ಕಾಂಗ್ರೆಸ್ ನವರಿಗೆ ಕೈ ಮುಗಿದು ಮನಿವಿ ಮಾಡಡಿಕೊಂಡ ಸಚಿವ ಕೆ.ಎಸ್. ಈಶ್ವರಪ್ಪ Saaksha Tv
ಶಿವಮೊಗ್ಗ: ಜನರ ಸಮಸ್ಯೆ ಬಗ್ಗೆ ಚರ್ಚಿಸಲು ವಿಧಾನಸಭೆ, ಪರಿಷತ್ಗೆ ಬನ್ನಿ ಅಂತಾ ಕಾಂಗ್ರೆಸ್ ನವರಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕೈ ಮುಗಿದು ಮನವಿ ಮಾಡಡಿಕೊಂಡಿದ್ದಾರೆ
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಕಾಂಗ್ರೆಸ್ ವಿಧಾನಸಭೆಯಲ್ಲಿ ಅಹಗಲು-ರಾತ್ರಿ ಧರಣಿ ಮಾಡುತ್ತಿದ್ದು, ಈ ಕಾರಣದಿಂದ ಅಧಿವೇಶನ ಮುಂದೂಡಲಾಗುತ್ತಿದೆ. ಈ ಕುರಿತು ಶಿವಮೊಗ್ಗಾದಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಅಧಿವೇಶನ ನಡೆಸಲು ಪ್ರತಿದಿನ 80 ಲಕ್ಷದಿಂದ ಒಂದೂವರೆ ಕೋಟಿ ಖರ್ಚು ಆಗುತ್ತದೆ. ಯಾರು ದುಡ್ಡು ಅದು. ಇದೊಂದು ವಿಷಯ ಇಟ್ಟುಕೊಂಡು ಸಾಮಾನ್ಯ ಜನರ ದುಡ್ಡನ್ನು ಈ ರೀತಿ ಹಗಲು ರಾತ್ರಿ ಧರಣಿ ಮಾಡಿ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.
ನಾನೊಂದು ಹೇಳೋದು, ಬಿ.ಕೆ.ಹರಿಪ್ರಸಾದ್ ಒಂದು ಹೇಳೋದು, ಅದಕ್ಕೆ ಡಿಕೆಶಿ ಒಂದು ಹೇಳುತ್ತಾರೆ. ನಮ್ಮ ನಾಯಕರು ಒಂದು ಹೇಳೋದು. ಇದನ್ನೇ ಮಾಡಿಕೊಂಡು ಹೋಗೋಣ. ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ಇನ್ನು ನನ್ನ ಕೆಲಸ ಮುಗೀತು. ಈ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ. ಸಿದ್ದರಾಮಯ್ಯ ವಿಪಕ್ಷ ನಾಯಕರು. ಅವರ ಕೆಲಸ ಅವರು ಮಾಡಲಿ ನಮಗೆ ಅಭ್ಯಂತರ ಇಲ್ಲ ಎಂದು ಹೇಳಿದರು.
ಅಲ್ಲದೆ ನಾವು ವಿಪಕ್ಷದಲ್ಲಿದ್ದಾಗ ರೈತರ ಪರವಾಗಿ, ಸಾಮಾನ್ಯ ಜನರ ಪರವಾಗಿ ಹಗಲು ರಾತ್ರಿ ಸಾಕಷ್ಟು ಧರಣಿ ಮಾಡಿದ್ದೇವೆ. ಆದರೆ, ಅವರು ಈ ವಿಷಯ ಇಟ್ಟುಕೊಂಡು ಧರಣಿ ಮಾಡುತ್ತಿದ್ದಾರೆ. ಸಂತೋಷ ಅವರು ಮಾಡಿಕೊಂಡು ಹೋಗಲಿ. ಕಾಂಗ್ರೆಸ್ನವರ ಜೊತೆ ಸಿಎಂ, ಸ್ವೀಕರ್, ಸಭಾಪತಿ ಅವರು ಚರ್ಚೆ ನಡೆಸಿದ್ದಾರೆ. ಹಠ ಮಾಡಿಕೊಂಡು ಮುಂದುವರಿದರೆ ನಾನೇನು ಮಾಡಲು ಬರಲ್ಲ ಎಂದು ತಿಳಿಸಿದರು.
