ಜನರ ಪ್ರಾಣ ಮುಖ್ಯ, ಅನಿವಾರ್ಯ ಆದ್ರೆ ಲಾಕ್ ಡೌನ್ : ಆರಗ ಜ್ಞಾನೇಂದ್ರ lockdown in karnataka araga gnanendra saaksha tv
ಬೆಂಗಳೂರು : ಜನರ ಪ್ರಾಣ ಮುಖ್ಯ, ಅನಿವಾರ್ಯವಾದ್ರೆ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ನಿನ್ನೆ ರಾಜ್ಯದಲ್ಲಿ 14 ಸಾವಿರ ಕೇಸ್ ಗಳು ಹೊಸದಾಗಿ ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇಖಡಾ 10ಕ್ಕೆ ಏರಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಲಾಕ್ಡೌನ್ ಕೊನೆಯ ಅವಕಾಶ, ಲಾಕ್ಡೌನ್ ಮಾಡಬಾರದು ಅಂತಾ ಬಹಳಷ್ಟು ಜನ ಗೋಳಾಡುತ್ತಿದ್ದಾರೆ.
ಈವರೆಗೂ ಆ ಪರಿಸ್ಥಿತಿ ಬಂದಿಲ್ಲ. ಆದರೆ, ಪರಿಸ್ಥಿತಿ ಕೈ ಮೀರಿದ್ರೆ ಏನೂ ಮಾಡಲು ಸಾಧ್ಯವಿಲ್ಲ. ಜನರ ಪ್ರಾಣ ಮುಖ್ಯ, ಅನಿವಾರ್ಯ ಆದ್ರೆ ಲಾಕ್ಡೌನ್ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲಾಕ್ಡೌನ್ ಮಾಡಿದರೆ ಬಹಳ ದೊಡ್ಡ ಹೊಡೆತ ಬೀಳುತ್ತದೆ. ಕಳೆದ ಬಾರಿ ಲಾಕ್ಡೌನ್ ಮಾಡಿ ಎಷ್ಟು ಸಮಸ್ಯೆ ಅನುಭವಿಸಿದ್ದೇವೆ ಅಂತಾ ಗೊತ್ತಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಲಾಕ್ಡೌನ್ ಶುರುವಾಗಿದೆ. ನಮ್ಮಲ್ಲಿ ಆ ದಿನಗಳು ಬರದೇ ಇರಲಿ ಎಂದು ಹಾರೈಸೋಣ ಎಂದರು.