ದಸರಾಗೆ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ KSRTC
ಬೆಂಗಳೂರು : ಹಬ್ಬ ಹರಿದಿನಗಳು ಬಂದ್ರೆ ಸಾಕು ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತದೆ. ಬಸ್ ಸ್ಟಾಂಡ್ ಗಳಲ್ಲಿ ಜನಜಂಗುಳಿ , ಬಸ್ ಗಳ ಸಂಖ್ಯೆಯಲ್ಲಿ ವ್ಯತ್ಯಯ , ಈ ರೀತಿಯಾದ ಸಮಸ್ಯೆಗಳಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತೆ. ಆದ್ರೆ ಈ ಬಾರಿ ದಸರಾಗೆ ರಾಜ್ಯ ಸರ್ಕಾರವುಉ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.. ಹೌದು ದಸರಾಗೆ ಊರುಗಳಿಗೆ ಹೊರಟಿರುವ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್ ಕೊಟ್ಟಿದೆ. ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 13 ರಿಂದ 21 ರವರೆಗೂ 1000 ಹೆಚ್ಚುವರಿ ಬಸ್ ಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
RSS ಇಲ್ಲಾ ಅಂದಿದ್ರೆ ಈ ದೇಶ ಪಾಕಿಸ್ತಾನ ಆಗಿರ್ತಿತ್ತು : ಈಶ್ವರಪ್ಪ
ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಮತ್ತು ಹೊರರಾಜ್ಯಗಳಿಗೆ ಹೆಚ್ಚುವರಿಯಾಗಿ 1000 ಬಸ್ ಗಳು ಕಾರ್ಯಾಚರಣೆ ನಡೆಸಲಿರೋದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಪ್ರಮುಖವಾಗಿ ಧರ್ಮಸ್ಥಳ , ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು , ಶಿವಮೊಗ್ಗ , ಕುಂದಾಪುರ , ಹೊರನಾಡು , ಶೃಂಗೇರಿ , ಮಡಿಕೇರಿ , ಮೈಸೂರು , ಬೆಳಗಾವಿ , ಹುಬ್ಬಳ್ಳಿ , ಧಾರವಾಡ , ಕಾರವಾರ , ರಾಯಚೂರು , ಕೊಪ್ಪಳ , ಕಲಬುರಗಿ , ಯಾದಗಿರಿ , ಬೀದರ್ , ತಿರುಪತಿ , ಹೈದ್ರಬಾದ್ ಚೆನ್ನೈ ಸೇರಿದಂತೆ ಇನ್ನು ಹಲವು ಕಡೆಗಳಿಗೆ ಹೆಚ್ಚುವರಿ ಬಸ್ ಗಳನ್ನ ನಿಯೋಜಿಸಲಾಗಿದೆ. ಇನ್ನೂ ಈ ವಿಶೇಷವಾಗಿ ಕಾರ್ಯಾಚರಣೆಗೊಳಿಸಲಿರುವ ಬಸ್ ಗಳ ದರದಲ್ಲಿ ಯಾವುದೇ ರೀತಿಯಾದ ಬದಲಾವಣೆಗಳಿಲ್ಲ ಎಂದೂ ಕೂಡ ಪ್ರಕಟಿಸಲಾಗಿದೆ. ಅಲ್ಲದೇ ಮುಂಗಡ ಾಸನಗಳ ಬುಕಿಂಗ್ ಗೂ ಕೂಡ ಅವಕಾಶ ಕಲ್ಪಿಸಿಕೊಡಲಾಗಿದೆ.