ಇನ್ನೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಬನ್ನಿ ಅಂತಾ ಪ್ರೀತಿಯಿಂದ ನಾನು ಸಹ ಕರೆಯುತ್ತೇನೆ. ಪ್ರೀತಿಯಿಂದ ಕರೆಯುತ್ತೀನಿ ಅಂದಾಕ್ಷಣ ಹೆದರಿಕೆಯಿಂದ ಈಶ್ವರಪ್ಪ ಕರೆದ್ರು ಅನ್ನುವುದಲ್ಲ. ಇದರಲ್ಲಿ ಆಗಿದ್ದು ಆಗಿದೆ. ಅವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಉಳಿದಿದ್ದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನು ಇಲ್ಲಿಗೆ ಮುಗಿಸಿ, ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಅನ್ನೋದು ರಾಜ್ಯದ ಜನರ ಅಭಿಪ್ರಾಯ. ಚರ್ಚೆ ಮಾಡಬೇಕು ಎಂಬುದು ನನ್ನ ಆಸೆ ಕೂಡ. ಇದಕ್ಕೆ ಅವರು ಸ್ಪಂದಿಸುತ್ತಾರೆ ಅಂತಾ ನಾನು ಭಾವಿಸುತ್ತೇನೆ. ವಿಧಾನ ಸಭೆ, ವಿಧಾನ ಪರಿಷತ್ನಲ್ಲಿ ಪಕ್ಷಗಳು ಬೇರೆ ಬೇರೆ ಇರಬಹುದು. ಸ್ನೇಹದಲ್ಲಿ ನನಗೆ ಏನೂ ತೊಂದರೆ ಇಲ್ಲ, ನನಗೆ ಎಲ್ಲರೂ ಸ್ನೇಹಿತರೇ. ಅವರ ಅಭಿಪ್ರಾಯವನ್ನು ರಾಜ್ಯಕ್ಕೆ ತಿಳಿಸಿ ಆಯಿತು. ಸೋಮವಾರದಿಂದ ಜನರ ಮಧ್ಯೆ ಹೋಗುತ್ತೇವೆ ಅಂತಾ ಡಿಕೆಶಿ ಹೇಳುತ್ತಾರೆ. ಹೊರಗೆ ಪ್ರತಿಭಟನೆ ಮಾಡಲಿ ಆದರೆ ವಿಧಾನಸಭೆ ನಡೆಸಲು ಬಿಡಲಿ ಎಂದರು.
ರಾಜ್ಯದ ಜ್ವಲಂತ ಸಮಸ್ಯೆ ನೂರಾರಿವೆ. ನಮ್ಮ ಗಮನಕ್ಕೂ ತನ್ನಿ. ನಾವು ಏನೇನು ತಿದ್ದಿಕೊಳ್ಳಬೇಕೋ ತಿದ್ದುಕೊಂಡು ಜನರ ಸಮಸ್ಯೆ ಪರಿಹಾರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ರಾಷ್ಟ್ರಧ್ವಜ ವಿಷಯದ ಬಗ್ಗೆ ಜನರ ಮಧ್ಯೆ ಹೋಗೋಣ, ನೀವು ಹೋಗಿ. ನಾವು ಹೋಗುತ್ತೇವೆ. ಜನ ತೀರ್ಮಾನ ಮಾಡುತ್ತಾರೆ. ರಾಷ್ಟ್ರಧ್ವಜ ಅಂದ್ರೆ ನನಗೆ ತಾಯಿ ಸಮಾನ. ಆ ಬಗ್ಗೆ ಅಪಮಾನ ಮಾಡಿದವರು ರಾಷ್ಟ್ರದ್ರೋಹಿ ಆಗ್ತಾರೆ ಅಂತಾ ಸ್ಪಷ್ಟಪಡಿಸಿದ್ದೇನೆ.
ವಿಧಾನಸಭೆ ಇರೋದು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸಲುವಾಗಿ. ಈಗಾಗಲೇ ಇಡೀ ಒಂದು ವಾರ ಕಳೆದು ಹೋಗಿದೆ. ಇನ್ನು ಉಳಿಯುವ ದಿನದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ಈ ಬಗ್ಗೆ ಚರ್ಚೆ ಮಾಡಿದರೆ ಸರ್ಕಾರ ನಾವು ಸಾಕಷ್ಟು ಉತ್ತರ ಕೊಡ್ತೇವೆ ಎಂದು ಹೇಳಿದ್ದಾರೆ.









