108 ಅಡಿ ಎತ್ತರದ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಮಧ್ಯಪ್ರದೇಶ
ಮಧ್ಯಪ್ರದೇಶದಲ್ಲಿ ಗುರು ಆದಿ ಶಂಕರಾಚಾರ್ಯ ಅವರ 108 ಅಡಿಯ ಬೃಹತ್ ಪ್ರತಿಮೆ ನಿರ್ಮಿಸಲು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಮುಂದಾಗಿದೆ.
ಸುಮಾರು ಎರಡು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್ ಟ್ರಸ್ಟಿಗಳೊಂದಿಗೆ ಚರ್ಚಿಸಿದ್ದಾರೆ.
StatueOfOneNess ಎಕತೆಯ ಪ್ರತಿಮೆ ಎಂದು ಕರೆಯಲ್ಪಡುವ 108 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿಯನ್ನು ಮಾಂಧಾತ ಗುಡ್ಡದ ಮೇಲೆ 54 ಎತ್ತರದ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗುವುದು. ಮತ್ತು 7.5 ಹೆಕ್ಟೇರ್ ಪ್ರದೇಶದಲ್ಲಿ ಶಂಕರ ಮ್ಯೂಸಿಯಂ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಆದರೆ ಇದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ರಾಜ್ಯ ತೀವ್ರ ಸಾಲದ ಸುಳಿಯಲ್ಲಿ ಸಿಲುಕಿರುವ ಈ ಸಮಯದಲ್ಲಿ ಈ ಯೋಜನೆ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಬಜೆಟ್ನಲ್ಲಿ ಹಣ ಮೀಸಲಾದರೆ ನಂತರ ಚರ್ಚಿಸಬಹುದು ಎಂದು ಕಾಂಗ್ರೆಸ್ ಮುಖಂಡ ಕಮಲ್ನಾಥ್ ಹೇಳಿದ್ದಾರೆ.
ರಾಜ್ಯ ಈಗಾಗಲೇ 2.56 ಲಕ್ಷ ಕೋಟಿ ಸಾಲವನ್ನ ಹೊಂದಿದೆ. ಆದರೇ ಶಿವರಾಜ್ ಸರ್ಕಾರ ಒಂದಲ್ಲ ಒಂದು ರೀತಿಯಿಂದ ನಿತ್ಯ ಸಾಲ ಪಡೆಯುತ್ತಿದೆ. ಈ ಕುರಿತು ಶ್ವೇತ ಪತ್ರ ಹೊರಡಿಸುವಂತೆ ಕಾಂಗ್ರೇಸ್ ಪಟ್ಟು ಹಿಡಿದಿದೆ.
ऐसा होगा #अद्वैत_वेदांत_संस्थान स्वरूप।@MinOfCultureGoI@minculturemp@DM_Khandwa#StatueofOneness pic.twitter.com/WGOIVD3TpL
— Religious Trusts & Endowments Department, MP (@TrustsReligious) January 11, 2022
U P ಚುನಾವಣೆ – ಮುಖ್ಯಸ್ಥೆ ಮಾಯಾವತಿ ಸ್ಪರ್ಧಿಸುವುದಿಲ್ಲ ಎಂದ ಪಕ್ಷದ ವಕ್ತಾರರು