ಪ್ರಮುಖ ರಾಜಕೀಯ ಸುದ್ದಿಗಳು – LATEST UPDATES..!
ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ
ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ : ಹೆಚ್ ಡಿಕೆ
ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ : ಹೆಚ್ ಡಿಕೆ
ಬೆಂಗಳೂರು : ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ. ಯಾವುದೊ ಒಂದು ಸಮಾಜವನ್ನು ಚುನಾವಣೆಯಲ್ಲಿ ಸೆಳೆಯುವ ಪ್ರಯತ್ನವೂ ನನ್ನದಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮಮಂದಿರಕ್ಕೆ ಹಣ ಕೊಡದಿರುವ ಮನೆ ಮಾರ್ಕ್ ಯಾಕೆ ಎಂಬ ಕುಮಾರಸ್ವಾಮಿ ಹೇಳಿಕೆ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಬಿಜೆಪಿ ನಾಯಕರು ಹೆಚ್ ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ.
ಆದರೆ ಬೀದಿ ಬೀದಿಗಳಲ್ಲಿಕೆಲವು ಪೋಲಿಪುಂಡರು ಹಣ ಸಂಗ್ರಹ ಮಾಡುತ್ತಿದ್ದಾರಲ್ಲ ಅದಕ್ಕೆ ನನ್ನ ವಿರೋಧವಿದೆ.
ಸ್ಟಿಕ್ಕರ್ ಅಂಟಿಸುವ ಚಿಲ್ಲರೆ ರಾಜಕಾರಣ ನಾವು ಮಾಡಿಲ್ಲ. ಮಂತ್ರಿ ಅಶ್ವತ್ ನಾರಾಯಣ ಇಲ್ಲಿ ಮಲ್ಲೇಶ್ವರದಲ್ಲಿ ಕೊಟ್ಯಂತರ ರೂಪಾಯಿಯ ಜಾಗ ಹೊಡೆದುಕೊಂಡು ಬಂದರಲ್ಲ ಹಾಗಲ್ಲ ದೇವೇಗೌಡರ ಕುಟುಂಬದವರು.
ದ್ಯಾಬಲಾಪುರ ಘಟನೆಗೆ ದೇವೇಗೌಡರ ಕುಟುಂಬ ಕಾರಣರಲ್ಲ. ನಾವು ಬೆಂಕಿಹಚ್ಚುವವರಲ್ಲ. ಬೆಂಕಿ ಆರಿಸುವ ಕುಟುಂಬದವರು ದ್ಯಾಬಲಾಪುರ ಘಟನೆ ಸಂತ್ರಸ್ತರಿಗೆ ಪರಿಹಾರ ಕೊಟ್ಟವರು ನಾವು.
ಹಿಟ್ಲರನ ನಾಜಿ ಸಿದ್ದಾಂತದ ಬಗ್ಗೆ ನಾನು ಓದಿಕೊಂಡೇ ಮಾತನಾಡಿರೋದು.ಈಗ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಏನು ಎಂದು ಹೇಳಿ ನೋಡೋಣ ಎಂದು ಪ್ರಶ್ನಿಸಿದರು.
ರಾಮಮಂದಿರ | ಮಾಜಿ ಮುಖ್ಯಮಂತ್ರಿಗಳಿಗೆ ಗುಮ್ಮಿದ ಬಿಜೆಪಿ ರಾಜ್ಯಾಧ್ಯಕ್ಷ
ರಾಮಮಂದಿರ | ಮಾಜಿ ಮುಖ್ಯಮಂತ್ರಿಗಳಿಗೆ ಗುಮ್ಮಿದ ಬಿಜೆಪಿ ರಾಜ್ಯಾಧ್ಯಕ್ಷ
ವಿಜಯಪುರ : ರಾಮ ಮಂದಿರಕ್ಕೆ ದೇಣಿಗೆ ವಸೂಲಿ ವಿಚಾರವಾಗಿ ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ದೊಡ್ಡವರಾಗಿ ಇಂಥಹ ಸಣ್ಣತನದ ಮಾಡು ಆಡಬಾರದು. ಅಂತ ವ್ಯಕ್ತಿ ಬಾಯಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ರಾಮ ಏನು? ರಾಮ ಮಂದಿರ ಏನು? ಗೌರವ ಇದ್ರೆ ಕೊಡಿ ಎಂದರು. ಇನ್ನು ವಿವಾದಾತ್ಮಕ ಸ್ಥಳದಲ್ಲಿ ಕಟ್ಟುತ್ತಿರುವ ರಾಮ ಮಂದಿರಕ್ಕೆ ಹಣ ನೀಡಲ್ಲ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ರಾಮನ ಮೇಲೆ ಗೌರವ ಉಂಟು, ಸುಪ್ರೀಂ ಕೋರ್ಟ್ ಮೇಲೆ ಇಲ್ವಾ..? ಸುಪ್ರೀಂ ಕೋರ್ಟ್ ಹೇಳಿರೋದು, ಮೋದಿ ಹೇಳಿಲ್ಲ. ವಿಶ್ವಹಿಂದೂ ಪರಿಷತ್ ಕೂಡ ಹೇಳಿದ್ದಲ್ಲ, ಸುಪ್ರೀಂ ಕೋರ್ಟೇ ಟ್ರಸ್ಟ್ ರಚನೆ ಮಾಡಿರೋದು. ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನದ ಮೇಲೆ ಯಾರಿಗೆ ಗೌರವ ಇಲ್ಲವೋ ಅವರು ಇಂಥ ಮಾತು ಹೇಳ್ತಾರೆ ಎಂದರು.
