ಕೊರೊನಾ ಹಾವಳಿಯಿಂದ ಈಗಾಗಲೇ ಜನ ಜೀವನ ಅಸ್ತವ್ಯಸ್ತವಾಗಿರುವುದು ಒಂದೆಡೆಯಾದ್ರೆ, ದೇವಾಲಯಗಳ ಮೇಲೂ ಕೊರೊನಾ ಕರಿನೆರಳು ಆವರಿಸಿದೆ. ಅನೇಕ ದೇವಾಲಯಗಳು ಇನ್ನೂವರೆಗೂ ಬಂದ್ ಆಗಿದ್ರೆ, ಇನ್ನೂ ಕೆಲ ದೇವಾಲಯಗಳಲ್ಲಿ ಶರತ್ತುಗಳ ಮೇಲೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದರಲ್ಲಿ ವಿಶ್ವ ಪ್ರಸಿದ್ಧ ಮಲೆ ಮಹಾದೇಶ್ವರನ ಸನ್ನಿಧಾನವೂ ಒಂದು.
ಹೌದು ಇತರೇ ದೇವಾಲಯಗಳಂತೆಯೇ ಮಲೆ ಮಹಾದೇಶ್ವರನ ಸನ್ನಿದಾನದಲ್ಲೂ ಕೇವಲ ದರ್ಶನಕ್ಕೆ ಮಾತ್ರ ಅನುವು ಮಾಡಿಕೊಡಲಾಗಿತ್ತು. ಉಳಿದಂತೆ ಯಾವುದೇ ಸೇವೆಗಳಿಗೆ ಅವಕಾಶವಿರಲಿಲ್ಲ. ಇನ್ನೂ ಬಾನುವಾರ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶವಿರಲಿಲ್ಲ. ಆದ್ರೆ ಇದೀಗ ಮಲೆ ಮಹಾದೇಶ್ವರನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಭಕ್ತಾಧಿಗಳಿಗೆ ಭಾನುವಾರವೂ ಮಾದಪ್ಪನ ದರ್ಶನ ಇರಲಿದೆ. ಭಕ್ತರು ಪ್ರತಿನಿತ್ಯ ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ದರ್ಶನ ಪಡೆಯಬಹುದಾಗಿದೆ. ಇನ್ನೂ ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಸಂಜೆ 4ರಿಂದ ಮುಂಜಾನೆ 6ರ ವರೆಗೂ ವಿಧಿಸಲಾಗಿದ್ದ ಕಫ್ರ್ಯೂವನ್ನು ಜಿಲ್ಲಾಡಳಿತ ಈಗಾಗಲೇ ತೆರವುಗೊಳಿಸಿದೆ. ಇದರ ಬೆನ್ನಲ್ಲೇ ದೇವಾಲಯದ ಆಡಳಿತ ಮಂಡಳಿ ಭಕ್ತಾಧಿಗಳಿಗೆ ಗುಡ್ ನ್ಯೂಸ್ ನೀಡಿದೆ.