Man ki baat | ದೇಶದ ಮೂಲೆ ಮೂಲೆಯಲ್ಲಿ ಏಕತೆಗಾಗಿ ಓಟ
ನವದೆಹಲಿ : ನಾಳೆ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಇದು ಸರ್ದಾರ್ ವಲ್ಲಭ ಭಾಯಿ ಪಟೇಲರ ಜಯಂತಿಯ ಶುಭ ಸಂದರ್ಭವಾಗಿದ್ದು, ದೇಶದ ಮೂಲೆ ಮೂಲೆಯಲ್ಲಿ ಏಕತೆಗಾಗಿ ಓಟ ಆಯೋಜಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದು, ಮನ್ ಕಿ ಬಾತ್ ಮಾಸಿಕ ಆಕಾಶವಾಣಿ ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡರು.
ನಾಳೆ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಇದು ಸರ್ದಾರ್ ವಲ್ಲಭ ಭಾಯಿ ಪಟೇಲರ ಜಯಂತಿಯ ಶುಭ ಸಂದರ್ಭವಾಗಿದ್ದು, ದೇಶದ ಮೂಲೆ ಮೂಲೆಯಲ್ಲಿ ಏಕತೆಗಾಗಿ ಓಟ ಆಯೋಜಿಸಲಾಗುತ್ತಿದೆ.
ಇದು ದೇಶದಲ್ಲಿ ಏಕತೆಯ ಸೂತ್ರವನ್ನು ಬಲಿಷ್ಠಗೊಳಿಸುತ್ತದೆ, ಯುವಜನತೆಗೆ ಪ್ರೇರಣೆ ನೀಡುತ್ತದೆ ಎಂದರು.
![Man ki baat Race for unity PM narendra modi](http://saakshatv.com/wp-content/uploads/2022/10/patel.jpg)
ನವೆಂಬರ್ 15ರಂದು ದೇಶ ಬುಡಕಟ್ಟು ಜನರ ಗೌರವ ದಿನ ಆಚರಿಸುತ್ತಿದೆ.
ಕಳೆದ ವರ್ಷದಿಂದ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಬುಡಕಟ್ಟು ಪರಂಪರೆ ಮತ್ತು ಗೌರವದ ಆಚರಣೆ ಆರಂಭಿಸಲಾಗಿದೆ.
ಭಗವಾನ್ ಬಿರ್ಸಾ ಮುಂಡಾ ಸ್ವಾತಂತ್ರ್ಯ ಹಾಗೂ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗಾಗಿ ಜೀವನ ತ್ಯಾಗ ಮಾಡಿದ್ದರು.
ಹಾಗೆಯೇ, ಧರತೀ ಆಬಾ ಬಿರ್ಸಾ ಮುಂಡಾ ಅವರಿಂದ ಕಲಿಯುವಂತಹದ್ದು ಸಹ ಬಹಳಷ್ಟಿದೆ ಎಂದು ಹೇಳಿದರು.