ಚಿತ್ರದುರ್ಗ: ದರ್ಶನ್ ನನ್ನ ಮಗನಂತೆ ಸಾಯಲಿ. ಅವನನ್ನು ಸಿನಿಮಾ ಇಂಡಸ್ಟ್ರಿಯಿಂದಲೇ ಬ್ಯಾನ್ ಮಾಡಬೇಕು ಎಂದು ಮೃತ ರೇಣುಕಾಸ್ವಾಮಿ (Renukaswamy) ತಾಯಿ ರತ್ನಪ್ರಭಾ ಶಾಪ ಹಾಕಿದ್ದಾರೆ.
ದರ್ಶನ ದೊಡ್ಡ ಮನುಷ್ಯನಲ್ಲ. ಆ ಗುಣ ಆತನಿಗಿಲ್ಲ. ಅವನು ಮೋಸಗಾರ. ಕಳ್ಳ. ಸಿನಿಮಾ ಇಂಡಸ್ಟ್ರಿಯಿಂದಲೇ ಆತನನ್ನು ಬ್ಯಾನ್ ಮಾಡಬೇಕು. ಆತನ ಚಿತ್ರಗಳನ್ನು ಬಿಡುಗಡೆ ಮಾಡಬಾರದು. ನನ್ನ ಮಗನಿಗೆ ಆದ ಸ್ಥಿತಿಯೇ ದರ್ಶನ್ ಮಗನಿಗೆ ಆಗಬೇಕು. ಅವರ ಕುಟುಂಬವೇ ಸರ್ವನಾಶ ಆಗಬೇಕು ಎಂದು ಶಾಪ ಹಾಕಿದ್ದಾರೆ.
ಮೆಸೇಜ್ ಮಾಡಿದ ಕಾರಣಕ್ಕೆ ಕಿಡ್ನಾಪ್ ಮಾಡಿ ಭೀಕರ ಕೊಲೆ ಮಾಡಿದ್ದಾರೆ. ಮುಖ, ಮರ್ಮಾಂಗಕ್ಕೆ ಭೀಕರ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಸರ್ಕಾರ ಸೂಕ್ತ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರವೇ ಈಗ ರೇಣುಕಾಸ್ವಾಮಿ ಪತ್ನಿಗೆ ಆಧಾರವಾಗಬೇಕು. ಅವಳು ಗರ್ಭಿಣಿ ಇದ್ದಾಳೆ. ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲವಾದರೆ, ಸರ್ಕಾರಿ ಕೆಲಸ ನೀಡಬೇಕು ಎಂದು ಮನವಿ ಮಾಡಿದ್ದಾರೆ.