ಇಂದು 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಇಡೀ ದೇಶಾದ್ಯಂತ ಮನೆ ಮಾಡಿದೆ. ಈ ಪ್ರಯುಕ್ತ ಲಹರಿ ಸಂಸ್ಥೆ ‘ಒಟ್ಟಿಗೆ ಒಂದಾಗಿ.’ ಎಂಬ ವಿಷೇಶವಾದ ಹಾಡೊಂದನ್ನು ಬಿಡುಗಡೆ ಮಾಡಿದೆ. ಇನ್ನೂ ವಿಷೇಶವೆಂದರೆ ಈ ಹಾಡು ಒಟ್ಟು 5 ಬಾಷೆಗಳಲ್ಲಿ ಮೂಡಿಬಂದಿದ್ದು, 65 ಗಾಯಕರು ಹಾಡಿಗೆ ಧನಿಯಾಗಿದ್ದಾರೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿಬಂದಿದ್ದು, ಲಹರಿ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿನ ಮೂಲಕ ಭಾರತದವರಾದ ನಾವು ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಲಾಗಿದ್ದು, ಇಡೀ ದೇಶದ ಜನರೇ ಹಾಡಿಗೆ ಫಿದಾ ಆಗಿದ್ದಾರೆ.
ಇನ್ನೂ ವಿಶೇಷ ಎಂದರೆ ಈ ಹಾಡನ್ನು ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್, ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ , ಮತ್ತು ಮಾಲಿಯಾಳಂ ನಟ ಮೋಹನ್ ಲಾಲ್ ರಿಲೀಸ್ ಮಾಡಿದ್ದಾರೆ. ಇನ್ನೂ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ , ರಾಜೇಶ್ ಕೃಷ್ಣನ್ ಹೀಗೆ ಹಲವಾರು ಗಾಯಕರು ಹಾಡನ್ನು ಹಾಡಿದ್ದು, ಹಾಡಿನ ಮೊದಲ ಸಾಲನ್ನು ಗಾನಗಂಧರ್ವ ಎಸ್ ಪಿ ಬಿ ಅವರು ಹಾಡಿದ್ದಾರೆ.
ಇನ್ನೂ ಈ ಕುರಿತಾಗಿ ಟ್ವೀಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅವರು “ ಯುನೈಟೆಡ್ ಸಿಂಗರ್ಸ್ ಚಾರಿಟೇಬಲ್ ಟ್ರಸ್ಟ್ ಒಂದು ದೊಡ್ಡ ಕಾರಣಕ್ಕಾಗಿ ಈ ಹಾಡನ್ನು ಮಾಡಿದೆ. ಈ ಕಷ್ಟದ ಸಮಯದಲ್ಲಿ ಅನೇಕ ಅದ್ಭುತ 65 ಗಾಯಕರು ಸೇರಿ ಈ ಒಟ್ಟಿಗೆ ಒಂದಾಗಿ ಎಂಬ ಹಾಡನ್ನು ತಯಾರಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿ ಹಾಡಿನ ಯುಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
ಇನ್ನೂ ಇದೇ ವಿಚಾರವಾಗಿ ತೆಲುಗು ನಟ ರಾಮ್ ಚರಣ್ ಸಹ ಟ್ವೀಟ್ ಮಾಡಿದ್ದು, “ಈ ಕಷ್ಟದ ಸಮಯದಲ್ಲಿ ಏಕತೆಯನ್ನು ತೋರಿಸುವ ‘ಒಟ್ಟಿಗೆ ಒಂದಾಗಿ..’ ಎಂಬ ಹಾಡನ್ನು ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ. 65 ಗಾಯಕರು ಒಟ್ಟಾಗಿ ಇದನ್ನು ಒಂದು ಪ್ರಮುಖ ಕಾರಣಕ್ಕಾಗಿ ಹಾಡಿದ್ದಾರೆ ಎಂದಿದ್ದಾರೆ”. ಅಲ್ಲದೇ ಎ.ಆರ್ ರೆಹಮಾನ್ ಮತ್ತು ಮೋಹನ್ ಲಾಲ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.