Kashmiri Pandit: ಭಯೋತ್ಪಾದಕರಿಂದ ಗುಂಡಿನ ದಾಳಿ – ಕಾಶ್ಮೀರಿ ಪಂಡಿತ್ ಸಾವು…
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಕಾಶ್ಮೀರಿ ಪಂಡಿತರೊಬ್ಬರು ಶನಿವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಶೋಪಿಯಾನ್ನ ಚೌಧರಿ ಗುಂಡ್ ಗ್ರಾಮದ ತಾರಕ್ ನಾಥ್ ಭಟ್ ಅವರ ಪುತ್ರ ಪುರಾನ್ ಕೃಷ್ಣನ್ ಭಟ್ ಇಂದು ಉಗ್ರರ ಗುಂಡಿಗೆ ಬಲಿಯಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ತಕ್ಷಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೇ ಗಂಭೀರವಾದ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ದಾಳಿ ನಡೆದ ಪ್ರದೇಶದಲ್ಲಿ ಉಗ್ರರ ಶೋಧಕ್ಕಾಗಿ ಪೊಲೀಸರು ಸುತ್ತುವರಿದಿದೆ. ಹಿರಿಯ ಪೊಲೀಸ್ ಮತ್ತು ಅರೆಸೇನಾ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಆಗಸ್ಟ್ 16 ರಂದು, ಅದೇ ಜಿಲ್ಲೆಯ ಚೋಟಿಗಾಂ ಗ್ರಾಮದ ಸುನೀಲ್ ಕುಮಾರ್ ಭಟ್ ಎಂಬ ಕಾಶ್ಮೀರಿ ಪಂಡಿತನನ್ನ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಆ ದಾಳಿಯಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತ್ ಪೆರ್ಟಿಂಬರ್ ನಾಥ್ ಭಟ್ ಗಾಯಗೊಂಡಿದ್ದರು.
Kashmiri Pandit shot at by terrorists in J&K’s Shopian succumbs