ಪೋಲಿಪುಂಡರಿಂದ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ : ಹೆಚ್.ಕೆ.ಕುಮಾರಸ್ವಾಮಿ
ಪೋಲಿಪುಂಡರಿಂದ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ : ಹೆಚ್.ಕೆ.ಕುಮಾರಸ್ವಾಮಿ
ಬೆಂಗಳೂರು : ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ಆದರೆ ಬೀದಿ ಬೀದಿಗಳಲ್ಲಿಕೆಲವು ಪೋಲಿಪುಂಡರು ಹಣ ಸಂಗ್ರಹ ಮಾಡುತ್ತಿದ್ದಾರಲ್ಲ ಅದಕ್ಜೆ ನನ್ನ ವಿರೋಧವಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.
ರಾಮನ ಹೆಸರಲ್ಲಿ ,ಧರ್ಮದ ಹೆಸರಲ್ಲಿ ದೇವೇಗೌಡರ ಕುಟುಂಬ ಎಂದೂ ರಾಜಕಾರಣ ಮಾಡಿಲ್ಲ.
ಮೊಳೆ ಹೊಡೆಯುವ ಕೆಲಸ ಜೆಡಿಎಸ್ ಮಾಡುತ್ತಿಲ್ಲ. ಈಗ ದೇಶ ರಕ್ಷಣೆ ಹೆಸರೇಳಿಕೊಂಡು ಹೊರಟಿದ್ದಾರಲ್ಲ.ಇವರು ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹದ ಅಧಿಕಾರ ಇವರಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ,
ಪಾರದರ್ಶಕತೆ ಎಲ್ಲಿದೆ.ಲೆಕ್ಕಕೊಡಿ ರಾಮನ ಹೆಸರಲ್ಲಿ ಹಣ ದುರ್ಬಳಕೆ ಆಗಬಾರದು ಎಂದು ಹೇಳಿದ್ದೇನೆ.ನಾನು ಎಲ್ಲೂ ರಾಮನಿಗೆ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಣಿಗೆ ನೀಡಿ ಶ್ರೀರಾಮನನ್ನು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ : ಹೆಚ್ ಡಿಕೆ
ದೇಣಿಗೆ ನೀಡಿ ಶ್ರೀರಾಮನನ್ನು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ : ಹೆಚ್ ಡಿಕೆ
ಬೆಂಗಳೂರು : ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಆಗಾಗ್ಗೆ ಈ ಮಾತು ಹೇಳುತ್ತಿರುತ್ತೇನೆ. ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು.
“ಪ್ರಧಾನಿ ಸ್ಥಾನ ಕೊಟ್ಟಿದ್ದೂ ದೇವರೇ, ಆ ಸ್ಥಾನದಲ್ಲಿ ಮುಂದುವರಿಯುವ ಅಥವಾ ಸ್ಥಾನ ತೊರೆಯುವ ಅವಕಾಶಗಳಿದ್ದರೂ ಸ್ಥಾನ ತೊರೆಯಬೇಕೆಂಬ ನಿರ್ಣಯ ಕೊಟ್ಟಿದ್ದೂ ದೇವರೇ,” ಇದು ಶೃಂಗೇರಿ ಜಗದ್ಗುರುಗಳ ಎದುರು ದೇವೇಗೌಡರು ಪ್ರಮಾಣಿಕವಾಗಿ, ಬಹಿರಂಗವಾಗಿ ಹೇಳಿದ್ದ ಮಾತು. ಇದು ನಮ್ಮ ದೈವ ಬದ್ಧತೆಗೆ ಸಾಕ್ಷಿ. ಇದು ನಮಗಿರುವ ದೈವ ಕೃಪೆಗೂ ಸಾಕ್ಷಿ!
ಇಚ್ಛೆಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುವುದೇ ತಪ್ಪು. ಅಂಥದ್ದರಲ್ಲಿ ದೇವರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ, ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿಕ್ಕಿದೆ.ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ.ಅದರ ಫಲವನ್ನೂ ಉಣ್ಣಲಿ.
ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ








