ಉಗ್ರ ಯಾಕುಬ್ ಮೆನನ್ ಸಮಾಧಿಗೆ ಅಲಂಕಾರ – ತನಿಖೆಗೆ ಆದೇಶ…
1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆನನ್ ಸಮಾಧಿಯನ್ನ ಅಲಂಕಾರ ಮಾಡಿ ಶೃಂಗಾರಗೊಳಿಸುರುವ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತನಿಖೆಗೆ ಆದೇಶಿಸಿದ್ದಾರೆ.
ಮಯಂಬೈ ಬ್ಲಾಸ್ಟ್ ಅಪರಾಧಿಯ ಸಮಾಧಿಯ ಮೇಲೆ ಸ್ಮಾರಕ ನಿರ್ಮಿಸಲು ಮಾಜಿ ಮಹಾ ವಿಕಾಸ್ ಅಘಾಡಿ ಸರ್ಕಾರ ಅನುಮತಿ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.
ಯುಕೂಬ್ ಸಮಾಧಿಯನ್ನು ಸುಂದರಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಟಿವಿ ಚಾನೆಲ್ಗಳಲ್ಲಿ ಸುದ್ದಿ ಕಾಣಿಸಿಕೊಂಡ ನಂತರ ಸಿಎಂ ಶಿಂಧೆ ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಮುಂಬೈ ಬಾಂಬ್ ಸ್ಫೋಟ ಅಫರಾಧಿ ಯೂಕೂಬ್ ಮೆಮನ್ ಸಮಾಧಿಗೆ ಅಲಂಕಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಶಿಂಧೆ ಘೋಷಿಸಿದ್ದಾರೆ. ಯುಕೂಬ್ ಅವರ ಸಮಾಧಿಯನ್ನು ಗ್ರಾನೈಟ್ನಿಂದ ನಿರ್ಮಿಸಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿತ್ತು.
ಸ್ಫೋಟದ ಅಪರಾಧಿಯ ಸಮಾಧಿಯ ನವೀಕರಣದ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಮಧ್ಯಪ್ರವೇಶಿಸಿ ಎಲ್ ಇ ಡಿ ದೀಪಗಳನ್ನು ತೆಗೆದುಹಾಕಿದ್ದಾರೆ.