ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿದ ಚಿರತೆ ಮರಿ
ಮೈಸೂರು: ಚಿರತೆ ಮರಿಯೊಂದು ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿ ಕ್ಷಣ ಕಾಲ ಆತಂಕ ಸೃಷ್ಟಿ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೇಳಾಲು ಗ್ರಾಮದಲ್ಲಿ ನಡೆದಿದೆ.
ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಒಳಗೆ ವರ್ಷದ ಚಿರತೆ ನುಗ್ಗಿತ್ತು. ಚಿರತೆ ಮರಿ ಪ್ಲಾಂಟ್ ನ ತಂತಿಗೆ ಸಿಲುಕಿ ಹಾಕಿಕೊಂಡು ಹೊರ ಬರಲು ಆಗದೆ ಚಿರಾಡುತ್ತಿತ್ತು.
ಇದನ್ನ ನೋಡಿದ ಸೆಕ್ಯೂರಿಟಿ ಗಾರ್ಡ್, ಮೇಲಾಧಿಕಾರಿಗಳಿಗೆ ವಿಷಯ ತಿಳಸಿದ್ದಾರೆ. ಕೂಡಲೇ ಮೇಲಾಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ, ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.