Karnataka Politics : ಸಿದ್ದರಾಮಯ್ಯ ಅಲ್ಲ ರಾಹುಲ್ ಗಾಂಧಿ ಬಂದ್ರು ನಾನು ಚುನಾವಣೆಗೆ ನಿಲ್ಲೋದೆ – ವರ್ತೂರು ಪ್ರಕಾಶ್
ಸಿದ್ದರಾಮಯ್ಯ ಕೋಲಾರಕ್ಕೆ ಬರಬೇಕು ಅನ್ನೋದು ನಮ್ಮ ಆಸೆ,ಅದು ತಪ್ಪೋಗುತ್ತದೆ ಅನ್ನೋ ಕಾರಣಕ್ಕೆ ಸೋಮವಾರದ ಕಾರ್ಯಕ್ರಮವನ್ನು ಮುಂದೂಡಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಹೇಳಿದ್ದಾರೆ.
ತಮ್ಮ ನಿವಾಸದ ಬಳಿ ಕರೆಯಲಾಗಿದ್ದ ಕಾರ್ಯಕರ್ತರ ಸಮಾವೇಶ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಸಿದ್ದರಾಮಯ್ಯನವರು ಕೋಲಾರಕ್ಕೆ ಬರಲಿ.. ಜ. 9 ರಂದು ನಾವು ಸಹ ಕೋಲಾರದಲ್ಲಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಲು ಕಾರ್ಯಕ್ರಮ ಆಯೋಜನ ಮಾಡುತ್ತಿತೇವೆ ಎಂದು ತಿಳಿಸಿದ್ದಾರೆ..
ಜನವರಿ-9 ಸೋಮವಾರ ಇದ್ದಿದ್ದೇ ಪ್ಲಾನ್ ಬೇರೆ ಇತ್ತು,ಆದ್ರೆ ನಾವು ಸೇರಿಸುವ ಜನ ನೋಡಿ ಸಿದ್ದರಾಮಯ್ಯ ಭಯಪಡುತ್ತಾರೆ ಅಂತಾ ನಾವು ಪ್ಲಾನ್ ಬದಲಾಯಿಸಿದ್ದೇವೆ. ಇನ್ನು ಸಿದ್ದರಾಮಯ್ಯ ಅವರನ್ನು ಸ್ವಾಗತ ಮಾಡುತ್ತೇವೆ.
ಕೆಲವರು ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ, ನೀನು ಜೊಳ್ಳು ಆಗೋಗ್ತೀಯಾ ಎಂದು ಕೇಳುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಬಂದರೆ ವರ್ತೂರ್ ಪ್ರಕಾಶ್ ಗೆ ಪೆಟ್ಟಿ ಅಂಗಡಿ ಹಾಕಿಕೊಟ್ಟು ಬಟಾಣಿ ಮಾರತೀನಾ, ನಾನೇನು ಸನ್ಯಾಸಿ ಅಲ್ಲ, ಪಂಚಾಯ್ತಿ, ಜಿಲ್ಲಾಪಂಚಾಯ್ತಿ, ಎರಡು ಬಾರಿ ಇಂಡಿಪೆಂಡೆಂಟ್ ಎಂಎಲ್ ಎ ಆಗಿದ್ದೇನೆ. ಸಿದ್ದರಾಮಯ್ಯ ಅಲ್ಲ ರಾಹುಲ್ ಗಾಂಧಿ ಬಂದ್ರು ನಾನು ಚುನಾವಣೆಗೆ ನಿಲ್ಲೋದೆ, ತೊಡೆ ತಟ್ಟೋದೆ, ಇದರಲ್ಲಿ ಯಾವುದೇ ಸಂದೇಹ ಬೇಡ ಎಂದಿದ್ದಾರೆ..