Madhugiri : ಈಜಲು ತೆರಳಿದ್ದ ಇಬ್ಬರು ಬಾಲಕಿಯರು ಜಲಸಮಾಧಿ..
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜೀವನದಿ ಜಯಮಂಗಲ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕಿಯರು ನೀರು ಪಾಲಾಗಿರುವ ಘಟನೆ ನಡೆದಿದೆ.
ವೀರಾಪುರ ಗ್ರಾಮದ ಬಳಿ ಹರಿಯುವ ಜಯಮಂಗಲ ನದಿಗೆ ಕಟ್ಟಿದ್ದ ಚೆಕ್ ಡ್ಯಾಮ್ ನಲ್ಲಿ ಐವರು ಬಾಲಕಿಯರು ಈಜಲು ತೆರಳಿದ್ದರು. ಈ ಪೈಕಿ ಅಲ್ಲಿಯೆ ಸ್ಥಳದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ಮೂವರು ಬಾಲಕಿಯರನ್ನ ರಕ್ಷಿಸಿದ್ದಾರೆ. ಆದರೇ ಇಬ್ಬರು ಬಾಲಕಿಯರು ಈಜು ಬಾರದೆ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳನ್ನ ಕೆಂಪಾಪುರ ಗ್ರಾಮದ ಬಾಬು ಮತ್ತು ಲಕ್ಷ್ಮಿನಾರಾಯಣ್ ಅವರ ಮಕ್ಕಳಾಗಿದ್ದ 8 ವರ್ಷದ ಪ್ರಿಯಾಂಕ ಮತ್ತು 9 ವರ್ಷದ ಬಿಂದು ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಹೋದರಿಯರಾಗಿದ್ದಾರೆ. ಕೊಡಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Madhugiri: Two girls who had gone swimming were drowned in water.