Karnataka | ಚಾಮುಂಡೇಶ್ವರಿ ಬಗ್ಗೆ ಸಿದ್ದರಾಮಯ್ಯಗೆ ಹಲವು ದಶಕಗಳ ದ್ವೇಷ
1 min read
Karnataka | ಚಾಮುಂಡೇಶ್ವರಿ ಬಗ್ಗೆ ಸಿದ್ದರಾಮಯ್ಯಗೆ ಹಲವು ದಶಕಗಳ ದ್ವೇಷ
ಬೆಂಗಳೂರು : ಪಠ್ಯ ಪರಿಷ್ಕರಣೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಟೀಕೆ ಮುಂದುವರೆಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಅಪಮಾನ ಮಾಡಿತ್ತು.
ಸಮಾಜ ವಿಜ್ಞಾನದ 6 ನೇ ತರಗತಿ ಪಠ್ಯದಿಂದ ನಾಡದೇವತೆ ಭಾಗವನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿತ್ತು. ಸಿದ್ದರಾಮಯ್ಯನವರೇ ಆಗೇಕೆ ಮೌನಕ್ಕೆ ಶರಣಾಗಿದ್ದು ಎಂದು ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಮೈಸೂರು ಅರಸರು ಹಾಗೂ ನಾಡ ದೇವಿ ಚಾಮುಂಡೇಶ್ವರಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ಹಲವು ದಶಕಗಳ ದ್ವೇಷವಿದೆ.
ಚಾಮುಂಡೇಶ್ವರಿ ದೇವಿಯ ಪಠ್ಯವನ್ನು ತೆಗೆಸಿದ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೇ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋತರು.
ನಾಡದೇವತೆಯ ಶಾಪ ತಟ್ಟದೇ ಇರುತ್ತದೆಯೇ?#ಶಿಕ್ಷಣವಿರೋಧಿಕಾಂಗ್ರೆಸ್
— BJP Karnataka (@BJP4Karnataka) June 24, 2022
ನಾಡು- ನುಡಿಗೆ ಅಪಾರ ಕೊಡುಗೆ ನೀಡಿರುವ ರಾಜಮನೆತನದ ವಿರುದ್ಧ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಕೋರ್ಟ್ ಮೆಟ್ಟಿಲು ಏರಿದ್ದರು. ಪಠ್ಯದಲ್ಲೂ ಅದೇ ದ್ವೇಷವನ್ನು ಮುಂದುವರೆಸಿದ್ದೇ?
ಗಂಡಭೇರುಂಡವನ್ನು ಕರ್ನಾಟಕ ರಾಜ್ಯದ ರಾಜ ಲಾಂಛನ ಎಂದು ಇಂದಿಗೂ ಪರಿಗಣಿಸುತ್ತೇವೆ. ಅದು ಮೈಸೂರು ಒಡೆಯರ ರಾಜಲಾಂಛನವೂ ಆಗಿತ್ತು.
ಗಂಡಭೇರುಂಡವನ್ನು ಕರ್ನಾಟಕ ರಾಜ್ಯದ ರಾಜ ಲಾಂಛನ ಎಂದು ಇಂದಿಗೂ ಪರಿಗಣಿಸುತ್ತೇವೆ. ಅದು ಮೈಸೂರು ಒಡೆಯರ ರಾಜಲಾಂಛನವೂ ಆಗಿತ್ತು.
ಆದರೆ ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ಸಮಿತಿ ಮೈಸೂರು ಒಡೆಯರ ಜತೆಗೆ ನಂಟು ಹೊಂದಿದ್ದ ಕನ್ನಡದ ಈ ಎಲ್ಲ ಅಸ್ಮಿತೆಗಳನ್ನು ಕಿತ್ತು ಹಾಕಿದ್ದು ಸರಿಯೇ?#ಶಿಕ್ಷಣವಿರೋಧಿಕಾಂಗ್ರೆಸ್
— BJP Karnataka (@BJP4Karnataka) June 24, 2022
ಆದರೆ ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ಸಮಿತಿ ಮೈಸೂರು ಒಡೆಯರ ಜತೆಗೆ ನಂಟು ಹೊಂದಿದ್ದ ಕನ್ನಡದ ಈ ಎಲ್ಲ ಅಸ್ಮಿತೆಗಳನ್ನು ಕಿತ್ತು ಹಾಕಿದ್ದು ಸರಿಯೇ?
ಚಾಮುಂಡೇಶ್ವರಿ ದೇವಿಯ ಪಠ್ಯವನ್ನು ತೆಗೆಸಿದ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೇ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋತರು. ನಾಡದೇವತೆಯ ಶಾಪ ತಟ್ಟದೇ ಇರುತ್ತದೆಯೇ ಎಂದು ಪ್ರಶ್ನೆ ಮಾಡಿದೆ.