟಿಟಿ ವಾಹನಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿ ಕೂಡ ಅವರಿಗೆ ಕೊರೊನಾ ಸೋಂಕು ತಗುಲುವ ಹಾಗೂ ಅವರ ಮನೆಯವರೂ ಸೋಂಕಿತರಾಗುವ ಎಲ್ಲಾ ಸಾಧ್ಯತೆಗಳಿರುತ್ತವೆ. ಹೀಗಿರುವಾಗ ಸರ್ಕಾರ ಕೈಗಾರಿಕಾ ವಲಯವನ್ನ ಫ್ರೀ ಬಿಟ್ಟಿದ್ದು ಯಾಕೆ..? ಸಾಮಾಜಿಕ ಅಂತರ ಕಾಯ್ದುಕೊಳ್ಳಿ , ಮನೆಯಿಂದ ಯಾರು ಆಚೆ ಬರಬೇಡಿ ಅಂತ ಹೇಳುವ ಸರ್ಕಾರ ಕೈಗಾರಿಕಾ ವಲಯದ ಬಗ್ಗೆ ಹಾಗೂ ಅದರಲ್ಲಿ ಕೆಲಸ ಮಾಡುವವರ ಬಗ್ಗೆ ಯಾಕೆ ಚಿಂತಿಸುತ್ತಿಲ್ಲ ಅನ್ನೋದು ಆ ಶ್ರೀರಾಮಚಂದ್ರನಿಗೆ ತಿಳಿಯಬೇಕು..!

Tags: #Industrial AreabengaluruBSYcm bsyindustrykarnatakakarnataka govtLockdown
ShareTweetSendShare
Join us on:

Related Posts

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಬಯೋಮೆಟ್ರಿಕ್ ನೆಪದಲ್ಲಿ ಬಡವರ ಹೊಟ್ಟೆಗೆ ಹೊಡೆದ ಕೈ ಸರ್ಕಾರ: ತಾಯಂದಿರ ಕಿವಿಗೆ ಹೂವಿಟ್ಟ ಕಾಂಗ್ರೆಸ್ ಅಸಲಿ ಬಣ್ಣ ಬಯಲು ಎಂದ ಜೆಡಿಎಸ್

by Shwetha
June 12, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಈಗ ಹೊಸ ನಿಯಮಗಳ ಸಂಕೋಲೆ ತೊಡಿಸಲಾಗಿದೆ. ಪ್ರತಿಯೊಬ್ಬ ಮನೆಯೊಡತಿಗೆ ಮಾಸಿಕ 2,000 ರೂಪಾಯಿ ನೀಡುವ ಈ ಯೋಜನೆಗೆ ಸರ್ಕಾರ...

ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

ICUನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ; ಆರೋಗ್ಯ ಸ್ಥಿರ, ಪ್ರಾಣಾಪಾಯ ಇಲ್ಲ

by Shwetha
June 12, 2026
0

ತಿಪಟೂರು ಕ್ಷೇತ್ರದ ಕಾಂಗ್ರೆಸ್ ಶಾಸಕ K. ಷಡಕ್ಷರಿ ಅವರು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ....

₹39,000 ಕೋಟಿ ಕಸ ವಿಲೇವಾರಿ ಹಗರಣ? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

₹39,000 ಕೋಟಿ ಕಸ ವಿಲೇವಾರಿ ಹಗರಣ? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

by Shwetha
June 12, 2026
0

ಕರ್ನಾಟಕ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದು, ಬೆಂಗಳೂರಿನಲ್ಲಿ ಕಸ ವಿಲೇವಾರಿ ಯೋಜನೆ ಹೆಸರಿನಲ್ಲಿ ₹39,000 ಕೋಟಿ ಮೌಲ್ಯದ ಹಗರಣ ನಡೆದಿದೆ...

₹6,000 ಕೊಟ್ಟರೆ ಫೇಲ್ ಆದರೂ ಪಾಸ್? VSKUನಲ್ಲಿ ಭಾರೀ ಅಕ್ರಮ ಆರೋಪ

₹6,000 ಕೊಟ್ಟರೆ ಫೇಲ್ ಆದರೂ ಪಾಸ್? VSKUನಲ್ಲಿ ಭಾರೀ ಅಕ್ರಮ ಆರೋಪ

by Shwetha
June 12, 2026
0

ಬಳ್ಳಾರಿಯ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ (VSKU)ಯಲ್ಲಿ ಹಣ ಪಡೆದು ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುವ ಬೃಹತ್ ದಂಧೆಯೊಂದು ಬೆಳಕಿಗೆ ಬಂದಿರುವ ಆರೋಪ ಕೇಳಿಬಂದಿದೆ. ಹಲವು ವರ್ಷಗಳಿಂದ ಈ...

ರಾಜಕೀಯದಲ್ಲಿ ದುಡಿದವರಿಗೆ ಕೂಲಿ ಗ್ಯಾರಂಟಿ, ನನಗಿನ್ನೂ ವಯಸ್ಸಿದೆ ಕಾಯುವೆ: ಸಿದ್ದರಾಮಯ್ಯ ಜೊತೆಗಿನ ಮುನಿಸಿನ ವದಂತಿಗೆ ತೆರೆ ಎಳೆದ ಸಾಹುಕಾರ್ ಸತೀಶ್ ಜಾರಕಿಹೊಳಿ

ರಾಜಕೀಯದಲ್ಲಿ ದುಡಿದವರಿಗೆ ಕೂಲಿ ಗ್ಯಾರಂಟಿ, ನನಗಿನ್ನೂ ವಯಸ್ಸಿದೆ ಕಾಯುವೆ: ಸಿದ್ದರಾಮಯ್ಯ ಜೊತೆಗಿನ ಮುನಿಸಿನ ವದಂತಿಗೆ ತೆರೆ ಎಳೆದ ಸಾಹುಕಾರ್ ಸತೀಶ್ ಜಾರಕಿಹೊಳಿ

by Shwetha
June 12, 2026
0

ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಎಲ್ಲಾ ಊಹಾಪೋಹಗಳಿಗೆ ಇದೀಗ ಖುದ್ದು ಸಾಹುಕಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram