ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಹೊತ್ತಿ ಉರಿದ ಡಿಜಿ ಹಳ್ಳಿ ಕಾವಲ್ ಭೈರಸಂದ್ರ; ಗಲಭೆಯ ಹಿಂದಿರುವ ವಿಧ್ವಂಸಕ ಶಕ್ತಿಗಳಾವುವು? ಘಟನೆಯ ಹಿಂದೆಯೇ ಹುಟ್ಟಿಕೊಂಡ ಪ್ರಶ್ನೆಗಳು

admin by admin
August 12, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಹೊತ್ತಿ ಉರಿದ ಡಿಜಿ ಹಳ್ಳಿ ಕಾವಲ್ ಭೈರಸಂದ್ರ; ಗಲಭೆಯ ಹಿಂದಿರುವ ವಿಧ್ವಂಸಕ ಶಕ್ತಿಗಳಾವುವು? ಘಟನೆಯ ಹಿಂದೆಯೇ ಹುಟ್ಟಿಕೊಂಡ ಪ್ರಶ್ನೆಗಳು

ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ವಿನಾಕಾರಣ ಗಲಭೆ ಎದ್ದು ಮೂರು ಹೆಣ ಬಿದ್ದಿದೆ. ಎಂಎಲ್ಎ ಮನೆ, ಪೊಲೀಸ್ ಸ್ಟೇಷನ್, ಪೋಲಿಸ್ ವಾಹನಗಳಿಗೆ ಬೆಂಕಿ ಬಿದ್ದಿದೆ. ಹತ್ತಾರು ಪೊಲೀಸರಿಗೆ ಗಾಯವಾಗಿದೆ. ಕೆಎಸ್ಆರ್ಪಿ ತುಕಡಿಯ ಬಸ್ ಗೆ ಬೆಂಕಿ ಹಾಕಿದರು. ಒಂದು ಮನೆ ಹೊತ್ತಿ ಹುರಿಯಿತು. ಹತ್ತು ಹಲವು ಸಾರ್ವಜನಿಕರ ಬೈಕು ಕಾರುಗಳಿಗೆ ಬೆಂಕಿ ಹಚ್ಚಲಾಯಿತು.

Related posts

Luka Modric: Croatia

fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”

July 4, 2026
Romelu Lukaku

fifa world cup 2026- ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

July 4, 2026

ಕಾವಲ್ ಭೈರಸಂದ್ರ, ಕೆಜಿ ಹಳ್ಳಿ ಹಾಗೂ ಡಿಜಿ ಹಳ್ಳಿ ಸುತ್ತಮುತ್ತ ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಸಾವಿರಾರು ಜನ ದಾಂದಲೆ ಎಬ್ಬಿಸಿ ಬೆಂಕಿ ಹಚ್ಚುವಂತಹ ಸಮಾಜಘಾತುಕ ದುರ್ಘಟನೆ ನಡೆಯಲು ಕಾರಣವಾಗಿದ್ದೇನು? ಇದೊಂದು ತಕ್ಷಣದ ಪ್ರತಿಕ್ರಿಯೆ ಎಂದು ಯಾವ ಕೋನದಿಂದಲೂ ಅನ್ನಿಸುತ್ತಿಲ್ಲ. ಇದು ಅತಿರೇಕಿಗಳ, ಉದ್ರಿಕ್ತರ ಪ್ರಕ್ಷುಬ್ಧ ಉಗ್ರ ಪ್ರತಿಕ್ರಿಯೆ ಎನ್ನಿಸುತ್ತಿಲ್ಲ. ಈ ಘಟನೆಯಲ್ಲಿ ಸ್ಥಳೀಯರು ಭಾಗಿಯಾದಂತೆ ಕಾಣುತ್ತಿಲ್ಲ.

ಮುಖ್ಯವಾಗಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಕೂಡಲೇ ಚಪ್ಪಾಳೆ ತಟ್ಟಿ ವಿಕೃತವಾಗ ಆನಂದ ಪಟ್ಟರಂತೆ. ಹಾಗಿದ್ದರೇ, ಪ್ರತಿಭಟನಾಕಾರರ ಟಾರ್ಗೆಟ್ ಇದ್ದಿದ್ದು ಏನು? ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಅಳಿಯ ನವೀನ್ ಎಂಬುವಾತ ಪ್ರವಾಧಿ ಮೊಹಮದ್ ವಿರುದ್ಧ ಆಕ್ಷೇಪಾರ್ಹ ಫೇಸ್ ಬುಕ್ ಪೋಸ್ಟ್ ಮಾಡಿದ್ದೇ ಕಾರಣವಾಗಿದ್ದರೇ, ಅದನ್ನು ಕಾನೂನು ಕ್ರಮ ಜರುಗಿಸುವ ಮೂಲಕ ಬಗೆಹರಿಸಬಹುದಿತ್ತು. ವಿದ್ವಂಸ ಎಸಗುವ ಮೂಲಕ ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರು ಸಾಧಿಸಿದ್ದೇನು? ಅವರ ಅಸಲು ಉದ್ದೇಶವೇನಿತ್ತು? ಇದರ ಹಿಂದೆ ರಾಜಕೀಯ ದುರುದ್ದೇಶವೇನಾದರೂ ಇತ್ತೇ? ಇಂತಹ ಹತ್ತಾರು ಪ್ರಶ್ನೆಗಳು ಈ ಕ್ಷಣದಲ್ಲಿ ನಮ್ಮ ಮುಂದಿವೆ. ಇದಕ್ಕೆಲ್ಲಾ ಸಂಬಂಧ ಪಟ್ಟವರು ಶೀಘ್ರದಲ್ಲೇ ಉತ್ತರಿಸಬೇಕಾಗಿದೆ. ಸರ್ಕಾರದ ಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಮರೆಮಾಚದೇ ನ್ಯಾಯಬದ್ಧ ತನಿಖೆ ನಡೆಸಬೇಕಾಗಿದೆ.

ನಿನ್ನೆ ನಡೆದ ಆತಂಕಕಾರಿ ಭಯ ಹುಟ್ಟಿಸುವ, ಸಮಾಜದ ನೆಮ್ಮದಿಗೆ ಭಂಗ ತಂದ ಘಟನೆಯಲ್ಲಿ ಸತ್ತವರು ಅಮಾಯಕರಾ? ಗೂಂಡಾಗಳಾ? ಧರ್ಮಾಂದರಾ? ಯಾವುದಾದರೂ ಪಕ್ಷದ ಕಾರ್ಯಕರ್ತರಾ? ಅಥವಾ ಮಾಧಕದ್ರವ್ಯದ ವ್ಯಸನಿಗಳಾ? ಎಲ್ಲಿಂದ ಬಂದರು ಏಕಾಏಕಿ ಸಾವಿರಾರು ಜನ? ನಮ್ಮ ಸರ್ಕಾರದ ಇಂಟಲಿಜೆನ್ಸ್ ವಿಭಾಗಕ್ಕೆ ಇಂತದ್ದೊಂದು ದೊಡ್ಡ ಗಲಭೆಯ ಕಿಂಚಿತ್ತೂ ಸುಳಿವಿರಲಿಲ್ಲವೇ? ಗಲಭೆಯಾಗಿ ನಾಲ್ಕೈದು ಗಂಟೆಯ ನಂತರವೂ ಪೊಲೀಸರು ನಿಧಾನಗತಿಯಲ್ಲಿ ಕಾರ್ಯಾಚರಣೆ ನಡೆಸಿದ್ದೇಕೆ?

ಇದರ ಮಧ್ಯೆ ಅದೇ ವ್ಯಾಪ್ತಿಯ ದೇವಸ್ಥಾನವೊಂದಕ್ಕೆ ನೂರಾರು ಮುಸಲ್ಮಾನ ಸಹೋದರರು ಮಾನವ ಸರಪಳಿ ನಿರ್ಮಿಸಿ ಕಾವಲು ಕಾದಿದ್ದಾರೆ. ಧರ್ಮ ಯಾವುದಾದರೇನು ಅದೂ ಶ್ರದ್ಧಾ ಕೇಂದ್ರೆವೇ ಅದಕ್ಕೆ ಹಾನಿ ಮಾಡಲು ಬಿಡುವುದಿಲ್ಲ ಅಂತ ಒಬ್ಬ ಮುಸಲ್ಮಾನ ಯುವಕ ಮಾತಾಡುತ್ತಿದ್ದ. ಹತ್ತಾರು ವರ್ಷಗಳಿಂದ ಅವರು ಅದೇ ದೇವಸ್ಥಾನದ ಬೀದಿಯಲ್ಲಿ ತಿರುಗಾಡಿದ್ದಾರೆ. ಅಲ್ಲಿನ ಹಿಂದೂಗಳ ಜೊತೆ ಬೆರೆತು ಕೂಡಿ ಬದುಕಿದ್ದಾರೆ. ತಮ್ಮವರಿಂದ ದೇವಸ್ಥಾನಕ್ಕೆ ಹಾನಿಯಾಗಬಹುದು ಎಂದು ಹೀಗೊಂದು ನಿರ್ಧಾರಕ್ಕೆ ಬಂದ ಆ ಯುವಕರ ಕ್ರಮ ನಿಜಕ್ಕೂ ಶ್ಲಾಘನೀಯವೇ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೇ ಅಲ್ಲಿನ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಿದ್ದರೇ? ಸತ್ತ 40 ವರ್ಷದವನು ಸ್ಥಳೀಯನಲ್ಲ ಅವನ ಗುರುತು ಪತ್ತೆಯಾಗಿಲ್ಲ. ಹಾಗಿದ್ದರೇ ಎಲ್ಲಿಂದ ಬಂದನಾತ? ಪಾದರಾಯನಪುರ ಅನ್ನುವುದೇ ಒಂದು ಅನಿಷ್ಟ ಪ್ರದೇಶ. ಅಲ್ಲಿ ಹೆಚ್ಚಾಗಿ ಓಡಾಡುವವರು, ಅಡಗುವವರು ಕ್ರಿಮಿನಲ್ ಗಳೇ! ಕಾವಲ್ ಭೈರಸಂದ್ರದ ಘಟನೆಯಲ್ಲಿ ಪಾದರಾಯನಪುರದ ಸಮಾಜಘಾತುಕರಿದ್ದಾರೆ ಎಂದು ಮಾಹಿತಿ ಬರುತ್ತಿದೆ. ಕೇರಳದಿಂದಲೂ ಕೆಲವರು ಬಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಸಂಗತಿಗಳು ಪ್ರಮುಖವಾಗಿ ತನಿಖೆಯಾಗಬೇಕಿದೆ.

ನಿನ್ನೆ ಕಾವಲ್ ಭೈರಸಂದ್ರ ಮತ್ತು ಸುತ್ತಮುತ್ತ ಗಲಭೆ ಮಾಡಿ ಬೆಂಕಿ ಹಚ್ಚಿ ವಿಕೃತವಾಗಿ ಕೇಕೆ ಹಾಕಿ ನಕ್ಕವರಿದ್ದಾರಲ್ಲ ಅವರು ನಿಜವಾದ ದೇಶದ್ರೋಹಿಗಳು. ಮೊದಲು ಅವರನ್ನು ಮಟ್ಟ ಹಾಕಬೇಕು. ಸಮಾಜ ಅಂದರೆ ಅಲ್ಲಿ ಎಲ್ಲರೂ ಬದುಕುವ ಸೌಹಾರ್ಧ ವಾತಾವರಣವಿರಬೇಕು. ಇದರ ಹಿಂದೆ ಅದ್ಯಾವನೇ ಬೇವರ್ಸಿ ರಾಜಕಾರಣಿ ಇದ್ದರೂ, ಮುಲಾಜಿಲ್ಲದ ಕ್ರಮಕ್ಕೆ ಮುಂದಾಗಬೇಕು. ಮುಂಬರುವ ಬಿಬಿಎಂಪಿ ಚುನಾವಣೆಯ ಕಾರಣ ಈ ಗಲಭೆಯೂ ರಾಜಕೀಯ ಪ್ರೇರಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರವಾಧಿ ಮೊಹಮದ್ ರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರಳಿಯ ನವೀನ್ ಹಾಗೂ ಈ ಸಂಪೂರ್ಣ ಗಲಭೆಯ ಮೂಲಸೂತ್ರಧಾರಿ ಎಸ್.ಡಿ.ಪಿ.ಐ ನ ಮುಜಾಮಿಲ್ ಪಾಶಾ ಇಬ್ಬರೂ ಬಿಬಿಎಂಪಿ ಚುನಾವಣೆಯ ತಯಾರಿಯಲ್ಲಿದ್ದರಂತೆ. ಅಲ್ಲಿಗೆ ಇದರ ಹಿಂದೆ ರಾಜಕಾರಣದ ಹುನ್ನಾರವಿದೆ, ಇದು ಖಂಡಿತಾ ಅಕ್ಷಮ್ಯ.

ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಈ ಭಾಗದ ಜನಪ್ರಿಯ ನಾಯಕರಾಗಿದ್ದವರು. ಸತತವಾಗಿ ಚುನಸವಣೆಯಲ್ಲಿ ಗೆದ್ದು ಬಂದವರು. ಈ ದೃಷ್ಟಿಯಲ್ಲಿ ನೋಡುವುದಾದರೇ ಸ್ಥಳೀಯ ಅವರ ಮತದಾರೇ ಅವರ ಮನೆಗೆ ಬೆಂಕಿ ಹಚ್ಚುವ ಅತಿರೇಕಕ್ಕೆ ಹೋಗುವುದಿಲ್ಲ. ಇದು ಹೊರಗಿನಿಂದ ಬಂದವರದ್ದೇ ಕೃತ್ಯ. ಇದು ನಿನ್ನೆಯ ದಿಢೀರ್ ಪ್ರತಿಕ್ರಿಯೆ ಅಲ್ಲ ಅನ್ನುವುದು ಸ್ಪಷ್ಟ. ಇದೊಂದು ಪೂರ್ವನಿಯೋಜಿತ ಸಂಚು. ಪೊಲೀಸರಿಗೆ ಮನೆಗಳ ಮೇಲಿಂದ ಕಲ್ಲು ಬಾಟಲಿಗಳು ಬೀಳುತ್ತಿದ್ದವು ಅಂದರೆ ಇದೊಂದು ಪ್ರೀ ಪ್ಲಾನ್ಡ್ ಕೃತ್ಯವೇ. ವಾರಗಳ ತಿಂಗಳುಗಳಿಂದ ಈ ದೊಡ್ಡ ಮಟ್ಟದ ಗಲಭೆಗೆ ಯೋಜನೆ ರೂಪಿಸಿದ್ದಾರೆ. ಇನ್ನೂ ಗಮನಿಸಬೇಕಿರುವ ಸಂಗತಿ ಅಂದರೆ ಮುಂಬರುವ ಅಪಾಯವನ್ನೂ ಮರೆತು ದೊಂಬಿ ಎಬ್ಬಿಸುತ್ತಿದ್ದ ಗಲಭೆಕೋರರು ಖಂಡಿತಾ ಪ್ರಜ್ಞೆಯಲ್ಲಿ ಇರಲಿಲ್ಲ. ಅವರೆಲ್ಲಾ ಗಾಂಜಾ ವ್ಯಸನಿಗಳೇ ಎಂಬ ಸಂದೇಹವೂ ಇದೆ. ಆ ಭಾಗದಲ್ಲಿ ಮಾಧಕ ದ್ರವ್ಯ ಮಾರಾಟದ ದಂದೆ ಹಿಂದಿನಿಂದಲೂ ನಡೆದೇ ಇದೆ.

ಇದೇ ವೇಳೆ ಗಲಭೆ ಶುರುವಾಗುವ ಮೊದಲೇ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ದದ್ ಖಾನ್ ಅಲ್ಲಿಗೆ ತಲುಪಿದ್ದು ಹೇಗೆ ಮತ್ತು ಯಾಕೆ? ಜಮೀರ್ ಅಹ್ಮದ್ ಖಾನ್ ತಲುಪಿ ಮಾತುಕಥೆಗೆ ಮುಂದಾದ ನಂತರವೇ ಗಲಭೆ ದೊಡ್ಡದಾಯಿತು. ಅಂದರೆ ಇಂತಹದ್ದೊಂದು ದೊಡ್ಡ ಗಲಭೆ ನಡೆಯುತ್ತದೆ ಎಂದು ಜಮೀರ್ ಸಾಹೇಬರಿಗೆ ಗೊತ್ತಿತ್ತಾ? ಗೊತ್ತಿದ್ದರೇ, ಪೊಲೀಸರ ಗಮನಕ್ಕೆ ತರಲಿಲ್ಲ ಯಾಕೆ? ಇದರ ವಸ್ತುನಿಷ್ಟ ನ್ಯಾಯಾಂಗ ತನಿಖೆ ನಡೆಯುವುದೇ ಆದರೆ ಜಮೀರ್ ಅಹ್ಮದ್ ಖಾನ್ ರವರನ್ನೂ ವಿಚಾರಣೆಗೆ ಒಳಪಡಿಸಬೇಕು.

ಈ ದೇಶ ಎಲ್ಲರದ್ದೂ ಹೌದು. ನಿನ್ನೆ ಭಯ ಭೀತಿ ಆತಂಕಗಳ ನಡುವೆಯೂ ಮಂದಿರ ಕಾದ ಮುಸಲ್ಮಾನ ಯುವಕರು ಸೌಹಾರ್ಧೆತೆಯ ಪ್ರಾಕ್ಟಿಕಲ್ ಪಾಠ ಹೇಳಿಕೊಟ್ಟಿದ್ದಾರೆ. ಈ ಕೋಮು ಗಲಭೆಯ ಹಿಂದೆ ಯಾವುದಾದರೊಂದು ರಾಜಕೀಯ ಷಡ್ಯಂತ್ರವಿದ್ದೇ ಇರತ್ತೆ. ರಾಜಕೀಯ ಮತ್ತು ಧರ್ಮವನ್ನು ಬೆರೆಸಿ ರಕ್ತದ ಕೋಡಿ ಹರಿಸಿ ಸಾಮ್ರಾಜ್ಯ ಕಟ್ಟುವ ಅನಿಷ್ಟ ಪರಂಪರೆಗೆ ಮಂಗಳ ಹಾಡಬೇಕಿದೆ. ಕಾವಲ್ ಭೈರಸಂದ್ರದಲ್ಲಿ ಬೆಂಕಿ ಹಚ್ಚಿ ವಿಕೃತವಾಗಿ ಅಟ್ಟಹಾಸಗೈದ ಕಿಡಿಗೇಡಿಗಳು ಯಾರೇ ಆಗಿರಲಿ ಹಿಡಿದು ಚಮಡಾ ಸುಲಿದು ಹಾಕಬೇಕು. ಇದು ಪೂರ್ವನಿಯೋಜಿತವೋ ತಕ್ಷಣದ ಪ್ರತಿಕ್ರಿಯೆಯೋ ಬೇರೆ ವಿಚಾರ. ಸಮಾಜದ ನೆಮ್ಮದಿಗೆ ಬೆಂಕಿ ಹಚ್ಚುವ ಯಾವುದೇ ದುಷ್ಕರ್ಮಿಗಳಿರಲಿ ಮುಲಾಜಿಲ್ಲದೆ ನರ ಕತ್ತರಿಸಿ ಬಿಸಾಕಬೇಕಷ್ಟೆ. ನಿನ್ನೆಯ ಘಟನೆಯ ವಿಷ್ಯುಯಲ್ಸ್ ಗಳು ಸಮಾಜದ ನೆಮ್ಮದಿಗೆ ಬೆಂಕಿ ಇಟ್ಟಿದೆ. ನಮ್ಮ ಪೊಲೀಸರಿಗೆ ಇದೊಂದು ನಿಜವಾದ ಅಗ್ನಿಪರೀಕ್ಷೆ. ಸಮಾಜದ ಶಾಂತಿಗೆ ಭಂಗ ತರುವ ಯಾವುದೇ ಸಮಾಜ ಘಾತುಕರನ್ನು ಒದ್ದು ಬುದ್ದಿಕಳಿಸದಿದ್ರೆ ಮುಂದೆ ಇವರೇ ಸಮಾಜಕಂಟಕರಾಗ್ತಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಧರ್ಮ ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವ ಹಾಗೆ ಪೋಸ್ಟ್ ಗಳನ್ನು ಹಾಕುವುದು ನಿಲ್ಲಬೇಕು. ಉರಿವ ಚಿತೆಯ ಬೆಂಕಿಯಲ್ಲಿ ನಾವು ಯಾವ ಆಹಾರವನ್ನೂ ಬೇಯಿಸಲು ಸಾಧ್ಯವಿಲ್ಲ. ಇವತ್ತಿನ ಘಟನೆಗೆ ಕಾರಣವಾದ ಯಾವುದೇ ಹೀನ ಕ್ರಿಮಿಗಳನ್ನೂ ಪೊಲೀಸರು ಹೆಡಮುರಿ ಕಟ್ಟಿ ತಕ್ಕ ಶಿಕ್ಷೆ ಕೊಡಿಸಲಿ. ಬೆಂಗಳೂರು ಮತ್ತೆಂದಿಗೂ ಇಂತಹ ಆತಂಕಕಾರಿ ಘಟನೆಗೆ ಸಾಕ್ಷಿಯಾಗದಿರಲಿ ಎನ್ನುವ ಆಶಯಗಳೊಂದಿಗೆ.

–ವಿಭಾ (ವಿಶ್ವಾಸ್ ಭಾರದ್ವಾಜ್)

Tags: # DJ Halli# KG Halli#akhanda shrinivasa murthi#bengaluru volience#Kaval Bhairasandra#saakshatv.combengalurubsy govtcm bsy
ShareTweetSendShare
Join us on:

Related Posts

Luka Modric: Croatia

fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”

by admin
July 4, 2026
0

ಕ್ರೊವೇಶಿಯಾ..! ಜಗತ್ತಿನ ಒಂದು ಪುಟ್ಟ ರಾಷ್ಟ್ರ. ಅಂದಾಜು 42 -43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದ್ರೆ ಈ ದೇಶಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವೂ ಇದೆ....

Romelu Lukaku

fifa world cup 2026- ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

by admin
July 4, 2026
0

ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ...! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..? ಅಮ್ಮನ ಎದೆ ಹಾಲು.. ಅಪ್ಪನ ರಕ್ತದ ಬೆವರು... ಅಜ್ಜನ ಪ್ರೀತಿ..! ಆತನೇ ಹೇಳುವಂತೆ ಈ...

sadio mane

fifa worldcup2026- ಫುಟ್‍ಬಾಲ್ ಜಗತ್ತಿನ ಸರದಾರನೂ ಹೌದು.. ಮಾನವಿಯತೆಯ ಸಾಹುಕಾರನೂ ಹೌದು…! ಸ್ಯಾಡಿಯೊ ಮಾನೆ ಎಂಬ ಬಂಗಾರದ ಮನುಷ್ಯ..!

by admin
July 4, 2026
0

ಈತನ ಒಂದು ವರ್ಷದ ಸಂಪಾದನೆ 330 ಕೋಟಿಗೂ ಅಧಿಕ..! ಆದ್ರೆ ಕೈಯಲ್ಲಿರುವುದು ಒಡೆದು ಹೋಗಿರುವ ಹಳೆಯ ಮೊಬೈಲ್..! ಓಡಾಡಲು ಬಳಸುವುದು ಹಳೆಯ ಕಾರು..! ಯಾರವನು...? ಮನಸ್ಸು ಮಾಡಿದ್ರೆ...

argentina vs cabo verde

fifaworldcup:2026- ದೈತ್ಯರನ್ನು ಬೆಚ್ಚಿ ಬೀಳಿಸಿದ ಬ್ಲೂ ಬ್ಲೂ ಶಾರ್ಕ್ಸ್..! ಫಿಫಾ ವಿಶ್ವಕಪ್‍ನಲ್ಲಿ ಇತಿಹಾಸ ಬರೆದ ಕೇಪ್‍ವರ್ಡ್..!

by admin
July 4, 2026
0

ಕೆಲವೊಂದು ಸೋಲುಗಳು ಗೆಲುವಿಗಿಂತಲೂ ಹೆಚ್ಚು ಕಾಲ ನೆನಪಿನಲ್ಲಿರುತ್ತವೆ. ಅದು ಭಗ್ನಗೊಂಡ ಮೊದಲ ಪ್ರೀತಿಯ ಹಾಗೇ..! ಫಿಫಾ ವಿಶ್ವಕಪ್ 2026ರ ಟೂರ್ನಿಯ ನಾಕೌಟ್ ಪಂದ್ಯವೊಂದರಲ್ಲಿ ಆಗಿದ್ದು ಕೂಡ ಅದೇ..!...

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram